Home ಕರ್ನಾಟಕ ಮನೆ ಬಾಗಿಲೆಗೆ ಶಬರಿಮಲೆ ‘ಪ್ರಸಾದ’

ಮನೆ ಬಾಗಿಲೆಗೆ ಶಬರಿಮಲೆ ‘ಪ್ರಸಾದ’

33
0

ಅಂಚೆ ಇಲಾಖೆಯಿಂದ ವಿನೂತನ ಯೋಜನೆ

ಶಬರಿಮಲೆ (ಕೇರಳ):

ಭಕ್ತರಿಗೆ ಶಬರಿಮಲೆ ‘ಪ್ರಸಾದ’ ವಿತರಿಸುವ ನಿಟ್ಟಿನಲ್ಲಿ ಅಂಚೆ ಇಲಾಖೆ ‘ಮನೆ ಬಾಗಿಲಿಗೆ ಪೂರೈಕೆ ಯೋಜನೆ’ ಆರಂಭಿಸಿದೆ ಎಂದು ತಿರುವಂಕೂರು ದೇವಸ್ಥಾನ ಮಂಡಳಿ (ಟಿಡಿಬಿ) ಸಾರ್ವಜನಿಕ ಸಂಪರ್ಕಾಧಿಕಾರಿ ಸುನೀಲ್ ಅರುಮನೂರ್ ಭಾನುವಾರ ತಿಳಿಸಿದ್ದಾರೆ.

ಈ ಯೋಜನೆಯಡಿ, ಒಂದು ಬಾಟಲಿ ‘ಅರಾವಣ,’ 100 ಮಿಲಿ ತುಪ್ಪ, ಶ್ರೀಗಂಧದ ಪೇಸ್ಟ್, ‘ವಿಭೂತಿ,’ ‘ಕುಂಕುಮ’ ಮತ್ತು ಅರಿಶಿನವನ್ನು ಒಳಗೊಂಡಿರುವ ‘ಪ್ರಸಾದ’ ಕಿಟ್ ಅನ್ನು 450 ರೂ.ಗಳ ಶುಲ್ಕಕ್ಕೆ ತ್ವರಿತ ಅಂಚೆ ಮೂಲಕ ಭಕ್ತರ ಮನೆಗಳಿಗೆ ತಲುಪಿಸಲಾಗುವುದು ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಶಬರಿಮಲೆ ಅಯ್ಯಪ್ಪ ದೇವಸ್ಥಾನದ ಪ್ರಸಾದ ಕಿಟ್ ಅನ್ನು ಪ್ರಮುಖ ಅಂಚೆ ಕಚೇರಿಗಳಿಂದ ನೇರವಾಗಿ ಮತ್ತು ಅಂಚೆ ಇಲಾಖೆಯ ಸೈಟ್ ಮೂಲಕ ಆನ್‌ಲೈನ್ ಮೂಲಕ ಖರೀದಿಸಬಹುದು.

ಈ ಕಿಟ್‌ಗಳನ್ನು ದೇಶಾದ್ಯಂತ ಅಂಚೆ ಕಚೇರಿಗಳಲ್ಲಿ ಕಾಯ್ದಿರಿಸಬಹುದು. ಪ್ರಸಾದ ಪ್ಯಾಕೆಟ್ ಅನ್ನು ಸ್ಪೀಡ್ ಪೋಸ್ಟ್ ವ್ಯವಸ್ಥೆಯಿಂದ ತಲುಪಿಸಲಾಗುವುದು. ಸ್ಪೀಡ್ ಪೋಸ್ಟ್‌ಗಾಗಿ ವಿಮಾನ ಸೇವೆಯನ್ನೂ ಬಳಸಲಾಗುತ್ತದೆ ಪ್ರಕಟಣೆ ತಿಳಿಸಿದೆ.

ಕೇರಳ ವೃತ್ತ ಅಂಚೆ ಇಲಾಖೆ ಮತ್ತು ತಿರುವಂಕೂರು ದೇವಸ್ಥಾನ ಮಂಡಳಿಯೊಂದಿಗೆ ಮಾಡಿಕೊಂಡ ಒಪ್ಪಂದದ ಆಧಾರದ ಮೇಲೆ ಬುಕಿಂಗ್ ವ್ಯವಸ್ಥೆ ಮಾಡಲಾಗಿದೆ. ಭಾರತದ ಯಾವುದೇ ಅಂಚೆ ಕಚೇರಿಯಿಂದ ಇ-ಪಾವತಿ ಮೂಲಕ ಕಿಟ್ ಅನ್ನು ಕಾಯ್ದಿರಿಸಬಹುದು.

LEAVE A REPLY

Please enter your comment!
Please enter your name here