ಬಾಗಲಕೋಟೆ:
ವಕೀಲೆ ಮೇಲೆ ಸಾರ್ವಜನಿಕವಾಗಿ ಥಳಿಸಿದ ಆರೋಪದ ಮೇಲೆ ಮಹಾಂತೇಶ ಚೊಳಚಗುಡ್ಡ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಹಲ್ಲೆ ಮಾಡಿ, ಜಾಡಿಸಿ ಒದ್ದ ವಿಡಿಯೊ ವೈರಲ್ ಆಗಿದೆ.
ವಿನಾಯಕ ನಗರದಲ್ಲಿ ಶುಕ್ರವಾರ ಈ ಘಟನೆ ನಡೆದಿದ್ದು, ವಕೀಲೆಯ ಸಂಗೀತಾ ಶಿಕ್ಕೇರಿ ಪತಿ ಸಹಾಯಕ್ಕೆ ಮನವಿ ಮಾಡಿದರೂ ಜನರು ನೆರವಿಗೆ ಬಂದಿಲ್ಲ.
Woman advocate Sangeetha was thrashed by her neighbour Mahantesh near Vinayak Nagar in Bagalkote of #Karnataka. According police both had personal enimity on a civil dispute case. Sangeetha undergoing treatment at hospital. pic.twitter.com/RKsGzV4ihW
— Sagay Raj P || ಸಗಾಯ್ ರಾಜ್ ಪಿ (@sagayrajp) May 14, 2022
ಸಂಗೀತಾ ಅವರನ್ನು ಬಾಗಲಕೋಟೆ ಜಿಲ್ಲಾ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ.
ಆರೋಪಿ ಮಹಾಂತೇಶ ನವನಗರದ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಫೋಟೊಗ್ರಾಫರ್ ಆಗಿದ್ದಾರೆ.
ಇಂದು(14/05/22) ಬಾಗಲಕೋಟೆ ಪಟ್ಟಣದಲ್ಲಿ ಮಹಿಳೆಯೊಬ್ಬರ ಮೇಲೆ ವ್ಯಕ್ತಿಯೊಬ್ಬ ಹಲ್ಲೆ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ದಾಳಿಕೋರನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಸದ್ಯ ಅವರು ನ್ಯಾಯಾಂಗ ಬಂಧನದಲ್ಲಿದ್ದಾರೆ.
— SP Bagalkote (@SpBagalkote) May 14, 2022
ಸಂಗೀತ ಶಿಕ್ಕೇರಿ ಹಾಗೂ ಮಹಾಂತೇಶ ಚೊಳಚಗುಡ್ಡ ಅಕ್ಕಪಕ್ಕದ ಮನೆಯ ನಿವಾಸಿಗಳು. ಸಂಗೀತಾ ಅವರ ಮನೆಯನ್ನು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜು ನಾಯ್ಕರ ಖರೀದಿಸಿದ್ದಾರೆ. ಕುಟುಂಬದವರ ಗಮನಕ್ಕೆ ತಾರದೇ ನಮ್ಮ ದೊಡ್ಡಪ್ಪ ಮನೆಯನ್ನು ಮಾರಾಟ ಮಾಡಿದ್ದಾರೆ. ವಿವಾದ ನ್ಯಾಯಾಲಯದಲ್ಲಿದೆ. ಆದರೂ ರಾಜು ನಾಯ್ಕರ್ ತಮ್ಮ ಪ್ರಭಾವ ಬಳಸಿ ಮನೆ ಖಾಲಿ ಮಾಡಲು ಕಿರುಕುಳ ನೀಡುತ್ತಿದ್ದಾರೆ ಎಂದು ಸಂಗೀತಾ ಶಿಕ್ಕೇರಿ ಎರಡು ದಿನಗಳ ಹಿಂದೆ ಪತ್ರಿಕಾಗೋಷ್ಠಿ ನಡೆಸಿ ಆರೋಪಿಸಿದ್ದರು. ಈಗ ನಡೆದಿರುವ ಹಲ್ಲೆಯ ಹಿಂದೆಯೂ ಅವರದ್ದೇ ಕೈವಾಡ ಇದೆ ಎಂದು ಅಳಲು ತೋಡಿಕೊಂಡಿದ್ದಾರೆ.
ಈ ಆರೋಪವನ್ನು ರಾಜು ನಾಯ್ಕರ್ ನಿರಾಕರಿಸಿದ್ದಾರೆ.