Home ಬೆಂಗಳೂರು ನಗರ ಸ್ವಾರ್ಥ ರಹಿತ ರಾಜಕಾರಿಣಿ ಕೆ. ಎಚ್ ಪಾಟೀಲ

ಸ್ವಾರ್ಥ ರಹಿತ ರಾಜಕಾರಿಣಿ ಕೆ. ಎಚ್ ಪಾಟೀಲ

50
0

ಬೆಂಗಳೂರು:

ರಾಜಕೀಯ ದೂರದರ್ಶಿತ್ವವುಳ್ಳ ಕೆ. ಎಚ್ ಪಾಟೀಲ ಅವರು ತಮಗಾಗಿ ಮತ್ತು ಕುಟುಂಬಕ್ಕಾಗಿ ಯಾವುದೇ ಅಸ್ತಿಯನ್ನು ಮಾಡದೇ ಕೇವಲ ಸಮಾಜದ ಅಭಿವೃದ್ಧಿಗೆ ಶ್ರಮಿಸಿದವರು ಎಂದು ತುಮಕೂರು ಸಂಸದ ಜಿ. ಎಸ್ ಬಡವರಾಜ್ ಅವರು ಇಂದಿಲ್ಲಿ ಹೇಳಿದರು. ದಿ. ಕೆ ಎಚ್ ಪಾಟೀಲ ಅವರ 97ನೇ ಜಯಂತೋತ್ಸವದ ಅಂಗವಾಗಿ ಗಾಂಧೀಭವನದಲ್ಲಿ ಅವರ ಅಭಿಮಾನಿ ಬಳಗದವರು ಆಯೋಜಿಸಿದ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.

ತಮ್ಮ ಭಾಷಣದುದ್ದಕ್ಕೂ ತಾಮ್ಮೊಂದಿಗೆ ಕೆ ಎಚ್ ಪಾಟೀಲ ಅವರ ಒಡನಾಟವನ್ನು ಸ್ಮರಿಸಿದ ಬಸವರಾಜ್ ಅವರು ಅವರ ವ್ಯಕ್ತಿತ್ವಕ್ಕೆ ಒಂದು ಶಕ್ತಿ ಇತ್ತು, ಸಾಮರ್ಥ್ಯ ಇತ್ತು ಎಂದರು. ಇಂದಿರಾ ಗಾಂಧಿ ಅವರ ಚಿಕ್ಕಮಗಳೂರು ಚುನಾವಣೆಯನ್ನು ಸ್ಮರಿಸಿದ ಅವರು ಅಂದು ವೀರೇಂದ್ರ ಪಾಟೀಲ ರ ಪರವಾಗಿ ಏಕಾಂಗಿಯಾಗಿ ಚುನಾವಣಾ ಪ್ರಚಾರ ಮತ್ತು ಹೋರಾಟವನ್ನು ಸ್ಮರಿಸಿಕೊಂಡರು, ಕೆ ಎಚ್ ಪಾಟೀಲ ರಂತವರು ಮುಖ್ಯಮಂತ್ರಿ ಯಾಗುವುದು ರಾಜಕೀಯ ಕಾರಣಗಳಿಗಾಗಿ ಕೈ ತಪ್ಪಿತು ಎಂದು ತಮ್ಮ ಮನದಾಳದ ಮಾತನ್ನು ಹೇಳಿಕೊಂಡರು.

ಸಮಾರಂಭದಲ್ಲಿ ಮುಖ್ಯ ಅತಿಥಿ ಯಾಗಿ ಪಾಲ್ಗೊಂಡಿದ್ದ ನ್ಯಾಯಮೂರ್ತಿ ವಿಶ್ವನಾಥ್ ಶೆಟ್ಟಿ ಅವರು ಕೆ ಎಚ್ ಪಾಟೀಲ ರಂತ ಸಾವಿರ ಸಾವಿರ ಜನ ಹುಟ್ಟಿಬಂದರೆ ಉತ್ತಮ ಸಮಾಜ ನಿರ್ಮಾಣ ವಾಗುತ್ತದೆ ಎಂದು ಹೇಳಿದರು. ಅಪರೂಪದ ವ್ಯಕ್ತಿಯಾಗಿದ್ದ ಕೆ ಎಚ್ ಪಾಟೀಲ ರ ಸಮಾಜ ಸೇವೆಯನ್ನು ಕೊಂಡಾಡಿದ ಅವರು ಅಪಾರ ಜನಪರ ಕಾಳಜಿ ಹೊಂದಿದ್ದರು ಎಂದು ನೆನೆದರು.

ಸಮಾರಂಭದಲ್ಲಿ ಮಾಜಿ ಸಭಾಪತಿ ವಿ . ಆರ್ ಸುದರ್ಶನ್, ಶಾಸಕರಾದ ಅಮರೇಗೌಡ ಬಯ್ಯಾಪುರ, ಮಹಾಂತೇಶ್ ಕೌಜಲಗಿ, ಮಾಜಿ ಉಪ ಮಹಾಪೌರ ಸುಂದರರಾಜುಲು ಮತ್ತು ಇತರ ಹಲವಾರು ಗಣ್ಯರು ಭಾಗವಸಿಸಿದ್ದರು. ಡಾ ಕೆ. ದಿವ್ಯಾನಂದ ಸ್ವಾಗತಿಸಿದರು

LEAVE A REPLY

Please enter your comment!
Please enter your name here