Home ಅಪರಾಧ ಬಿಬಿಎಂಪಿ ಎಂಜಿನಿಯರ್ ಮನೆ ಮೇಲೆ ಎಸಿಬಿ ದಾಳಿ

ಬಿಬಿಎಂಪಿ ಎಂಜಿನಿಯರ್ ಮನೆ ಮೇಲೆ ಎಸಿಬಿ ದಾಳಿ

184
0

ಟೌನ್ ಪ್ಲಾನಿಂಗ್  ಸಹಾಯಕ ನಿರ್ದೇಶಕ ದೇವೇಂದ್ರಪ್ಪ ಮತ್ತು ಅವರ ಸಹಾಯಕರ ಮನೆಯಲ್ಲಿ ದಾಳಿ ನಡೆಯುತ್ತಿದೆ

 ಬೆಂಗಳೂರು:

 ಒಂದು ತಿಂಗಳ ಹಿಂದೆ, ಆಕ್ಯುಪೆನ್ಸಿ ಸರ್ಟಿಫಿಕೇಟ್ ನೀಡಲು 20 ಲಕ್ಷ ರೂಪಾಯಿ ಲಂಚ ಸ್ವೀಕರಿಸಿ, ಬಿಬಿಎಂಪಿಯ ಬೊಮ್ಮನಹಳ್ಳಿ ವಲಯದ ಟೌನ್ ಪ್ಲಾನಿಂಗ್ ವಿಭಾಗದ ಸಹಾಯಕ ನಿರ್ದೇಶಕ ಎಸ್.ಎನ್. ದೇವೇಂದ್ರಪ್ಪ ಅವರನ್ನು ಎಸಿಬಿ ಅಧಿಕಾರಿ ಅರೆಸ್ಟ್ ಮಾಡಿದರು. ಇಂದು ಅವರು ಮತ್ತು ಅವರು ಆಪ್ತ ಮನೆ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.


ಅಮೃತನಗರದ ಸಿ ಸೆಕ್ಟರ್‌ನ ಎಸ್‌.ಎನ್. ದೇವೇಂದ್ರಪ್ಪ ಅವರ ಮನೆಯಲ್ಲಿ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.  ದೇವೇಂದ್ರಪ್ಪನ ಇತರ ಸ್ಥಳಗಳನ್ನು ಪೊಲೀಸರು ಪತ್ತೆಹಚ್ಚುತ್ತಿದ್ದಾರೆ, ಅದನ್ನು ಸಹ ಹುಡುಕಲಾಗುವುದು ಎಂದು ದಾಳಿಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವ ಅಧಿಕಾರಿಯೊಬ್ಬರು ಹೇಳಿದರು.

IMG 20210302 WA0000
ದೇವೇಂದ್ರಪ್ಪ ಅವರರು ಆಪ್ತ ಸಹವರ್ತಿ ಶ್ರೀನಿವಾಸ್ ಮೂರ್ತಿ ಅವರ ಮನೆ

ಹಲಸೂರು ಬಳಿಯ ಗುಪ್ತಾ ಲೇಔಟ್ ನಲ್ಲಿ ಇರುವ ಅವರರು ಆಪ್ತ ಸಹವರ್ತಿ ಶ್ರೀನಿವಾಸ್ ಮೂರ್ತಿ ಅವರ ಮನೆ ಸೇರಿದಂತೆ ಎರಡು ಸ್ಥಳಗಳಲ್ಲಿ ದಾಳಿ ನಡೆಸಲು ಎಸಿಬಿ ತಂಡಗಳನ್ನು ರಚಿಸಿದೆ.

“ಈ ಹಿಂದೆ ನಾವು 20 ಲಕ್ಷ ರೂ.ಗಳ ಲಂಚ ಸ್ವೀಕರಿಸಿದ್ದಕ್ಕಾಗಿ (ದೇವೇಂದ್ರಪ್ಪ) ಆತನನ್ನು ಬಂಧಿಸಿದ್ದೆವು ಆದರೆ ಈಗ ನಾವು ದೇವೇಂದ್ರಪ್ಪ ವಿರುದ್ಧ ಅಕ್ರಮ ಆಸ್ತಿಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದೇವೆ. ದಾಳಿಗಳು ನಡೆಯುತ್ತಿವೆ” ಎಂದು ದಾಳಿಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವ ಅಧಿಕಾರಿಯೊಬ್ಬರು ಹೇಳಿದರು.

Screenshot 20210302 093333

 ಹೆಚ್ಚಿನ ತನಿಖೆ ಮುಂದುವರೆದಿದೆ.  ದೇವೇಂದ್ರಪ್ಪ ಅವರು ಫೆಬ್ರವರಿ 5, 2021 ರಂದು ಲಂಚ ಲಂಚ ಪಡೆಯುತ್ತಿರುವಾಗ ಸಿಕ್ಕಿಬಿದ್ದರು.

LEAVE A REPLY

Please enter your comment!
Please enter your name here