ಬೆಂಗಳೂರು:
ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಅಧಿಕಾರಿಗಳು ಶುಕ್ರವಾರ ಬಿಬಿಎಂಪಿ ಎಂಜಿನಿಯರ್ ಆಂಜನಪ್ಪ ಅವರ ಬೆಂಗಳೂರಿನ ಮನೆ ಮತ್ತು ಇತರ ಎರಡು ಕಡೆ ದಾಳಿ ನಡೆಸಿದ ಭಾರೀ ಮೊತ್ತದ ನಗದು, ಚಿನ್ನಾಭರಣ ಮತ್ತು ಆಸ್ತಿ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.
![ಬಿಬಿಎಂಪಿ ಎಂಜಿನಿಯರ್ ಮನೆಗಳ ಮೇಲೆ ಎಸಿಬಿ ದಾಳಿ: ನಗದು, ಚಿನ್ನಾಭರಣ ವಶ 1 IMG 20210122 WA0007](https://kannada.thebengalurulive.com/wp-content/uploads/2021/01/IMG-20210122-WA0007.jpg)
ಡಿವೈ ಎಸ್ ಪಿ ಪರಮೇಶ್ವರ ನೇತೃತ್ವದಲ್ಲಿ ನಗರದಲ್ಲಿ ನಡೆದ ದಾಳಿಯಲ್ಲಿ 3 ಲಕ್ಷ ರೂ ನಗದು, ಎರಡು ಕಾರುಗಳನ್ನು ವಶಪಡಿಸಿಕೊಳ್ಳಲಾಗಿದೆ. ದಾವಣಗೆರೆಯಲ್ಲಿ ಎಸ್ ಪಿ ಜಯಪ್ರಕಾಶ್ ನೇತೃತ್ವದ ತಂಡ 9.79 ಲಕ್ಷ ರೂ. ನಗದು, ಏಳು ಭೂ ದಾಖಲೆಗಳು, ನಾಲ್ಕು ವಾಹನಗಳು ಮತ್ತು ಮನೆಗಳ ಆಸ್ತಿ ದಾಖಲೆಗಳನ್ನು ವಶಪಡಿಸಿಕೊಂಡಿದೆ.
ACB raids PWD engineer on BBMP deputation
— Thebengalurulive/ಬೆಂಗಳೂರು ಲೈವ್ (@bengalurulive_) January 22, 2021
Cash and jewellery seized from 4 locationshttps://t.co/vfcVq5gNka#BENGALURU #Bangalore #AntiCorruptionBureau #sleuths #PWD #engineer #CTAnjanappa #BBMP #deputation #Davanagere #Bommanahallizone @acbkarnataka @seemantsingh96
ಅಂಜನಪ್ಪ ಆದಾಯದ ಮೂಲಕ್ಕಿಂತ ಹೆಚ್ಚಿನ ಸಂಪತ್ತು ಹೊಂದಿದ್ದಾರೆ ಎಂಬ ನಿರ್ದಿಷ್ಟ ಮಾಹಿತಿಯನ್ನಾಧರಿಸಿ ಈ ದಾಳಿ ನಡೆಸಲಾಗಿದೆ. ಈ ಕುರಿತಂತೆ ಪ್ರಕರಣಗಳನ್ನು ದಾಖಲಿಸಲಾಗಿದ್ದು, ತನಿಖೆ ನಡೆಯುತ್ತಿದೆ.