Home Uncategorized ಡಿ.30ರಂದು ಮಂಜನಾಡಿ ಉರೂಸ್ ಸಮಾರೋಪ: ಡಿ.29ರಂದು ಸೌಹಾರ್ದ ಸಭೆ

ಡಿ.30ರಂದು ಮಂಜನಾಡಿ ಉರೂಸ್ ಸಮಾರೋಪ: ಡಿ.29ರಂದು ಸೌಹಾರ್ದ ಸಭೆ

30
0

ಮಂಜನಾಡಿ, ಡಿ.27: ಮಂಜನಾಡಿ ಕೇಂದ್ರ ಜುಮಾ ಮಸೀದಿಯ ಸಮೀಪ ಅಂತ್ಯ ವಿಶ್ರಮ ಹೊಂದಿರುವ ಹಝ್ರತ್ ಅಸ್ಸೈಯದ್ ಇಸ್ಮಾಯೀಲ್ ಅಲ್-ಬುಖಾರಿ ಹೆಸರಿನಲ್ಲಿ ಡಿ.20ರಂದು ಆರಂಭಗೊಂಡಿರುವ ಉರೂಸ್  ಡಿ.20ರಂದು ಸಮಾರೋಪಗೊಳ್ಳಲಿದೆ. ಉರೂಸ್ ಪ್ರಯುಕ್ತ ಡಿ.29ರಂದು ಸೌಹಾರ್ದ ಸಭೆ ದರ್ಗಾ ವಠಾರದಲ್ಲಿ ನಡೆಯಲಿದೆ ಎಂದು ಕೇಂದ್ರ ಜುಮಾ ಮಸೀದಿಯ ಪ್ರಧಾನ ಕಾರ್ಯದರ್ಶಿ ಅಝೀಝ್ ಪರ್ತಿಪ್ಪಾಡಿ ತಿಳಿಸಿದ್ದಾರೆ.

ಮಂಜನಾಡಿ ದರ್ಗಾ ವಠಾರದಲ್ಲಿ ಬುಧವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಮಾಅತ್ ಅಧ್ಯಕ್ಷ ಅಬ್ದುಲ್ ಅಝೀಝ್ ಮೈಸೂರು ಬಾವ ಅಧ್ಯಕ್ಷತೆಯಲ್ಲಿ ನಡೆಯುವ ಸೌಹಾರ್ದ ಸಭೆಯನ್ನು ಮಂಜನಾಡಿ ಮುದರ್ರಿಸ್ ಅಹ್ಮದ್ ಬಾಖವಿ ಉದ್ಘಾಟಿಸಲಿದ್ದಾರೆ. ಸೈಯದ್ ಆಟಕೋಯ ತಂಙಳ್ ದುಆ ನೆರವೇರಿಸಲಿದ್ದಾರೆ ಎಂದವರು ಹೇಳಿದರು.

ಮುಖ್ಯ ಅತಿಥಿಗಳಾಗಿ ಸ್ಪೀಕರ್ ಯು.ಟಿ.ಖಾದರ್, ವಸತಿ ಸಚಿವ ಝಮೀರ್ ಅಹ್ಮದ್ ಖಾನ್, ಪೌರಾಡಳಿತ ಸಚಿವ ರಹೀಂ ಖಾನ್, ಚಾಮರಾಜನಗರ ಶಾಸಕ ಹರೀಶ್ ಗೌಡ, ಮಂಜೇಶ್ವರ ಶಾಸಕ ಎ.ಕೆ.ಎಂ.ಅಶ್ರಫ್, ಡಿಸಿಪಿ ದಿನೇಶ್ ಕುಮಾರ್, ಯೆನೆಪೊಯ ವಿವಿ ಕುಲಾಧಿಪತಿ ವೈ.ಅಬ್ದುಲ್ಲ ಕುಂಞಿ, ಮುಹಮ್ಮದ್ ಹಾರಿಸ್ ನಲಪಾಡ್, ಪ್ರಶಾಂತ್ ಕಾಜವ, ಉಳ್ಳಾಲ ದರ್ಗಾ ಸಮಿತಿಯ ಅಧ್ಯಕ್ಷ ಬಿ.ಜಿ.ಹನೀಫ್ ಹಾಜಿ, ಕೊಲ್ಯ ಕ್ಷೇತ್ರ ಧರ್ಮದರ್ಶಿ ಭಾಸ್ಕರ್ ಐತಾಳ್, ಕ್ರೈಸ್ತ ಧರ್ಮಗುರು ಫಾ.ಮೈಕೆಲ್ ಡಿಸೋಜ, ಇನ್ ಸ್ಪೆಕ್ಟರ್ ಬಾಲಕೃಷ್ಣ, ಉದ್ಯಮಿ ಪ್ರಕಾಶ್ ಕುಂಪಲ, ಕೊಣಾಜೆ ಎಸ್ಸೈ ಪುನೀತ್ ಗಾಂವ್ಕರ್, ವಕ್ಫ್ ಬೋರ್ಡ್ ಅಧಿಕಾರಿ ಅಬೂಬಕರ್ ಮತ್ತಿತರ ಹಲವಾರು ಗಣ್ಯರು ಭಾಗವಹಿಸಲಿದ್ದಾರೆ ಎಂದು ಹೇಳಿದರು.

ಡಿ.30ರಂದು ಉರೂಸ್ ಸಮಾರೋಪ ಸಮಾರಂಭ ನಡೆಯಲಿದ್ದು, ಶಿಹಾಬುದ್ದೀನ್ ತಂಙಳ್ ಮುತ್ತನ್ನೂರು ದುಆ ಆಶೀರ್ವಚನ ನೀಡಲಿದ್ದಾರೆ. ಸ್ಥಳೀಯ ಮುದರ್ರಿಸ್ ಅಹ್ಮದ್ ಬಾಖವಿ ಹಾಗೂ ಹಾಫಿಳ್ ಅಹ್ಮದ್ ಕಬೀರ್ ಬಾಖವಿ ಸಮಾರೋಪ ಉಪನ್ಯಾಸ ನೀಡಲಿದ್ದಾರೆ. ಅಸ್ಸೈಯದ್ ಯಹ್ಯಾ ಅಲ್ ಬುಖಾರಿ ಮಡವೂರು ಕೋಟ ಭಾಗವಹಿಸಲಿದ್ದಾರೆ . ಅದೇ ದಿನ ಸಂಜೆ 4ರಿಂದ 6:30ರವರೆಗೆ ಮಹಿಳೆಯರಿಗೆ ಹಾಗೂ ರಾತ್ರಿ 12ರಿಂದ ರವಿವಾರ ಬೆಳಗ್ಗೆ 6 ಗಂಟೆಯವರೆಗೆ ಪುರುಷರಿಗೆ ಅನ್ನದಾನ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಸೀದಿ ಸಮಿತಿಯ ಅಧ್ಯಕ್ಷ ಅಬ್ದುಲ್ ಅಝೀಝ್ ಮೈಸೂರು ಬಾವ, ಕೋಶಾಧಿಕಾರಿ ಮೊಯ್ದಿನ್ ಬಸರ, ಸಮಿತಿಯ ಸದಸ್ಯರಾದ ಅಲಿಕುಂಞಿ ಪಾರೆ, ಬಾಪಕುಂಞಿ, ಹಮೀದ್ ಆರಂಗಡಿ, ಎನ್.ಐ.ಮುಹಮ್ಮದ್, ಕುಂಞಿ ಚೌಕ, ಎ.ಇ.ಇಬ್ರಾಹೀಂ,ಟಿ.ಕುಂಞಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here