ಬೆಂಗಳೂರು:
ಬಿಡಿಎ ಸ್ವಾಧೀನ ಪ್ರಕ್ರಿಯೆಗೆ ಒಳಪಟ್ಟಿರುವ ಬಡಾವಣೆಗಳಿಗೆ ಭೂಮಿ ನೀಡಿ ಪರಿಹಾರ ಪಡೆದು ಮತ್ತು ಅದೇ ದಾಖಲೆ ಆಧಾರದಲ್ಲಿ ಮತ್ತೊಮ್ಮೆ ಪರಿಹಾರ ತೆಗೆದುಕೊಂಡು ವಂಚನೆ ಮಾಡು ವವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು ಎಂದು ಬಿಡಿಎ ಅಧ್ಯಕ್ಷ ಎಸ್.ಆರ್. ವಿಶ್ವನಾಥ್ ಎಚ್ಚರಿಕೆ ನೀಡಿದ್ದಾರೆ.
ಇಂದು ಹಿರಿಯ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು,ಪರಿಹಾರ ವಿಚಾರದಲ್ಲಿ ವಂಚನೆ ಮಾಡುವ ವರಿಗೆ ಸಹಕಾರ ನೀಡುವ ಬಿಡಿಎ ಅಧಿಕಾರಿಗಳನ್ನು ತಕ್ಷಣವೇ ಅಮಾನತು ಮಾಡಿ ಶಿಸ್ತುಕ್ರಮ ಜರುಗಿಸಲಾಗು ತ್ತದೆ.ಬದಲಿ ನಿವೇಶನಗಳು,ಖಾಲಿ ಇರುವ ನಿವೇಶನಗಳು ಮತ್ತು ಬಿಡಿಎ ಆಸ್ತಿಯ ವಿವರ ಗಳನ್ನು ಮುಚ್ಚಿಡುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಬಿಡಿಎ ಸ್ವಾಧೀನಕ್ಕೆ ಒಳಪಟ್ಟ ಬಡಾವಣೆಗಳಲ್ಲಿ ಅಕ್ರಮವಾಗಿ ಮನೆ ಅಥವಾ ಬಡಾವಣೆ ನಿರ್ಮಾಣಕ್ಕೆ ಅವಕಾ ಶ ಕೊಡುವ ಅಥವಾ ನೋಂದಣಿ ಮಾಡಿಕೊಡುವ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಿ ಶಿಕ್ಷೆಗೆ ಗುರಿ ಪಡಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದ ಅವರು,ಯಾವುದೇ ಕಾರಣಕ್ಕೂ ಬಿಡಿಎ ಉನ್ನತಾಧಿಕಾರಿಗಳ ಗಮ ನಕ್ಕೆ ತಂದು ಅನುಮತಿ ಪಡೆಯದೇ ಬದಲಿ ನಿವೇಶನಗಳನ್ನು ಮಂಜೂರು ಮಾಡಬಾರದು ಎಂದು ಸೂಚಿ ಸಿದರು.
ಬಿಡಿಎ ನಿರ್ಮಾಣ ಮಾಡಿರುವ ಮತ್ತು ನಿರ್ಮಾಣದ ಹಂತದಲ್ಲಿರುವ ಅಪಾರ್ಟ್ ಮೆಂಟ್ ಗಳಿಗೆ ಅಗತ್ಯ ಮೂಲ ಸೌಕರ್ಯಗಳನ್ನು ಒದಗಿಸಲು ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.ಈ ಸಭೆಯಲ್ಲಿ ಬಿಡಿಎ ಆಯುಕ್ತ ಡಾ.ಎಚ್.ಆರ್.ಮಹದೇವ, ವಲಯಗಳ ಅಧಿಕಾರಿಗಳು ಮತ್ತು ಇತ ರೆ ಉನ್ನತಾಧಿಕಾರಿಗಳು ಇದ್ದರು.