ಸೇನಾ ಅಧಿಕಾರಿಯ ಮೇಲೆ ಹಲ್ಲೆ ಪ್ರಕರಣ: ಇಬ್ಬರು ಆರೋಪಿಗಳು ಬಂಧನ, ಮರ್ಸಿಡಿಸ್ ಕಾರು ವಶ; ಪೊಲೀಸರ ನಿರ್ಲಕ್ಷ್ಯಕ್ಕೆ ಕ್ರಮ
ನವದೆಹಲಿ: ದೆಹಲಿಯ ವಸಂತ ವಿಹಾರದಲ್ಲಿ ಸೇವೆಯಲ್ಲಿರುವ ಭಾರತೀಯ ಸೇನಾ ಅಧಿಕಾರಿಯ ಮೇಲೆ ನಡೆದ ದಾಳಿ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ ಕಂಡುಬಂದಿದ್ದು, ದೆಹಲಿ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ, ಘಟನೆಯಲ್ಲಿ ಬಳಸಿದ ಮರ್ಸಿಡಿಸ್ ಕಾರನ್ನು ವಶಪಡಿಸಿಕೊಂಡಿದ್ದಾರೆ.
ವಸಂತ ವಿಹಾರ ಪೊಲೀಸ್ ಠಾಣೆ ಹೊರಭಾಗದಲ್ಲಿ ವಶಪಡಿಸಿಕೊಂಡ ಮರ್ಸಿಡಿಸ್ ವಾಹನದ ದೃಶ್ಯಗಳು ಗಮನ ಸೆಳೆದಿವೆ. ಬಂಧಿತರನ್ನು ಸತೇಂದ್ರ ಅಲಿಯಾಸ್ ಸೋನು (49), ತಂದೆ ಬನ್ವಾರಿ ಲಾಲ್, ಮತ್ತು ಸಂಜಯ್ ಶರ್ಮಾ (56), ತಂದೆ ಲಕ್ಷ್ಮೀ ನರಾಯಣ್ ಶರ್ಮಾ ಎಂದು ಗುರುತಿಸಲಾಗಿದೆ. ಇಬ್ಬರನ್ನೂ ಇಂದು ಮುಂಜಾನೆ ಬಂಧಿಸಲಾಗಿದೆ.
ಮಾಹಿತಿ ಪ್ರಕಾರ, ಈ ಪ್ರಕರಣದಲ್ಲಿ ಈಗಾಗಲೇ ಎಫ್ಐಆರ್ ದಾಖಲಾಗಿದ್ದು, ದೂರು ದಾಖಲಿಸುವ ಪ್ರಾರಂಭಿಕ ಹಂತದಲ್ಲಿ ನಡೆದ ನಿರ್ಲಕ್ಷ್ಯವನ್ನು ದೆಹಲಿ ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದಾರೆ. ಸಂಬಂಧಪಟ್ಟ ಪೊಲೀಸ್ ಸಿಬ್ಬಂದಿಯನ್ನು ತನಿಖೆ ಪೂರ್ಣಗೊಳ್ಳುವವರೆಗೆ ವರ್ಗಾವಣೆ ಮಾಡಲಾಗಿದೆ.
ಅಧಿಕಾರಿಗಳು ತಿಳಿಸಿದಂತೆ, ಘಟನೆಗೆ ಬಳಸಿದ ಮರ್ಸಿಡಿಸ್ ಕಾರನ್ನು ವಶಪಡಿಸಿಕೊಂಡಿದ್ದು, ಮುಂದಿನ ತನಿಖೆ ಪ್ರಗತಿಯಲ್ಲಿದೆ.
ಇನ್ನೂ, ಈ ಪ್ರಕರಣದಲ್ಲಿ ಭಾರತೀಯ ಸೇನೆ ನಾಗರಿಕ ಆಡಳಿತ ಮತ್ತು ದೆಹಲಿ ಪೊಲೀಸರೊಂದಿಗೆ ಸಮನ್ವಯದಲ್ಲಿದ್ದು, ತ್ವರಿತ ಕ್ರಮ ಮತ್ತು ನ್ಯಾಯಸಮ್ಮತ ತನಿಖೆ ನಡೆಯುವಂತೆ ನೋಡಿಕೊಳ್ಳುತ್ತಿದೆ.
