ಗೆಳೆಯನ ಜೊತೆ ಸಮುದ್ರದಲ್ಲಿ ಈಜಲು ಹೋಗಿದ್ದ ಯುವಕ ನೀರುಪಾಲಾಗಿರುವಂತಹ ಘಟನೆ ಮಂಗಳೂರಿನ ಲೈಟ್ ಹೌಸ್ ಬೀಚ್ನಲ್ಲಿ ನಡೆದಿದೆ. ಮಂಗಳೂರು: ಗೆಳೆಯನ ಜೊತೆ ಸಮುದ್ರದಲ್ಲಿ ಈಜಲು ಹೋಗಿದ್ದ ಯುವಕ ನೀರುಪಾಲಾಗಿರುವಂತಹ ಘಟನೆ ಮಂಗಳೂರಿನ ಲೈಟ್ ಹೌಸ್ ಬೀಚ್ನಲ್ಲಿ ನಡೆದಿದೆ.
ಸುರತ್ಕಲ್ನ ಕಾನ ಗ್ರಾಮದ ನಿವಾಸಿ 18 ವರ್ಷದ ಸತ್ಯಂ ಮೃತ ದುರ್ದೈವಿ. ಇನ್ನು ಸತ್ಯಂ ಜೊತೆ ತೆರಳಿದ್ದ ಪ್ರಭಾಕರನ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಸತ್ಯಂ ಮೃತದೇಹಕ್ಕಾಗಿ ಸ್ಥಳೀಯ ಮೀನುಗಾರರು ಶೋಧ ಕಾರ್ಯ ಆರಂಭವಾಗಿದೆ. ಸುರತ್ಕಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.