Home Uncategorized Assembly Session, Karnataka News Live: ಚಳಿಗಾಲ ಅಧಿವೇಶನಕ್ಕೆ ಕೌಂಟ್​ ಡೌನ್​, ಹೋರಾಟಕ್ಕೆ ಸಜ್ಜಾದ ರೈತ...

Assembly Session, Karnataka News Live: ಚಳಿಗಾಲ ಅಧಿವೇಶನಕ್ಕೆ ಕೌಂಟ್​ ಡೌನ್​, ಹೋರಾಟಕ್ಕೆ ಸಜ್ಜಾದ ರೈತ ಸಂಘಟನೆಗಳು

13
0
Advertisement
bengaluru

ಬೆಳಗಾವಿ: ಇಂದಿನಿಂದ ಬೆಳಗಾವಿಯಲ್ಲಿ ಚಳಿಗಾಲದ ವಿಧಾನಮಂಡಲ ಅಧಿವೇಶನ ಶುರುವಾಗಿದೆ(Belagavi Winter Session). ಸುವರ್ಣಸೌಧದಲ್ಲಿ(Suvarna Soudha) 10 ದಿನಗಳ ಕಾಲ ನಡೆಯಲಿರುವ ಅಧಿವೇಶನದಲ್ಲಿ ಬಿಜೆಪಿ ಸರ್ಕಾರದ(BJP Government) ವಿರುದ್ಧ ಮುಗಿಬೀಳಲು ಪ್ರತಿಪಕ್ಷಗಳು ಸಜ್ಜಾಗಿವೆ. ವಿಪಕ್ಷಗಳಿಗೆ ತಿರುಗೇಟು ನೀಡಲು ಬಿಜೆಪಿ ನಾಯಕರಿಂದಲೂ ಸಿದ್ಧತೆ ನಡೆಸಿವೆ. ಮಹಾರಾಷ್ಟ್ರ-ಕರ್ನಾಟಕ ರಾಜ್ಯಗಳ ನಡುವಿನ ಗಡಿ ವಿವಾದ, ಮಂಗಳೂರಿನಲ್ಲಿ ಆಟೋದಲ್ಲಿ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣ, ಬೆಂಗಳೂರಿನಲ್ಲಿ ವೋಟರ್ ಐಡಿ ಪರಿಷ್ಕರಣೆಯಲ್ಲಿ ಅಕ್ರಮ ವಿಚಾರ, ರಾಜ್ಯ ಸರ್ಕಾರದ ವಿರುದ್ಧ 40 ಪರ್ಸೆಂಟ್ ಕಮಿಷನ್​ ಆರೋಪ, ಬಿಜೆಪಿಗೆ ರೌಡಿಶೀಟರ್​ಗಳ ಸೇರ್ಪಡೆ, ಪಿಎಸ್​ಐ ನೇಮಕಾತಿ ಹಗರಣ, ಎಸ್​ಸಿ, ಎಸ್​ಟಿ ಮೀಸಲಾತಿ ಹೆಚ್ಚಳ ವಿಚಾರ, ಕಬ್ಬು ಬೆಳೆಗಾರರ ಸಮಸ್ಯೆ, ಉ.ಕರ್ನಾಟಕ ಭಾಗದ ಸಮಸ್ಯೆ ಸೇರಿ ಹಲವು ವಿಷಯಗಳ ಬಗ್ಗೆ ಚರ್ಚೆ ಆಗಲಿದೆ. ಮತ್ತೊಂದೆಡೆ ಅಧಿವೇಶನಕ್ಕೆ ವಿರುದ್ಧವಾಗಿ MES ಮಹಾಮೇಳಾವ್ ಆಯೋಜನೆ ಮಾಡಿದ್ದು ಮಹಾಮೇಳಾವ್‌ಗೆ ಶಿವಸೇನೆ ಸಂಸದ ಧೈರ್ಯಶೀಲ್ ಮಾನೆ ಬೆಳಗಾವಿಗೆ ಬರಲಿದ್ದಾರೆ. ಆದ್ರೆ ಅವರಿಗೆ ಪ್ರವೇಶಕ್ಕೆ ನಿರ್ಬಂಧಿಸಿ ಬೆಳಗಾವಿ ಡಿಸಿ ನಿತೇಶ್ ಪಾಟೀಲ್ ಆದೇಶ‌ ಹೊರಡಿಸಿದ್ದಾರೆ. ಜೊತೆಗೆ ಎರಡು ರೈತ ಸಂಘಟನೆಗಳು ಪ್ರತ್ಯೇಕ ಹೋರಾಟಕ್ಕೆ ಸಿದ್ಧತೆ ಮಾಡಿವೆ. ಹೀಗಾಗಿ ಬೆಳಗಾವಿಯಲ್ಲಿಂದು ಭಾರಿ ಗದ್ದಲಗಳಾಗುವ ಸಾಧ್ಯತೆ ಇದೆ.


bengaluru

LEAVE A REPLY

Please enter your comment!
Please enter your name here