ಪುತ್ತೂರು: ನೂರಾನಿ ಫ್ಯಾಮಿಲಿ ಟ್ರಸ್ಟ್ ಬೆಟ್ಟಂಪಾಡಿ (ರಿ) ಇದರ ವತಿಯಿಂದ ಏಳನೇ ವರ್ಷದ ಕುಟುಂಬ ಸಂಗಮವು ಬೆಟ್ಟಂಪಾಡಿ ಅರಾ ಹೌಸ್ ವಠಾರದಲ್ಲಿ ನಡೆಯಿತು.
ಟ್ರಸ್ಟ್ ಅಧ್ಯಕ್ಷ ಮೂಸಲ್ ಮದನಿ ಕಕ್ಕೂರು ಸಭಾಧ್ಯಕ್ಷತೆ ವಹಿಸಿದ್ದರು. ಅಬ್ದುಲ್ ಅಝೀಝ್ ಮುಸ್ಲಿಯಾರ್ ಕಾವು ಸಭೆ ಯನ್ನು ಉದ್ಘಾಟಿಸಿದರು. ಕುಟುಂಬದ ವಿದ್ಯಾರ್ಥಿಗಳಿಂದ ಕಿರಾಅತ್, ಹಾಡು, ಭಾಷಣ, ಕ್ವಿಝ್, ಕ್ರಾಫ್ಟ್ ಇತ್ಯಾದಿ ಸ್ಪರ್ಧೆಗಳು ನಡೆಯಿತು.
ಕುಟುಂಬದ ಐದು ಮಂದಿ ಹಿರಿಯರನ್ನು ಈ ಸಂದರ್ಭ ಶಾಲು ಹೊದಿಸಿ ಸ್ಮರಣಿಕೆ ನೀಡಿ ಗೌರವಿಸಲಾಯಿತು. ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್ ಗಳಿಸಿದ ಕುಟುಂಬದ ವಿದ್ಯಾರ್ಥಿಗಳು ಮತ್ತು ಮಹಿಳಾ ಶರೀಅತ್ ಕಾಲೇಜಿನಲ್ಲಿ ಪದವಿ ಪಡೆದ ಸಾಧಕರನ್ನೂ ಸನ್ಮಾನಿಸಲಾಯಿತು.
ಕುಟುಂಬ ಸದಸ್ಯರಾದ ಅಬ್ದುಲ್ ಖಾದರ್ ರಝ್ವಿ ದೇರಳಕಟ್ಟೆ, ಅಬೂಬಕರ್ ಸಅದಿ ಕುಕ್ಕಾಜೆ ಮಾತನಾಡಿದರು. ವೇದಿಕೆ ಯಲ್ಲಿ ಕುಟುಂಬದ ಪ್ರಮುಖರಾದ ಅಬ್ದುಲ್ ಖಾದರ್ ಹಾಜಿ ಅಂಕತ್ತಳ, ಮೂಸ ಕುಂಞಿ ಹಾಜಿ ಮಾಡಾವು, ಮುಹಮ್ಮದ್ ಪಳ್ಳಿತರು, ದಾವೂದ್ ಲತ್ವೀಫಿ ಕುಕ್ಕಾಜೆ, ಇಸ್ಮಾಯಿಲ್ ಸಅದಿ ಅಂಕತ್ತಳ, ಖಲಂದರ್ ಹಿಮಮಿ, ಹಮೀದ್ ಹಿಮಮಿ, ಮುಹಮ್ಮದ್ ಹನೀಫ್, ಮುಹಮ್ಮದ್ ಕುಂಞಿ ಅಂಕತ್ತಳ, ಶರೀಫ್ ನಿಡ್ಪಳ್ಳಿ , ಖಲಂದರ್ ಗಡಿಪಿಲ, ಫಾರೂಕ್ ಕೊಡಾಜೆ ಉಪಸ್ಥಿತರಿದ್ದರು.
ಫ್ಯಾಮಿಲಿ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಅಝೀಝ್ ನೂರಾನಿ ಸ್ವಾಗತಿಸಿ, ವಂದಿಸಿದರು.