Transfer of 34 IPS officers in Karnataka: ಕರ್ನಾಟಕದಲ್ಲಿ 34 ಐಪಿಎಸ್ ಅಧಿಕಾರಿಗಳ ವರ್ಗಾವಣೆ – ಬೆಂಗಳೂರು ಪೊಲೀಸ್ ವಿಭಾಗಗಳಲ್ಲಿ ಮಹತ್ವದ ಬದಲಾವಣೆ
ಬೆಂಗಳೂರು: ಕರ್ನಾಟಕ ಸರ್ಕಾರ ಮಹತ್ವದ ಆಡಳಿತಾತ್ಮಕ ಹೆಜ್ಜೆಯಾಗಿ 34 ಐಪಿಎಸ್ ಅಧಿಕಾರಿಗಳ ವರ್ಗಾವಣೆ ಆದೇಶವನ್ನು ಹೊರಡಿಸಿದೆ. ಬೆಂಗಳೂರು ಸೇರಿದಂತೆ ವಿವಿಧ ವಿಭಾಗಗಳಲ್ಲಿನ ಅಪರಾಧ, ಸಂಚಾರ, ಪಶ್ಚಿಮ, ಪೂರ್ವ, ದಕ್ಷಿಣ ವಿಭಾಗಗಳು, ಸಿಐಡಿ, ಇಂಟಲಿಜೆನ್ಸ್, ಲೋಕಾಯುಕ್ತ ಹಾಗೂ ಜಿಲ್ಲಾಧಿಕಾರಿ ಮಟ್ಟದ ಎಸ್ಪಿ ಹುದ್ದೆಗಳಲ್ಲೂ ಬದಲಾವಣೆ ಜಾರಿಯಾಗಿದೆ.
ಬೆಂಗಳೂರು ನಗರ ಪೊಲೀಸ್ ವಿಭಾಗದಲ್ಲಿ ಈ ಪ್ರಮುಖ ಬದಲಾವಣೆಗಳು ಮಾಡಲಾಗಿದೆ:
- ಜಿತೇಂದ್ರ ಕುಮಾರ್ – ಡಿಸಿಪಿ, ಕಾನೂನು ಮತ್ತು ಸುವ್ಯವಸ್ಥೆ, ಮಂಗಳೂರು ನಗರ
- ಅಕ್ಷಯ್ ಮಚೀಂದ್ರ – ಡಿಸಿಪಿ, ಬೆಂಗಳೂರು ಕೇಂದ್ರ ವಿಭಾಗ
- ಅಜಯ್ ಹಿಲೋರಿ – ಜಂಟಿ ಪೊಲೀಸ್ ಆಯುಕ್ತ, ಅಪರಾಧ ವಿಭಾಗ
- ಪರಶುರಾಮ್ – ಡಿಸಿಪಿ, ವೈಟ್ಫೀಲ್ಡ್ ವಿಭಾಗ
- ಕಾರ್ತಿಕ್ ರೆಡ್ಡಿ – ಜಂಟಿ ಆಯುಕ್ತರು ಹಾಗೂ ಡಿಐಜಿ, ಸಂಚಾರ ಪೊಲೀಸ್
- ಅನೂಪ್ ಶೆಟ್ಟಿ – ಡಿಸಿಪಿ, ಪಶ್ಚಿಮ ವಿಭಾಗ, ಸಂಚಾರ
- ಶಿವಪ್ರಕಾಶ್ ದೇವರಾಜು – ಎಸ್ಪಿ, ಲೋಕಾಯುಕ್ತ, ಬೆಂಗಳೂರು
- ಜಯಪ್ರಕಾಶ್ – ಡಿಸಿಪಿ, ಉತ್ತರ ವಿಭಾಗ, ಸಂಚಾರ
- ಎಂ. ನಾರಾಯಣ್ – ಡಿಸಿಪಿ, ಎಲೆಕ್ಟ್ರಾನಿಕ್ ಸಿಟಿ
- ಅನಿತಾ ಬಿ. ಹದ್ದಣ್ಣವರ – ಡಿಸಿಪಿ, ಆಗ್ನೇಯ ವಿಭಾಗ
- ಸೈದುಲ್ ಅಡಾವತ್ – ಎಸ್ಪಿ, ಸಿಐಡಿ
- ಬಾಬಾ ಸಾಬ್ ನ್ಯಾಮಗೌಡ – ಡಿಸಿಪಿ, ಉತ್ತರ ವಿಭಾಗ
- ನಾಗೇಶ್ – ಡಿಸಿಪಿ, ವಾಯುವ್ಯ ವಿಭಾಗ
- ಶ್ರೀಹರಿ ಬಾಬು – ಡಿಸಿಪಿ, ಸಿಸಿಬಿ ಬೆಂಗಳೂರು
- ಸೌಮ್ಯಲತಾ – ಡಿಸಿಪಿ, ಸಿಎಆರ್ ಹೆಡ್ಕ್ವಾರ್ಟರ್ಸ್
- ಎಂ.ಎನ್. ಅನುಚೇತ್ – ಡಿಐಜಿ, ನೇಮಕಾತಿ ವಿಭಾಗ
- ವರ್ತಿಕಾ ಕಟೀಯಾರ್ – ಡಿಐಜಿ, ಬಳ್ಳಾರಿ ವಲಯ
- ಶಾಂತರಾಜು – ಎಸ್ಪಿ, ಗುಪ್ತಚರ ಇಲಾಖೆ
- ಸಿರಿ ಗೌರಿ – ಎಸ್ಪಿ, ರಾಜ್ಯ ಅಪರಾಧ ದಾಖಲೆ ವಿಭಾಗ
- ಸುಮನ್ ಡಿ. ಪೆನ್ನೆಕರ್ – ಡಿಸಿಪಿ, ಇಂಟಲಿಜೆನ್ಸ್
- ಸಿಮಿ ಮರಿಯಾ ಜಾರ್ಜ್ – ಡಿಸಿಪಿ, ದಕ್ಷಿಣ ವಿಭಾಗ, ಸಂಚಾರ
- ವೈ. ಅಮರನಾಥ್ – ಕಮಾಂಡೆಂಟ್, ಫಸ್ಟ್ ಬಟಾಲಿಯನ್, KSRP
- ಯಶೋದಾ ವಟ್ಟಗೋಡಿ – ಎಸ್ಪಿ, ಹಾವೇರಿ
- ಗುಂಜನ್ ಅರ್ಯಾ – ಎಸ್ಪಿ, ಧಾರವಾಡ
- ಎಂ. ಗೋಪಾಲ್ – ಜಂಟಿ ನಿರ್ದೇಶಕ, ಎಫ್ಎಸ್ಎಲ್ ಬೆಂಗಳೂರು
- ಸಿದ್ಧಾರ್ಥ ಗೋಯಲ್ – ಎಸ್ಪಿ, ಬಾಗಲಕೋಟೆ
- ರೋಹನ್ ಜಗದೀಶ್ – ಎಸ್ಪಿ, ಗದಗ
- ಶಿವಾಂಶು ರಜಪೂತ – ಎಸ್ಪಿ, ಕೆಜಿಎಫ್
- ಎಂ.ಎನ್. ದೀಪನ್ – ಎಸ್ಪಿ, ಉತ್ತರ ಕನ್ನಡ
- ಎಸ್. ಜಾನವಿ – ಎಸ್ಪಿ, ವಿಜಯನಗರ
- ಚಂದ್ರಗುಪ್ತ – ಐಜಿಪಿ, ಈಶಾನ್ಯ ಕಲಬುರಗಿ
- ಇಡಾ ಮಾರ್ಟಿನ್ ಮಾರ್ಬಾನಿಯಾಂಗ್ – ಡಿಐಜಿ, ಬೆಂಗಳೂರು ಪೊಲೀಸ್ ಹೆಡ್ಕ್ವಾರ್ಟರ್ಸ್
ಈ ಬದಲಾವಣೆಗಳ ಮೂಲಕ ರಾಜ್ಯದಲ್ಲಿ ಪೊಲೀಸ್ ಸೇವೆಗಳ ಶಾಖೆಗಳನ್ನು ಮತ್ತಷ್ಟು ಬಲಪಡಿಸಲು ಸರ್ಕಾರ ಪ್ಲಾನ್ ಮಾಡಿಕೊಂಡಿದೆ. ಬೆಂಗಳೂರಿನಲ್ಲಿ ಜನಸಾಮಾನ್ಯರ ಸುರಕ್ಷತೆ, ಸಂಚಾರ ನಿಯಂತ್ರಣ ಮತ್ತು ಅಪರಾಧ ನಿಯಂತ್ರಣದಲ್ಲಿ ಪರಿಣಾಮಕಾರಿತ್ವ ಹೆಚ್ಚಿಸುವ ಉದ್ದೇಶವಿದೆ.
