ಬೆಂಗಳೂರು:
ಖ್ಯಾತ ಭಾರತೀಯ ವಿಜ್ಞಾನಿ ಮತ್ತು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಎಂ.ಆರ್.ಎಸ್.ರಾವ್ ಎಂದೇ ಖ್ಯಾತರಾದ ಮಂಚನಹಳ್ಳಿ ರಂಗಸ್ವಾಮಿ ಸತ್ಯನಾರಾಯಣ ರಾವ್ ಆಗಸ್ಟ್ 13ರಂದು ಹೃದಯಾಘಾತದಿಂದ ನಿಧನರಾಗಿದ್ದಾರೆ.
ಬೆಂಗಳೂರಿನ ಟಾಟಾ ನಗರದಲ್ಲಿರುವ ತಮ್ಮ ನಿವಾಸದಲ್ಲಿ ಭಾನುವಾರ ಸಂಜೆ 7 ಗಂಟೆಗೆ ಹೃದಯಾಘಾತದಿಂದ ನಿಧನರಾದರು.
ಅವರ ಶಿಸ್ತು, ವೈಜ್ಞಾನಿಕ ಜ್ಞಾನ, ತಾಳ್ಮೆ, ಮೃದು ಮಾತಿನ ಸ್ವಭಾವಗಳಿಂದ ಮತ್ತು ಅನೇಕ ಪಿಎಚ್ಡಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶಿಯಾಗಿ ಹೆಸರುವಾಸಿಯಾಗಿದ್ದಾರೆ, ಪತ್ನಿ ಪದ್ಮ ಎಸ್ ರಾವ್ ಮತ್ತು ಇಬ್ಬರು ಪುತ್ರರಾದ ಶರತ್ ಮತ್ತು ರೋಹನ್ ಅವರನ್ನು ಅಗಲಿದ್ದಾರೆ.
ವಿಜ್ಞಾನ ಮತ್ತು ಎಂಜಿನಿಯರಿಂಗ್ ಕ್ಷೇತ್ರಕ್ಕೆ ನೀಡಿದ ಕೊಡುಗೆಗಳಿಗಾಗಿ 2010 ರಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.