ಮುಖ್ಯ ಆಯುಕ್ತ ಗೌರವ್ ಗುಪ್ತಾ ಅವರಿಂದ ಖಾಸಗಿ ಆಸ್ಪತ್ರೆಗಳಿಗೆ ಚಾಟಿ
ಬೆಂಗಳೂರು:
ಕೋವಿಡ್ -19 ರೋಗಿಗಳಿಗೆ ಒಪ್ಪಿದ ಸಂಖ್ಯೆಯ ಹಾಸಿಗೆಗಳನ್ನು ಹಂಚಿಕೊಳ್ಳಲು ವಿಫಲವಾದ ಕಾರಣ ತಪ್ಪಾದ ಖಾಸಗಿ ಆಸ್ಪತ್ರೆಗಳ ವಿರುದ್ಧ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಚಾಟಿ ಬೀಸಿದರು.
ಭಾನುವಾರ ಸಂಬಂಧಪಟ್ಟ ಆಸ್ಪತ್ರೆಗಳ ತಪಾಸಣೆಯಲ್ಲಿ, ಗುಪ್ತಾ ಅವರೊಂದಿಗೆ ಯಲಹಂಕ ವಲಯದ ವಲಯ ಆಯುಕ್ತ ಡಿ ರಂದೀಪ್ ಮತ್ತು ಮುಖ್ಯ ಆರೋಗ್ಯ ಅಧಿಕಾರಿ ಡಾ.ಬಿ.ಕೆ.ವಿಜೇಂದ್ರ ಇದ್ದರು.
ಕನ್ನಿಂಗ್ಹ್ಯಾಮ್ ರಸ್ತೆಯ ಫೋರ್ಟಿಸ್ ಮತ್ತು ವಿಕ್ರಮ್ ಆಸ್ಪತ್ರೆಯ ಎರಡು ಪ್ರಮುಖ ಆಸ್ಪತ್ರೆಗಳಿಗೆ ಮುಖ್ಯ ಆಯುಕ್ತರು ಶೋ-ಕಾಸ್ ನೋಟಿಸ್ ನೀಡಿದ್ದಾರೆ – ಕೋವಿಡ್ -19 ರೋಗಿಗಳಿಗೆ ಅಗತ್ಯವಿರುವ ಹಾಸಿಗೆಗಳ ಸಂಖ್ಯೆಯನ್ನು ಬಿಬಿಎಂಪಿಗೆ ಒದಗಿಸಲು ಎರಡೂ ಆಸ್ಪತ್ರೆಗಳು ವಿಫಲವಾಗಿವೆ.
ಸರ್ಕಾರದ ಆದೇಶಗಳನ್ನು ಪಾಲಿಸಲು ವಿಫಲವಾದ ಕಾರಣ ಎನ್ಡಿಎಂ ಕಾಯ್ದೆಯಡಿ ಅವರ ವಿರುದ್ಧ ಏಕೆ ಕ್ರಮ ಕೈಗೊಳ್ಳಬಾರದು ಎಂದು ಆಸ್ಪತ್ರೆಗಳಿಗೆ ಶೋ-ಕಾಸ್ ನೋಟಿಸ್ ನಲ್ಲಿ ಪ್ರಶ್ನಿಸಲಾಗಿದೆ.
ವಿಕ್ರಮ್ ಆಸ್ಪತ್ರೆಯು ಬಿಬಿಎಂಪಿ-ಉಲ್ಲೇಖಿತ ಕೋವಿಡ್ ರೋಗಿಗಳಿಗೆ ಕಡ್ಡಾಯವಾಗಿ 39 ಹಾಸಿಗೆಗಳನ್ನು ಒದಗಿಸಿಲ್ಲ ಮತ್ತು ಫೋರ್ಟಿಸ್ ಆಸ್ಪತ್ರೆಯು 30 ಕಡ್ಡಾಯ ಹಾಸಿಗೆಗಳಲ್ಲಿ 5 ಅನ್ನು ಮಾತ್ರ ನೀಡಿದೆ ಎಂದು ನೋಡಿದಾಗ ಮುಖ್ಯ ಆಯುಕ್ತರು ಆಸ್ಪತ್ರೆಗಳಿಗೆ ಚಾಟಿ ಬೀಸಿದರು.
ಬ್ಯಾಪ್ಟಿಸ್ಟ್ ಆಸ್ಪತ್ರೆ
ಕೊನೆಯದಾಗಿ ಬ್ಯಾಪ್ಟಿಸ್ಟ್ ಆಸ್ಪತ್ತೆ ಭೇಟಿ ಪರಿಶೀಲನೆ ನಡೆಸಿದ ಮುಖ್ಯ ಆಯುಕ್ತರು, 124 ಹಾಸಿಗೆಗಳ ಪೈಕಿ 63 ಹಾಸಿಗೆಗಳನ್ನು ಮಾತ್ರ ಮೀಸಲಿಡಲಾಗಿರುತ್ತದೆ. ಈ ಪೈಕಿ ಬ್ಯಾಪ್ಟಿಸ್ಟ್ ಆಸ್ಪತ್ರೆಗೂ ಕಾರಣ ಕೇಳುವ ನೋಟೀಸ್ ನೀಡಿ 24 ಗಂಟೆಯೊಳಗಾಗಿ ಉತ್ತರ ನೀಡುವಂತೆ ತಿಳಿಸಿ ಹಾಸಿಗೆ ಮೀಸಲಿಡದಿದ್ದರೆ ಒಪಿಸಿ ಬಂದ್ ಮಾಡುವುದಾಗಿ ಸೂಚನೆ ನೀಡಲಾಗಿರುತ್ತದೆ.
ಕೋಲಂಬಿಯಾ ಎಷಿಯಾ ಆಸ್ಪತ್ರೆ ಬಳ್ಳಾರಿ ರಸ್ತೆ
ತದನಂತರ ಕೊಲಂಬಿಯಾ ಏಷಿಯಾ ಆಸ್ಪತ್ರೆಗೆ ಭೇಟಿ ಪರಿಶೀಲನೆ ನಡೆಸಿದ ಮುಖ್ಯ ಆಯುಕ್ತರು, ಸರ್ಕಾರದ ಆದೇಶದಂತೆ 30 ಹಾಸಿಗೆ ಮೀಸಲಿಡಬೇಕಿರುತ್ತದೆ. ಆದರೆ ಇನ್ನೂ 15 ಹಾಸಿಗೆ ಮಾತ್ರ ಮೀಸಲಿಡಲಾಗಿರುತ್ತದೆ. ಆದ್ದರಿಂದ ಇನ್ನು 24 ಗಂಟೆಯಲ್ಲಿ ಮೀಸಲಿರಿಸಬೇಕಿರುವ ಹಾಸಿಗೆಯನ್ನು ಮೀಸಲಿಡಬೇಕೆಂದು ಕಾರಣ ಕೇಳುವ ನೋಟೀಸ್ ನೀಡಲಾಗಿರುತ್ತದೆ.
ವಿಕ್ರಂ ಮತ್ತು ಫೋರ್ಟಿಸ್ ಕನ್ನಿಂಗ್ ಹ್ಯಾಂ ರಸ್ತೆ ಆಸ್ಪತ್ರೆ:
ವಿಕ್ರಂ ಆಸ್ಪತ್ರೆಯಲ್ಲಿ 39 ಹಾಸಿಗೆಗಳು ಹಾಗೂ ಪೋರ್ಟಿಸ್ ಆಸ್ಪತ್ರೆಯಲ್ಲಿ 30 ಹಾಸಿಗೆಗಳು ಮೀಸಲಿಡಬೇಕಿರುತ್ತದೆ. ಕೋವಿಡ್ ಸೋಂಕಿತರ ಚಿಕಿತ್ಸೆಗಾಗಿ ಮೀಸಲಿಟ್ಟಿರುವ ಸಂಖ್ಯೆಯ ಸೂಚನಾ ಫಲಕವನ್ನು ಪ್ರವೇಶದ್ವಾರದ ಮುಂದೆ ಅಳವಡಿಸಿರಬೇಕಾಗಿರುತ್ತದೆ. ಸರಿಯಾದ ಮಾಹಿತಿ ನೀಡದ ಹಾಗೂ ಸರ್ಕಾರದ ಆದೇಶವನ್ನು ಪಾಲಿಸದ ಕಾರಣ ಎರಡು ಆಸ್ಪತ್ರೆಗೆ ನೋಟಿಸ್ ಜಾರಿ ಮಾಡಲಾಗಿರುತ್ತದೆ.
ಆಸ್ಟರ್ ಆಸ್ಪತ್ರೆ:
ಆಸ್ಟರ್ ಸಿ.ಎಂ.ಐ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಮುಖ್ಯ ಆಯುಕ್ತರು, ಸದರಿ ಆಸ್ಪತ್ರೆಯಲ್ಲಿ ಸರ್ಕಾರದ ಆದೇಶದಂತೆ ಇನ್ನೂ ಶೇ. 50 ರಷ್ಟು ಹಾಸಿಗೆಗಳನ್ನು ಮೀಸಲಿಡದ ಕಾರಣ ಸ್ಥಳದಲ್ಲೇ ಮುಖ್ಯ ಆಯುಕ್ತರು ರವರು ಕಾರಣ ಕೇಳಿ ನೋಟೀಸ್ ನೀಡಿ 24 ಗಂಟೆಯೊಳಗಾಗಿ ಉತ್ತರ ನೀಡಲು ತಿಳಿಸಲಾಗಿರುತ್ತದೆ. ಉತ್ತರ ನೀಡದಿದ್ದಲ್ಲಿ ಒಪಿಸಿ ಮುಚ್ಚುವುದಾಗಿ ಸೂಚನೆ ನೀಡಲಾಗಿರುತ್ತದೆ.
ಆಸ್ಟರ್ ಸಿಎಂಐ ಆಸ್ಪತ್ರೆಯಲ್ಲಿ ಸರ್ಕಾರದ ಆದೇಶದ ಪ್ರಕಾರ 112 ಹಾಸಿಗೆಗಳನ್ನು ಮೀಸಲಿಡಬೇಕಿರುತ್ತದೆ. ಆದರೆ ಶೇ. 20 ರಂತೆ ಸಾಮಾನ್ಯ, ಐಸಿಯು, ವೆಂಟಿಲೇಟರ್ ಸೇರಿ 45 ಹಾಸಿಗೆಗಳನ್ನು ಮಾತ್ರ ಮೀಸಲಿಟ್ಟಿರುತ್ತಾರೆ. ಕೋವಿಡ್ ಸೋಂಕಿತರಿಗಾಗಿ ಶೇ. 50 ರಷ್ಟು ಹಾಸಿಗೆ ಮೀಸಲಿಡಬೇಕೆಂದು ಈಗಾಗಲೇ ಒಮ್ಮೆ ನೋಟೀಸ್ ಜಾರಿ ಮಾಡಲಾಗಿತ್ತು. ಆದರೂ ಇನ್ನೂ ಮೀಸಲಿಡದ ಕಾರಣ ಇಂದು ಕಾರಣ ಕೇಳಿ ನೋಟೀಸ್ ನೀಡಿ, ಕೂಡಲೆ ಶೇ. 50 ರಷ್ಟು ಹಾಸಿಗೆ ಮೀಸಲಿಡಲು ಆಸ್ಪತ್ರೆಗೆ ಸೂಚನೆ ನೀಡಲಾಗಿರುತ್ತದೆ.
ಗುಪ್ತಾ ಅವರು ಆಸ್ಟರ್ ಸಿಎಮ್ಐ, ಕೊಲಂಬಿಯಾ ಏಷ್ಯಾ, ಬ್ಯಾಪ್ಟಿಸ್ಟ್ ಆಸ್ಪತ್ರೆಗಳನ್ನು ಪರಿಶೀಲಿಸಿದರು ಮತ್ತು ಸರ್ಕಾರದ ಆದೇಶಗಳನ್ನು ಪಾಲಿಸಲು ವಿಫಲವಾದ ಕಾರಣ ಆಸ್ಪತ್ರೆ ಮಂಡಳಿಗೆ ಇದೇ ರೀತಿಯ ಶೋ-ಕಾಸ್ ನೋಟಿಸ್ ನೀಡಿದರು.
ಕಳೆದ ಎರಡು ದಿನಗಳಿಂದ ಬೆಂಗಳೂರು ಕರೋನವೈರಸ್-ಪಾಸಿಟಿವ್ ಪ್ರಕರಣಗಳಲ್ಲಿ ಭಾರಿ ಏರಿಕೆ ಕಂಡಿದೆ. ನಗರವು 12,793 ಕ್ಕೂ ಹೆಚ್ಚು ಕೋವಿಡ್ -19 ಸಕಾರಾತ್ಮಕ ಪ್ರಕರಣಗಳನ್ನು ಕಂಡಿದೆ.
ಮುಖ್ಯ ಆಯುಕ್ತರು ರವರಿಂದ ಎಚ್ಚರಿಕೆ
ತಪಾಸಣೆ ಮುಗಿಸಿದ ನಂತರ ಮುಖ್ಯ ಆಯುಕ್ತರು ರವರು ಮಾತನಾಡುತ್ತಾ ಆಸ್ಪತ್ರೆಗಳು ವ್ಯವಸ್ಥೆಯನ್ನು ಜರೂರಾಗಿ 24 ತಾಸಿನ ಒಳಗೆ ಸರಿಪಡಿಸಿ ಕೊಳ್ಳುವಂತೆ ಇಲ್ಕದಿದ್ದರೆ ಮುಂದಿನ ದಿನಗಳಲ್ಲಿ ಆಸ್ಪತ್ರೆಗಳಿಗೆ ಕಠಿಣ ಕ್ರಮ ಕೈಗೊಳ್ಳಲಾಗುವುದೆಂದು ಹಾಗೂ ಅಧಿಕಾರಿಗಳು ಸಹ ಈ ಬಗ್ಗೆಜರೂರು ಕ್ರಮವಹಿಸಲು ಸೂಚಿಸಲಾಗಿದೆ.
ಅಲ್ಲದೇ ಇಂದು ಸಾಂಕೇತಿಕವಾಗಿ 5 ಆಸ್ಪತ್ರೆಗಳಿಗೆ ಭೇಟಿ ನೀಡಿ ತಪಾಸಣೆ ಮಾಡಲಾಗಿದೆ, ಮುಂದಿನ ದಿನದಲ್ಲಿ ಧೀಡರ್ ಆಗಿ ಯಾವುದೇ ಆಸ್ಪತ್ರೆಗೆ ಅನೀರಿಕ್ಷಿತವಾಗಿ ತಪಾಸಣೆ ನೀಡಿ ಕಠಿಣ ಕ್ರಮ ಕೈಗೊಳ್ಳಲಾಗುವುದೆಂದು ತಿಳಿಸಿದರು.