ಬೆಂಗಳೂರು/ದಾವಣಗೆರೆ:
ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಕಾನನಕಟ್ಟೆ ಗ್ರಾಮದ ಬಳಿ ಇಂಡಿಕಾ ಕಾರು (ಕೆಎ 51 ಡಿ 5066) ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಏಳು ಜನರು ಸಾವನ್ನಪ್ಪಿದ್ದಾರೆ.
ಶುಕ್ರವಾರ ನಸುಕಿನಲ್ಲಿ ಕಾನನಕಟ್ಟೆ ಗ್ರಾಮದ ಬಳಿ ಚಾಲಕನಿಗೆ ನಿದ್ದೆಗೆಟ್ಟು ಅಪಘಾತ ಸಂಭವಿಸಿದೆ ಎಂದು ಪ್ರಾಥಮಿಕ ಹಂತದ ತಿಳಿದುಬಂದಿದೆ.
ಬೆಂಗಳೂರಿನಲ್ಲಿ ಉಬರ್ ಚಾಲಕರಾಗಿರುವ ಚಾಲಕ ಸಂಜೀವ್ ಅವರು ಇತ್ತೀಚೆಗೆ ಕಾರನ್ನು ಖರೀದಿಸಿದ್ದರು. ಆರು ಇತರರು ಬೆಂಗಳೂರಿನ ರೇವಾ ವಿಶ್ವವಿದ್ಯಾಲಯದಲ್ಲಿ ದಿನಗೂಲಿ ಕೆಲಸ ಮಾಡುತ್ತಿದ್ದರು.

ಮೃತರನ್ನು ಯಾದಗಿರಿ ಜಿಲ್ಲೆ, ವಿಜಯಪುರ ಜಿಲ್ಲೆ ತಾಳಿಕೋಟಿ ನಿವಾಸಿ ಮಲ್ಲನಗೌಡ (22), ಸಂಜೀವ್ (20), ಸಂತೋಷ್ (21), ಜೈ ಭೀಮ್ (18), ವಿಜಯನಗರ ಜಿಲ್ಲೆಯ ಕೂಡಲಿಗಿ ತಾಲೂಕಿನ ರಘು (23), ಸಿದ್ದೇಶ್ (20) ಮತ್ತು ವೇದಮೂರ್ತಿ (18) ಎಂದು ಪೊಲೀಸರು ಗುರುತಿಸಿದ್ದಾರೆ.
ಅಪಘಾತ ಸಂಭವಿಸಿದಾಗಲೂ ಬದುಕಿದ್ದ ಸಿದ್ದೇಶ್ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ.
ಹೊಸಪೇಟೆ ಮತ್ತು ಹಂಪಿ ಪ್ರವಾಸಿ ತಾಣಗಳನ್ನು ವೀಕ್ಷಿಸಿದ ನಂತರ ಸಂಕ್ರಾಂತಿ ಹಬ್ಬದ ನಿಮಿತ್ತ ತಮ್ಮ ಹುಟ್ಟೂರಿಗೆ ಭೇಟಿ ನೀಡಲು ನಿರ್ಧರಿಸಿದರು ಎಂದು ಹೇಳಲಾಗಿದೆ.
ಗುರುವಾರ ರಾತ್ರಿ ಬೆಂಗಳೂರಿನಿಂದ ಕಾರಿನಲ್ಲಿ ಹೊರಟಿದ್ದರು. ಕಾರು ಚಾಲನೆ ಮಾಡುತ್ತಿದ್ದ ಸಂಜೀವ್ ಮುಂಜಾನೆ 3 ಗಂಟೆ ಸುಮಾರಿಗೆ ನಿದ್ರಿಸಿದ ಕಾರಣ ವಾಹನ ಟೋಲ್ ಪ್ಲಾಜಾದಿಂದ 100 ಮೀಟರ್ ದೂರದಲ್ಲಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿದೆ.
Also Read: 7 killed as car hits divider near Davangere in Karnataka
ಮೃತದೇಹಗಳನ್ನು ಜಗಳೂರು ಪಟ್ಟಣದ ತಾಲೂಕು ಜನರಲ್ ಆಸ್ಪತ್ರೆಗೆ ರವಾನಿಸಲಾಗಿದೆ. ಏಳು ಮಂದಿ ಯುವಕರು ಜೀವನೋಪಾಯಕ್ಕಾಗಿ ಬೆಂಗಳೂರಿಗೆ ತೆರಳಿದ್ದರು. ಅವರ ಸಾವಿನೊಂದಿಗೆ, ಅವರ ಕುಟುಂಬಗಳು ತಮ್ಮ ಅನ್ನದಾತರನ್ನು ಕಳೆದುಕೊಂಡಿದ್ದಾರೆ.
ಪೊಲೀಸ್ ವರಿಷ್ಠಾಧಿಕಾರಿ ಸಿ ಬಿ ರಿಷ್ಯಂತ್ ಸ್ಥಳಕ್ಕೆ ಧಾವಿಸಿದ್ದಾರೆ.