ಚಿಕ್ಕಬಳ್ಳಾಪುರ : ಎವಡ್ರಾ ಮಮ್ಮಲ್ನಿ ಆಪೇದಿ ಬುಜ್ಜಿ (ಯಾರು ನಮ್ಮನ್ನು ತಡೆಯೋರು ಬುಜ್ಜಿ) ಅಂತಿದ್ರಲ್ಲಾ, ಬೃಹತ್ ಪ್ರತಿಭಟನೆಗೆ ಬಂದಿರೋರೆ ನಿಮ್ಮನ್ನು ತಡೆಯುತ್ತಾರೆ ನೋಡ್ತಾ ಇರೀ. ನಿಮ್ಮ ಡ್ರಾಮಾಗಳಿಂದ ಜನರು ರೋಸಿ ಹೋಗಿದ್ದಾರೆ ಎಂದು ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ಕೋಲಾರ ಸಂಸದ ಮುನಿಸ್ವಾಮಿ ಕಿಡಿಕಾರಿದರು.
ಬಿಜೆಪಿ ವತಿಯಿಂದ ನಡೆದ ರಾಜ್ಯ ಸರಕಾರದ ವಿರುದ್ಧದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಬಿಗ್ಬಾಸ್ನಲ್ಲಿದ್ದೆ, ನಾವೆಲ್ಲ ಸಿಡಿದಿದ್ದಕ್ಕೆ ವಾಪಸ್ ಬಂದೆ. ಇನ್ನೊಂದೆರೆಡು ದಿನ ಬಿಗ್ಬಾಸ್ನಲ್ಲಿ ಇರಬೇಕಿತ್ತು. ಯಾವ ಆಫೀಸ್ನಲ್ಲಿ ನೋಡಿದ್ರೂ ಅವರ ಬೆಂಬಲಿಗರಿಂದ ಲಂಚಾವತಾರ ನಡೀತಿದೆ. ಬಿಗ್ಬಾಸ್ಗೆ ಹೋಗಿ ಸಿಎಂ ಸಿದ್ದರಾಮಯ್ಯ ಮತ್ತು ಡಿ ಕೆ ಶಿವಕುಮಾರ್ ಅವರನ್ನು ಹೊಗಳೋ ಕೆಲಸವನ್ನು ಮಾಡಿದ್ದಾರೆ ಎಂದರು.
ಮಗಳ ಮೇಲೆ ಅತ್ಯಾಚಾರಕ್ಕೆ ಕುಮ್ಮಕ್ಕು ನೀಡಿದ ತಾಯಿ..! ‘ತಾಯ್ತನಕ್ಕೆ ಕಳಂಕ’ ಎಂದ ಹೈಕೋರ್ಟ್
ಇಲ್ಲಿ ಕ್ರಷರ್ಗಳಿಂದ ತಿಂಗಳಿಗೆ 4 ಲಕ್ಷ ರೂ. ವಸೂಲಿ ಮಾಡುತ್ತಿದ್ದಾರೆ. ಶಾಸಕರ ಬೆಂಬಲಿಗರು ಪ್ರತಿ ಆಫೀಸ್ನಲ್ಲಿ ವಸೂಲಿಗೆ ಇಳಿದಿದ್ದಾರೆ. ಇದನ್ನೆಲ್ಲಾ ನೋಡಿ ಜನರ ಎಂಥವನನ್ನು ಗೆಲ್ಲಿಸಿಬಿಟ್ವಿ ಎಂದು ನೊಂದುಕೊಳ್ಳುತ್ತಿದ್ದಾರೆ. ನಾನು ಇಡೀ ರಾಜ್ಯದಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಅನುದಾನವನ್ನು ತಂದ ಶಾಸಕರು ಮತ್ತು ಸಚಿವರನ್ನು ನೋಡಿದ್ದೇನೆ. ಆದರೆ, ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಇದೇ ಮೊದಲ ಬಾರಿಗೆ ತಂದ ಅನುದಾನವನ್ನು ವಾಪಸ್ ಕೊಡುತ್ತಿರುವವರನ್ನು ನೋಡುತ್ತಿದ್ದೇನೆ ಎಂದು ಹೇಳಿದರು.
The post Muniswami: ಯಾವ ಆಫೀಸ್’ನಲ್ಲಿ ನೋಡಿದ್ರೂ ಲಂಚಾವತಾರ ನಡೀತಿದೆ: ಮುನಿಸ್ವಾಮಿ appeared first on Ain Live News.