ಬೆಂಗಳೂರು:
ಸರ್ವತೋಮುಖ ಅಭಿವೃದ್ಧಿ ಹಾಗೂ ಬೆಂಗಳೂರನ್ನು ಜಾಗತಿಕ ಆಕರ್ಷಣೆಯ ಕೇಂದ್ರವನ್ನಾಗಿ ಮಾಡುವ ಉದ್ದೇಶದಿಂದ ಕರ್ನಾಟಕ ಸರ್ಕಾರವು ‘ಬ್ಯಾಂಡ್ ಬೆಂಗಳೂರು ಅಭಿಯಾನ’ ವನ್ನು ಹಮ್ಮಿಕೊಂಡಿದೆ.
ಈ ವಿಷಯಕ್ಕೆ ಸಂಬಂಧಪಟ್ಟಂತೆ ಎಂಟು ವಿವಿಧ ಆಯಾಮಗಳಲ್ಲಿ ಬೆಂಗಳೂರನ್ನು ಜಾಗತಿಕ ಮನ್ನಣೆಯ ಕೇಂದ್ರವನ್ನಾಗಿಸುವ ಉದ್ದೇಶದಿಂದ ಮಾನ್ಯ ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವರಾದ ಶ್ರೀ ಡಿ.ಕೆ ಶಿವಕುಮಾರ್ ರವರ ಅಧ್ಯಕ್ಷತೆಯಲ್ಲಿ “ಬ್ರಾಂಡ್ ಬೆಂಗಳೂರು ಸಮ್ಮೇಳನ” ವನ್ನು ದಿನಾಂಕ: 09-10-2023 ರ ಸೋಮವಾರ ಬೆಳಿಗ್ಗೆ 10.00 ಗಂಟೆಗೆ ಜ್ಞಾನ ಜ್ಯೋತಿ ಸಭಾಂಗಣ(ಸೆಂಟ್ರಲ್ ಕಾಲೇಜು ಆವರಣ) ದಲ್ಲಿ ಏರ್ಪಡಿಸಲಾಗಿದೆ.
ಪ್ರವಾಸೋದ್ಯಮ, ಆರೋಗ್ಯ, ಹೂಡಿಕೆ, ಶಿಕ್ಷಣ ಮತ್ತು ಸಂಶೋಧನೆ, ಉದ್ಯಮ ಶೀಲತೆ, ಮೂಲಭೂತ ಸೌಕರ್ಯ, ನವನವೀನ ಆವಿಷ್ಕಾರಗಳು, ಉದ್ಯೋಗ ಸೃಷ್ಠಿ, ಆರ್ಥಿಕ ಕ್ರೋಢಿಕರಣ ಸೇರಿದಂತೆ ಹಲವು ಪ್ರಮುಖ ವಿಷಯಗಳ ಬಗ್ಗೆ ಈ ಸಮ್ಮೇಳನಕ್ಕೆ ಆಗಮಿಸುವ ಗಣ್ಯರಿಂದ ಸಲಹೆಗಳನ್ನು ನಿರೀಕ್ಷಿಸಲಾಗಿದೆ.
ಬ್ಯಾಂಡ್ ಬೆಂಗಳೂರು ಸಮ್ಮೇಳನದಲ್ಲಿ ಮಾನ್ಯ ಸಚಿವರು, ಶಾಸಕರು, ಸಂಸದರು, ವಿಧಾನಪರಿಷತ್/ರಾಜ್ಯ ಸಭಾ ಸದಸ್ಯರು, ಸರ್ಕಾರದ ವಿವಿಧ ಇಲಾಖೆಯ ಹಿರಿಯ ಅಧಿಕಾರಿಗರು, ನಿವೃತ್ತ ಹಿರಿಯ ಅಧಿಕಾರಿಗಳು, 8 ವಿಚಾರಗಳ ತಜ್ಞರು, ಗಣ್ಯ ವ್ಯಕ್ತಿಗಳು ಭಾಗವಹಿಸಿ, ಹೊಸ ಬೆಂಗಳೂರಿನ ನೀಲನಕ್ಷೆಯನ್ನು ತಯಾರಿಸಲು ದೃಷ್ಟಿಕೋನ ಮತ್ತು ದೂರದೃಷ್ಟಿ ಚಿಂತನೆಗಳನ್ನು ಹಂಚಿಕೊಳ್ಳಲಾಗುತ್ತದೆ.
ಬ್ರ್ಯಾಂಡ್ ಬೆಂಗಳೂರು ಪರಿಕಲ್ಪನೆ:
ಬ್ರ್ಯಾಂಡ್ ಬೆಂಗಳೂರು ಪರಿಕಲ್ಪನೆಯು ಪರಿಣಾಮಕಾರಿ ನಗರ ಯೋಜನೆ, ಸುಸ್ಥಿರ ಒಳಚರಂಡಿ ವ್ಯವಸ್ಥೆಗಳು, ದಕ್ಷ ಸಾರಿಗೆ ವ್ಯವಸ್ಥೆಗಳು ಮತ್ತು ಸ್ಮಾರ್ಟ್ ಟ್ರಾಫಿಕ್ ನಿರ್ವಹಣೆ, ಪಾದಚಾರಿ ಸ್ನೇಹಿ ರಸ್ತೆಗಳು, ನಾಗರಿಕರ ಸುರಕ್ಷತೆ ಮತ್ತು ಅನುಕೂಲಕ್ಕಾಗಿ ಪ್ರಮುಖ ಸ್ಥಾನವನ್ನು ನೀಡುತ್ತದೆ. ಮಾಲಿನ್ಯ ರಹಿತ ಮತ್ತು ಹಸಿರು ನಗರವನ್ನಾಗಿ ಮಾಡಲು ಉತ್ತಮ ಯೋಜಿತ ಪಾದಚಾರಿ ಮಾರ್ಗಗಳು, ಮೀಸಲಾದ ಸೈಕ್ಲಿಂಗ್ ಮಾರ್ಗಗಳು ಮತ್ತು ಹಸಿರು ಸ್ಥಳಗಳು ಸಕ್ರಿಯ ಸಾರಿಗೆಯನ್ನು ಮತ್ತು ಆರೋಗ್ಯಕರ ಜೀವನಶೈಲಿಯನ್ನು ಉತ್ತೇಜಿಸುತ್ತವೆ.
ವೇಗವಾದ ಮತ್ತು ತಡೆರಹಿತ ಪ್ರಯಾಣ ಮತ್ತು ಪ್ರಯಾಣದ ಸಮಯವನ್ನು ಕಡಿಮೆ ಮಾಡಲು ದಕ್ಷ ಸಾರಿಗೆ ವ್ಯವಸ್ಥೆಗಳು ಮತ್ತು ಸ್ಕಾರ್ಟ್ ಟ್ರಾಫಿಕ್ ನಿರ್ವಹಣೆಯಿಂದ ಮಾತ್ರ ಸಾಧ್ಯವಿದ್ದು, ಬಸ್ಸುಗಳು ಮತ್ತು ಮೆಟ್ರೋ ಮಾರ್ಗಗಳು ಸೇರಿದಂತೆ ಸಮಗ್ರ ಸಾರ್ವಜನಿಕ ಸಾರಿಗೆ ತಾಣಗಳು ಎಲ್ಲಾ ನಿವಾಸಿಗಳಿಗೆ ಪ್ರಯಾಣಿಸುವುದಕ್ಕೆ ಅನುಕೂಲಕರ ಆಯ್ಕೆಯಾಗಿರುತ್ತದೆ.
ನಗರದಲ್ಲಿ ತಗ್ಗು ಪ್ರದೇಶಗಳನ್ನು ಜಲಾವೃತಗೊಳ್ಳುವುದರಿಂದ ನಿಯಂತ್ರಿಸಬೇಕಾದರೆ ಪರಿಣಾಮಕಾರಿ ನಗರ ಯೋಜನೆ ಮತ್ತು ದೃಢವಾದ ಮಳೆನೀರಿನ ನಿರ್ವಹಣೆಯ ಮೂಲಕ ಮಾತ್ರ ಸಾಧ್ಯ ಸುಸ್ಥಿರ ಒಳಚರಂಡಿ ವ್ಯವಸ್ಥೆಗಳು, ಮತ್ತು ನೀರಿನ ನಿರ್ವಹಣೆಯಿಂದ ಭಾರೀ ಮಳೆಯ ಸಮಯದಲ್ಲಿಯೂ ಜೀವಗಳು ಮತ್ತು ಯಾವುದೇ ಆಸ್ತಿಗಳಿಗೆ ನಷ್ಟವಾಗದಂತೆ ರಕ್ಷಿಸುವ ಗುರಿಯನ್ನು ಹೊಂದಿ, ಜಲಾವೃತ-ಮುಕ್ತ ಪರಿಸರವನ್ನು ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ.
ಮಕ್ಕಳ ದೈಹಿಕ, ಮಾನಸಿಕ ಮತ್ತು ಭಾವನಾತ್ಮಕ ಯೋಗಕ್ಷೇಮಕ್ಕೆ ಅನುಗುಣವಾಗಿ ಉದ್ಯಾನವನಗಳು, ಆಟದ ಮೈದಾನಗಳು ಮತ್ತು ಶೈಕ್ಷಣಿಕ ಸ್ಥಳಗಳನ್ನು ವಿನ್ಯಾಸಗೊಳಿಸಿ ಮಕ್ಕಳ ಸ್ನೇಹಿ ನಗರವನ್ನು ರಚಿಸಲು ಬ್ಯಾಂಡ್ ಬೆಂಗಳೂರು ಬದ್ಧವಾಗಿದೆ. ಸುರಕ್ಷಿತ ಮತ್ತು ಅಂತರ್ಗತ ಪರಿಸರವು ಕಲಿಕೆ, ಪರಿಶೋಧನೆ ಮತ್ತು ಸಾಮಾಜಿಕ ಸಂವಹನವನ್ನು ಪ್ರೋತ್ಸಾಹಿಸುತ್ತವೆ.
ಮಾಹಿತಿ ತಂತ್ರಜ್ಞಾನದ ಅಭಿವೃದ್ಧಿ ಹೊಂದುತ್ತಿರುವ ಕೇಂದ್ರವಾಗಿ, ಬೆಂಗಳೂರು ನಾವೀನ್ಯತೆ, ಉದ್ಯಮಶೀಲತೆ ಮತ್ತು ತಾಂತ್ರಿಕ ಪ್ರಗತಿಯನ್ನು ಉತ್ತೇಜಿಸುವುದನ್ನು ಮುಂದುವರೆಸಿದೆ. ಇದರಿಂದ ಸ್ಟಾರ್ಟ್ಅಪ್ಗಳು ಪ್ರವರ್ಧಮಾನಕ್ಕೆ ಬರಲು ಫಲವತ್ತಾದ ನೆಲವನ್ನು ಒದಗಿಸುತ್ತದೆ, ಜಾಗತಿಕ ಪ್ರತಿಭೆಗಳನ್ನು ಆಕರ್ಷಿಸುವುದರ ಜೊತೆಗೆ ಹೂಡಿಕೆಯು ಹೆಚ್ಚಾಗಿ ತಂತ್ರಜ್ಞಾನದ ಜೊತೆಗೆ ಐಟಿ ಕ್ಷೇತ್ರವು ಬೆಳವಣಿಗೆಯತ್ತ ಸಾಗಲಿದೆ.
ನಗರದ ಪ್ರಬಲ ಉದ್ಯೋಗ ಮಾರುಕಟ್ಟೆಯು ವಿವಿಧ ಕ್ಷೇತ್ರಗಳಲ್ಲಿ ವಿಪುಲ ಉದ್ಯೋಗಾವಕಾಶಗಳನ್ನು ನೀಡುವ ಮೂಲಕ ಅಂತರ್ಗತ ಆರ್ಥಿಕತೆಯನ್ನು ಖಾದ್ರಿಪಡಿಸುತ್ತದೆ. ಬೆಂಗಳೂರು ಕೌಶಲ್ಯ ಅಭಿವೃದ್ಧಿ, ವೃತ್ತಿಪರ ತರಬೇತಿ ಮತ್ತು ಉದ್ಯಮಶೀಲತೆಯನ್ನು ಉತ್ತೇಜಿಸುತ್ತದೆ. ನಾಗರಿಕರನ್ನು ಸಬಲೀಕರಣಗೊಳಿಸುತ್ತದೆ ಮತ್ತು ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸುತ್ತದೆ.
ಅಂತಾರಾಷ್ಟ್ರೀಯ ಸಹಯೋಗಗಳು ಮತ್ತು ಹೂಡಿಕೆಗಳನ್ನು ಆಕರ್ಷಿಸುವ ಮೂಲಕ ಬೆಂಗಳೂರು ಜಾಗತಿಕವಾಗಿ ರೂಪಿತಗೊಂಡಿದೆ. ಇದು ಸಾಂಸ್ಕೃತಿಕ ವೈವಿಧ್ಯತೆ, ಇತರೆ-ಸಾಂಸ್ಕೃತಿಕ ವಿನಿಮಯವನ್ನು ಹಾಗೂ ಜಾಗತಿಕ ದೃಷ್ಟಿಕೋನವನ್ನು ಉತ್ತೇಜಿಸುತ್ತದೆ, ವಿಶ್ವ ವೇದಿಕೆಯಲ್ಲಿ ಕಾಸ್ಕೋಪಾಲಿಟನ್ ನಗರವಾಗಿ ಗುರುತಿಸಿಕೊಂಡಿದೆ.
ಸ್ಟಾರ್ಟ್ಅಪ್ಗಳನ್ನು ಉತ್ತೇಜಿಸುವ ಮತ್ತು ನಾವೀನ್ಯತೆಯನ್ನು ಉತ್ತೇಚಿಸುವತ್ತ ಗಮನಹರಿಸುವುದರೊಂದಿಗೆ, ಬೆಂಗಳೂರು ಸೃಜನಶೀಲತೆ ಮತ್ತು ಉದ್ಯಮಶೀಲತೆಯ ಸಂಸ್ಕೃತಿಯನ್ನು ಪ್ರೋತ್ಸಾಹಿಸುತ್ತದೆ. ಇನ್ನು ಬೇಟರ್ಗಳು, ವೇಗವರ್ಧಕಗಳು ಮತ್ತು ಬೆಂಬಲ ನೀತಿಗಳು ನವೀನ ಆಲೋಚನೆಗಳನ್ನು ಪೋಷಿಸುವ ಮತ್ತು ಬೆಂಬಲಿಸುವ ಪರಿಸರ ವ್ಯವಸ್ಥೆಯನ್ನು ರಚಿಸುತ್ತವೆ ಮತ್ತು ಅವುಗಳನ್ನು ಯಶಸ್ವಿ ವ್ಯವಹಾರಗಳಾಗಿ ಪರಿವರ್ತಿಸುತ್ತವೆ. ಬ್ರ್ಯಾಂಡ್ ಬೆಂಗಳೂರು ಒಳಗೊಳ್ಳುವಿಕೆಯ ಪ್ರಮುಖ ಮೌಲ್ಯವಾಗಿದ್ದು, ನಗರವು ವೈವಿಧ್ಯತೆಯನ್ನು ಸ್ವೀಕರಿಸುತ್ತದೆ.
ಸಮಾನ ಅವಕಾಶಗಳನ್ನು ಕೊಡುವುದರ ಜೊತೆಗೆ ಎಲ್ಲರಿಗೂ ನೆಲೆ ನೀಡುತ್ತದೆ. ಅಂತರ್ಗತ ನೀತಿಗಳು, ತಡೆ-ಮುಕ್ತ ಮೂಲಸೌಕರ್ಯ ಮತ್ತು ಸಾಮಾಜಕ ಉಪಕ್ರಮಗಳು ಪ್ರತಿಯೊಬ್ಬರೂ ಅಭಿವೃದ್ಧಿ ಹೊಂದುವ ಮತ್ತು ನಗರದ ಬೆಳವಣಿಗೆಗೆ ಕೊಡುಗೆ ನೀಡುವ ವಾತಾವರಣವನ್ನು ಸೃಷ್ಟಿಸುತ್ತವೆ. ಬೆಂಗಳೂರು ನಾವೀನ್ಯತೆ ಮತ್ತು ಪ್ರಗತಿಯ ದಾರಿದೀಪವಾಗಲು ಹಾತೊರೆಯುತ್ತಿದ್ದು, ಸ್ಟಾರ್ಟ್ಅಪ್ಗಳು, ತಂತ್ರಜ್ಞಾನ ಮತ್ತು ಅಂತರ್ಗತ ಬೆಳವಣಿಗೆಯು ಜೊತೆಯಲ್ಲಿ ಸಾಗುತ್ತದೆ. ಇದು ಸಹಯೋಗವನ್ನು ಬೆಳೆಸುವ, ವ್ಯಕ್ತಿಗಳಿಗೆ ಅಧಿಕಾರ ನೀಡುವ ಪರಿಸರ ವ್ಯವಸ್ಥೆಯನ್ನು ರಚಿಸಲು ಶ್ರಮಿಸುತ್ತದೆ ಮತ್ತು ಬೆಂಗಳೂರಿನ ನಿವಾಸಿಗಳ ಒಳಿತಿಗಾಗಿ ಧನಾತ್ಮಕ ಬದಲಾವಣೆಯನ್ನು ತರುತ್ತದೆ.
ಎಂಟು ವಿಚಾರಗಳ ವಿವರ:
1. ಸಂಚಾರಯುಕ್ತ ಬೆಂಗಳೂರು
2. ಹಸಿರು ಬೆಂಗಳೂರು
3. ಸ್ವಚ್ಛ ಬೆಂಗಳೂರು
4. ಜನಹಿತ ಬೆಂಗಳೂರು
5. ಆರೋಗ್ಯಕರ ಬೆಂಗಳೂರು
6. ಟೆಕ್ ಬೆಂಗಳೂರು
7. ಜಲಸುರಕ್ಷಾ ಬೆಂಗಳೂರು
8. ಶೈಕ್ಷಣಿಕ ಬೆಂಗಳೂರು