ಗೋಪಾಲಗೌಡ ಜಂಕ್ಷನ್ ಬಳಿ ಭಾನುವಾರ ಮುಂಜಾನೆ ನಿಯಂತ್ರಣ ತಪ್ಪಿದ ದ್ವಿಚಕ್ರ ವಾಹನವೊಂದು ಪಾದಚಾರಿ ಮಾರ್ಗಕ್ಕೆ ಡಿಕ್ಕಿ ಹೊಡೆದಿದ್ದು, ಪರಿಣಾಮ 26 ವರ್ಷದ ಯುವಕನೊಬ್ಬ ಮೃತಪಟ್ಟಿರುವ ಘಟನೆ ಭಾನುವಾರ ನಡೆದಿದೆ. ಬೆಂಗಳೂರು: ಗೋಪಾಲಗೌಡ ಜಂಕ್ಷನ್ ಬಳಿ ಭಾನುವಾರ ಮುಂಜಾನೆ ನಿಯಂತ್ರಣ ತಪ್ಪಿದ ದ್ವಿಚಕ್ರ ವಾಹನವೊಂದು ಪಾದಚಾರಿ ಮಾರ್ಗಕ್ಕೆ ಡಿಕ್ಕಿ ಹೊಡೆದಿದ್ದು, ಪರಿಣಾಮ 26 ವರ್ಷದ ಯುವಕನೊಬ್ಬ ಮೃತಪಟ್ಟಿರುವ ಘಟನೆ ಭಾನುವಾರ ನಡೆದಿದೆ.
ರಾಜಾಜಿನಗರ ಸಮೀಪದ ಪ್ರಕಾಶ್ ನಗರದ ನಿವಾಸಿ ಅಲೆಕ್ಸ್ ತಂಬಿರಾಜ್ ಮೃತ ವ್ಯಕ್ತಿಯಾಗಿದ್ದಾರೆ ಕಾರ್ಖಾನೆಯೊಂದರಲ್ಲಿ ಸಿಎನ್ ಸಿ ಮೆಷಿನ್ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದ.
ಘಟನೆಯಲ್ಲಿ ಅಲೆಕ್ಸ್ ಅವರ ಸ್ನೇಹಿತನಿಗೆ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕ್ರಿಸ್ ಮಸ್ ಹಿನ್ನೆಲೆಯಲ್ಲಿ ಪ್ರಾರ್ಥನೆ ಸಲ್ಲಿಸಲು ಅಲೆಕ್ಸ್ ಹಾಗೂ ಸತೀಶ್ ಚರ್ಚ್’ಗೆ ಹೋಗುತ್ತಿದ್ದರು, ಈ ವೇಳೆ ಅಪಘಾತ ಸಂಭವಿಸಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.