ಬಂಧನದಿಂದ ತಪ್ಪಿಸಿಕೊಳ್ಳಲು 28 ವರ್ಷದ ದರೋಡೆಕೋರನೊಬ್ಬ 20 ಕೆ.ಜಿ ತೂಕ ಕಳೆದುಕೊಂಡಿದ್ದಾನೆ ಮತ್ತು ಪೋಲಿಸ್ ಠಾಣೆಯ ಸಮೀಪವೇ ಬಾಡಿಗೆಗೆ ಮನೆ ಪಡೆದಿದ್ದಾನೆ. ಆದರೆ, 45 ದಿನಗಳ ನಂತರ ಆತನನ್ನು ಬಂಧಿಸಲಾಯಿತು. ಬೆಂಗಳೂರು: ಬಂಧನದಿಂದ ತಪ್ಪಿಸಿಕೊಳ್ಳಲು 28 ವರ್ಷದ ದರೋಡೆಕೋರನೊಬ್ಬ 20 ಕೆ.ಜಿ ತೂಕ ಕಳೆದುಕೊಂಡಿದ್ದಾನೆ ಮತ್ತು ಪೋಲಿಸ್ ಠಾಣೆಯ ಸಮೀಪವೇ ಬಾಡಿಗೆಗೆ ಮನೆ ಪಡೆದಿದ್ದಾನೆ. ಆದರೆ, 45 ದಿನಗಳ ನಂತರ ಆತನನ್ನು ಬಂಧಿಸಲಾಯಿತು.
ದರೋಡೆಕೋರ ಮಂಜುನಾಥ ಅಲಿಯಾಸ್ ಜಿಮ್ ಮಂಜ ಕತ್ರಿಗುಪ್ಪೆಯ ಸಿದ್ಧಾರ್ಥ ಲೇಔಟ್ ನಿವಾಸಿ. ಡಿಸೆಂಬರ್ 4 ರಂದು ಪೂರ್ಣಪ್ರಜ್ಞಾ ಲೇಔಟ್ನಲ್ಲಿ ಮಹಿಳೆಯೊಬ್ಬರ ಸುಮಾರು 2.2 ಲಕ್ಷ ಮೌಲ್ಯದ 45 ಗ್ರಾಂ ಚಿನ್ನದ ಸರವನ್ನು ದೋಚಿದ್ದನು. ಸಂತ್ರಸ್ತೆ ರುಕ್ಮಿಣಿ ಅವರು ಸಿಕೆ ಅಚ್ಚುಕಟ್ಟು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಜಿಮ್ ವ್ಯಕ್ತಿಯೊಬ್ಬ ದರೋಡೆ ಮಾಡುತ್ತಿರುವುದು ಕಂಡುಬಂದಿದೆ.
ಬಳಿಕ ತೂಕವನ್ನು ನಿಯಂತ್ರಿಸುವಲ್ಲಿ ಸಿದ್ಧಹಸ್ತನಾಗಿದ್ದ ಮಂಜುನಾಥ್, ತನ್ನ ಲುಕ್ ಅನ್ನು ಬದಲಾಯಿಸಿಕೊಳ್ಳಲು ತನ್ನ ತೂಕವನ್ನು ಕಡಿಮೆ ಮಾಡಿದ್ದಾನೆ ಮತ್ತು ತೆಳ್ಳಗೆ ಕಾಣುತ್ತಿದ್ದನು. ಇದು ಸಿಸಿಟಿವಿ ದೃಶ್ಯಾವಳಿಯಲ್ಲಿರುವ ವ್ಯಕ್ತಿಗಿಂತ ಸಂಪೂರ್ಣವಾಗಿ ಭಿನ್ನವಾಗಿತ್ತು. ಬಳಿಕ ಆತ ಪೊಲೀಸ್ ಠಾಣೆಗೆ ಸಮೀಪವಿರುವ ಸ್ಥಳದಲ್ಲಿ ಮನೆ ಬಾಡಿಗೆಗೆ ಪಡೆದಿದ್ದಾನೆ ಮತ್ತು ಠಾಣೆಯ ಹೊರಗಿನ ನಿರ್ದಿಷ್ಟ ಟೀ ಸ್ಟಾಲ್ನಲ್ಲಿ ನಿಯಮಿತವಾಗಿ ಚಹಾ ಸೇವಿಸುತ್ತಿದ್ದನು.
ಯಾವುದೇ ಪೊಲೀಸರು ತನ್ನನ್ನು ಅನುಮಾನದಿಂದ ನೋಡುವರೇ ಎಂಬುದನ್ನು ಕಂಡುಹಿಡಿಯಲು ಆತ ನಿಯಮಿತವಾಗಿ ಪೊಲೀಸ್ ಠಾಣೆಯ ಮುಂದೆ ಹೋಗುತ್ತಿದ್ದನು ಎಂದು ಅಧಿಕಾರಿಯೊಬ್ಬರು ಹೇಳಿದರು.
ಆರೋಪಿಗಳು ದರೋಡೆ ಮಾಡಿದ ನಂತರ ದೂರ ಹೋಗಿಲ್ಲ ಎಂದು ಪೊಲೀಸರು ಪತ್ತೆ ಹಚ್ಚಿದ್ದರು. ಅವರು ಸ್ಥಳೀಯ ಗುಪ್ತಚರ ಮೂಲಗಳನ್ನು ಬಳಸಿದರು ಮತ್ತು ವ್ಯಕ್ತಿಯನ್ನು ಪತ್ತೆಹಚ್ಚಿದರು. ಚಿನ್ನದ ಸರವನ್ನೂ ವಶಪಡಿಸಿಕೊಳ್ಳಲಾಗಿದೆ.