ಬಳ್ಳಾರಿ: ಜಿಲ್ಲೆಯ ಸಿರಗುಪ್ಪ (Siraguppa) ತಾಲೂಕಿನ ಉತ್ತನೂರು ಗ್ರಾಮದ ಬಳಿ ಆಕಸ್ಮಿಕ ಬೆಂಕಿ ಅನಾಹುತದಿಂದ 60 ಎಕರೆ ಕಬ್ಬು (Sugarcane) ಬೆಳೆ ಬೆಂಕಿಗಾಹುತಿಯಾಗಿದೆ. ಅಯ್ಯನಗೌಡ್ರ, ದೊಡ್ಡಬಸನಗೌಡ್ರ, ತಿಮ್ಮನಗೌಡ್ರಗೆ ಸೇರಿದ ಬೆಳೆ ಅಗ್ನಿಗಾಹುತಿಯಾಗಿದ್ದು, ಅಗ್ನಿಶಾಮಕ ದಳದ ಸಿಬ್ಬಂದಿಯಿಂದ ಬೆಂಕಿ ನಂದಿಸುವ ಕಾರ್ಯ ನಡೆಯುತ್ತಿದೆ.