Home ಬೆಂಗಳೂರು ನಗರ ಗುರುವಾಯೂರು ಶ್ರೀ ಕೃಷ್ಣನ ದರ್ಶನ ಪಡೆದ ಡಾ.ಅಶ್ವತ್ಥನಾರಾಯಣ

ಗುರುವಾಯೂರು ಶ್ರೀ ಕೃಷ್ಣನ ದರ್ಶನ ಪಡೆದ ಡಾ.ಅಶ್ವತ್ಥನಾರಾಯಣ

83
0
Karnataka Minister Ashwathanarayana visits Guruvayur Sri Krishna Temple

ಗುರುವಾಯೂರು:

ಉನ್ನತ ಶಿಕ್ಷಣ, ಐಟಿ ಬಿಟಿ, ವಿಜ್ಞಾನ, ತಂತ್ರಜ್ಞಾನ ಖಾತೆಗಳ ಸಚಿವ ಡಾ. ಸಿ.ಎನ್.ಅಶ್ವತ್ಥನಾರಾಯಣ ಅವರು ಇಂದು ಕೇರಳದ ಗುರುವಾಯೂರು ಕ್ಷೇತ್ರಕ್ಕೆ ಭೇಟಿ ನೀಡಿ ಶ್ರೀಕೃಷ್ಣನ ದರ್ಶನ ಪಡೆದರು.

ಬೆಳಗ್ಗೆಯೇ ಇಲ್ಲಿಗೆ ಬಂದ ಸಚಿವರನ್ನು ದೇವಳದ ಅಧಿಕಾರಿಗಳು ಬರ ಮಾಡಿಕೊಂಡರು. ಬಳಿಕ ಅವರು ಸಾಂಪ್ರದಾಯಿಕ ಧಿರಿಸುಗಳನ್ನು ಧರಿಸಿ ಕೃಷ್ಣ ದರ್ಶನ ಮಾಡಿದರು.

ಈ ಸಂದರ್ಭದಲ್ಲಿ, ಇಡೀ ದೇಶ ಮತ್ತು ಜಗತ್ತಿನೆಲ್ಲೆಡೆ ಕೋರೋನ ಮಾರಿಯನ್ನು ತೊಲಗಿಸುವಂತೆ ದೇವರಲ್ಲಿ ಪ್ರಾರ್ಥನೆ ಮಾಡಿದರು ಸಚಿವರು.

ಬಳಿಕ ದೇಗುಲದ ಪ್ರಾಂಗಣದಲ್ಲಿ ದೇವರ ಪಟ್ಟದ ಅನೆಗೆ ಬಾಳೆ ಹಣ್ಣು ತಿನ್ನಿಸಿದರು.

LEAVE A REPLY

Please enter your comment!
Please enter your name here