Home Uncategorized 'ಎಲಿವೇಟರ್' ಪದ ಕನ್ನಡವಲ್ಲ, ಬೆಂಗಳೂರು ಏರ್ ಪೋರ್ಟ್ ನಲ್ಲಿ ಬರಹಕ್ಕೆ ಕನ್ನಡಿಗರ ಆಕ್ಷೇಪ, ಲೇಖಕ-ಪತ್ರಕರ್ತ ಸುಗತ...

'ಎಲಿವೇಟರ್' ಪದ ಕನ್ನಡವಲ್ಲ, ಬೆಂಗಳೂರು ಏರ್ ಪೋರ್ಟ್ ನಲ್ಲಿ ಬರಹಕ್ಕೆ ಕನ್ನಡಿಗರ ಆಕ್ಷೇಪ, ಲೇಖಕ-ಪತ್ರಕರ್ತ ಸುಗತ ಶ್ರೀನಿವಾಸರಾಜು ಏನಂತಾರೆ?

20
0

ಬೆಂಗಳೂರು ಏರ್ ಪೋರ್ಟ್ ನ ಎಲಿವೇಟರ್ ಎಂಬ ಇಂಗ್ಲಿಷ್ ಶಬ್ದವನ್ನು ತರ್ಜುಮೆ ಮಾಡಿ ಕನ್ನಡದಲ್ಲಿ ಏರಿಳಿ ತೇರು ಎಂಬ ಶಬ್ದ ಬರೆದಿದ್ದು ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗಿತ್ತು. ಹಲವರು ಈ ಶಬ್ದವನ್ನು ಸ್ವಾಗತಿಸಿದ್ದರು. ಬೆಂಗಳೂರು: ಬೆಂಗಳೂರು ಏರ್ ಪೋರ್ಟ್ ನ ಎಲಿವೇಟರ್ ಎಂಬ ಇಂಗ್ಲಿಷ್ ಶಬ್ದವನ್ನು ತರ್ಜುಮೆ ಮಾಡಿ ಕನ್ನಡದಲ್ಲಿ ಏರಿಳಿ ತೇರು ಎಂಬ ಶಬ್ದ ಬರೆದಿದ್ದು ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗಿತ್ತು. ಹಲವರು ಈ ಶಬ್ದವನ್ನು ಸ್ವಾಗತಿಸಿದ್ದರು.

ಆದರೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಹಾಗೂ ಖ್ಯಾತ ಪತ್ರಕರ್ತ ಸುಗತ ಶ್ರೀನಿವಾಸರಾಜು ಅವರು ಹದಿನೈದು ದಿನಗಳ ಹಿಂದೆ ಬೆಂಗಳೂರು ವಿಮಾನ ನಿಲ್ದಾಣದ ನಿರ್ವಾಹಕರನ್ನು `ಎಲಿವೇಟರ್~ ಪದಕ್ಕೆ ಕನ್ನಡದಲ್ಲಿ ಸರಿಯಾದ ಪದ ಬಳಸಬೇಕು ಎಂದು ಒತ್ತಾಯಿಸಿದ್ದು, ಏರಿಳಿ ತೇರು ಶಬ್ದ ಪ್ರಯೋಗ ಸರಿಯಿಲ್ಲ ಎಂದು ಹೇಳಿರುವುದು ಭಾಷಾ ವಿವಾದಕ್ಕೆ ಎಡೆಮಾಡಿಕೊಟ್ಟಿದೆ. ಅಕ್ಷರಶಃ ಕನ್ನಡದಲ್ಲಿ ಪುನಃ ಬರೆಯಲಾಗಿದೆ.

Elevator at @BLRAirport has been translated into Kannada as ‘yerili theru’, meaning a chariot that goes up and down! When did a chariot go up and down? It moved forward not even backward. Perhaps something more accurate should be found. Or should simply write ‘lift’ in /1 pic.twitter.com/NrksiRyquU
— Sugata Srinivasaraju (@sugataraju) December 13, 2022

ಡಿಸೆಂಬರ್ 14 ರಂದು, ಶ್ರೀನಿವಾಸರಾಜು ಹೀಗೆ ಟ್ವೀಟ್ ಮಾಡಿದ್ದಾರೆ: “ಎಲಿವೇಟರ್ ನ್ನು ಕನ್ನಡಕ್ಕೆ `ಏರಿಳಿ ತೇರು’ ಎಂದು ಅನುವಾದಿಸಲಾಗಿದೆ, ಅಂದರೆ ರಥವು ಏರುತ್ತದೆ ಮತ್ತು ಇಳಿಯುತ್ತದೆ ಎಂದ ಹಾಗಾಯಿತು, ರಥವು ಯಾವಾಗ ಏರಿಳಿಯುತ್ತದೆ, ಅದು ಮುಂದೆ ಸಾಗುತ್ತದೆ ಹೊರತು ಹಿಂದೆ ಕೂಡ ಬರುವುದಿಲ್ಲ. ಈ ಶಬ್ಧಪ್ರಯೋಗ ತಪ್ಪಿದೆ, ಹೀಗೆ ಬರೆಯುವುದಕ್ಕಿಂತ ಕನ್ನಡದಲ್ಲಿ  `ಲಿಫ್ಟ್’ ಎಂದು ಸರಳವಾಗಿ ಬರೆಯಬಾರದೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳನ್ನು ಪ್ರಶ್ನಿಸಿದ್ದರು. 

Hello @sugataraju, thank you for highlighting this to us, our operations team has reviewed and made the corrective changes. pic.twitter.com/0LvQ4XmJ5V
— BLR Airport (@BLRAirport) December 27, 2022

ಇದಾದ ನಂತರ, ಬೆಂಗಳೂರು ಇಂಟರ್ನ್ಯಾಷನಲ್ ಏರ್‌ಪೋರ್ಟ್ ಲಿಮಿಟೆಡ್ ಮಂಗಳವಾರ ಅಂದರೆ ಮೊನ್ನೆ ಡಿಸೆಂಬರ್ 27ರಂದು ಯೇರಿಲಿ ತೇರುವನ್ನು ತೆಗೆದು ಎಲಿವೇಟರ್ ಎಂದು ಬದಲಿಸಿತು. ಇದನ್ನು ಗಮನಕ್ಕೆ ತಂದಿದ್ದಕ್ಕೆ ಧನ್ಯವಾದಗಳು, ನಮ್ಮ ಕಾರ್ಯಾಚರಣೆ ತಂಡವು ಪರಿಶೀಲಿಸಿ ಸರಿಪಡಿಸುವ ಬದಲಾವಣೆಗಳನ್ನು ಮಾಡಿದೆ ಎಂದು ಟ್ವೀಟ್ ಮಾಡಿದೆ. ವಿಮಾನ ನಿಲ್ದಾಣದ ಅಧಿಕಾರಿಗಳಿಗೆ ಶ್ರೀನಿವಾಸರಾಜು ಧನ್ಯವಾದ ಹೇಳಿದರು.

ಆದರೆ ಯಥಾವತ್ ಇಂಗ್ಲಿಷ್ ಶಬ್ದವನ್ನು ಕನ್ನಡಕ್ಕೆ ಬದಲಾಯಿಸಿದ್ದಕ್ಕೆ ಹಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದು ಕನ್ನಡ ಭಾಷೆಗೆ ಮಾಡಿರುವ ಅವಮಾನ ಎಂದಿದ್ದಾರೆ. ಈ ಬಗ್ಗೆ TNIE ಸುಗತ ಶ್ರೀನಿವಾಸರಾಜು ಅವರನ್ನು ಮಾತನಾಡಿಸಿದಾಗ, ವಿಮಾನ ನಿಲ್ದಾಣಕ್ಕೆ ಕೇವಲ ಕನ್ನಡಿಗರು ಮಾತ್ರವಲ್ಲದೆ ಜಗತ್ತಿನಿಂದ ಜನರು ಬರುತ್ತಿರುತ್ತಾರೆ. ಕೆಲವು ಶಬ್ದಗಳಿಗೆ ಸರಿಯಾದ ಕನ್ನಡ ಶಬ್ದವಿರುವುದಿಲ್ಲ. ಭಾಷೆಗಳು ಎರವಲು ಮತ್ತು ವಿಕಸನದ ಮೂಲಕ ಮಾತ್ರ ಬೆಳೆಯುತ್ತವೆ, ಉದಾಹರಣೆಗೆ, ಇಂಗ್ಲಿಷ್ ಮತ್ತು ಫ್ರೆಂಚ್ ಭಾಷೆಗಳು ಎಂದು ಹೇಳಿದರು.

LEAVE A REPLY

Please enter your comment!
Please enter your name here