ಬೆಂಗಳೂರು:
ಯಲಚೇನಹಳ್ಳಿ-ಅಂಜನಾಪುರ ವಿಸ್ತರಿತ ನಮ್ಮ ಮೆಟ್ರೋ ಹಸಿರು ಮಾರ್ಗಕ್ಕೆ ಗುರುವಾರ ಚಾಲನೆ ದೊರಕಿದ್ದು, ಪರಿಣಾಮ, ಪ್ರತಿನಿತ್ಯ 75 ಸಾವಿರ ಪ್ರಯಾಣಿಕರಿಗೆ ಅನುಕೂಲವಾಗಲಿದೆ.
6 ಕಿ.ಮೀ ಉದ್ದದ ನೂತನ ಮಾರ್ಗಕ್ಕೆ ವಿಡಿಯೋ ಕಾನ್ಫರೆನ್ಸ್ ಮೂಲಕ ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಚಾಲನೆ ನೀಡಿದ್ದಾರೆ. ಈ ಮೂಲಕ ನಮ್ಮ ಮೆಟ್ರೋ ಪ್ರಯಾಣಿಕರಿಗೆ ಸಂಕ್ರಾಂತಿ ದಿನದಂದೇ ಸಿಹಿಸುದ್ದಿ ದೊರಕಿದೆ.

ಉದ್ಗಾಟನೆ ನಂತರ ಮಾತನಾಡಿದ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಐಟಿ ಸಿಟಿ ಜೀವನ ಸುಲಭವಾಗಿಸಲು ಮೂಲಸೌಕರ್ಯ ಸುಧಾರಣೆ ಮೂಲಕ ನಗರದ ಹೆಚ್ಚಿನ ಅಭಿವೃದ್ಧಿಗೆ ತಮ್ಮ ಸರ್ಕಾರ ಹೆಚ್ಚಿನ ಆದ್ಯತೆ ನೀಡಲಿದೆ ಎಂದು ಹೇಳಿದರು.
ಮೆಟ್ರೊ ವಿಸ್ತರಣಾ ಮಾರ್ಗದ ಉದ್ಘಾಟನೆಯು ನಗರದಲ್ಲಿ ಸುಖಕರ ಪ್ರಯಾಣಸ್ಮಾರ್ಟ್ ಚಲನಶೀಲತೆ ಆಯ್ಕೆಗಳನ್ನು ಸಕ್ರಿಯಗೊಳಿಸಲು ಬೆಂಗಳೂರು ಮಿಷನ್ 2022 ರ ಗುರಿಯತ್ತ ಇಟ್ಟ ಮತ್ತೊಂದು ಹೆಜ್ಜೆಯಾಗಿದೆ.
ಸಂಕ್ರಾಂತಿಯ ಶುಭ ಸಂದರ್ಭದಲ್ಲಿ ಇಂದು ಬೆಂಗಳೂರು ಮೆಟ್ರೋ ರೈಲು ಸೇವೆಯ ಯಲಚೇನಹಳ್ಳಿ ನಿಲ್ದಾಣದಿಂದ ರೇಷ್ಮೆಸಂಸ್ಥೆ ನಿಲ್ದಾಣದವರೆಗಿನ 6 ಕಿ.ಮೀ ವಿಸ್ತರಿತ ಮೆಟ್ರೋ ಹಸಿರು ಮಾರ್ಗದ ಲೋಕಾರ್ಪಣೆಯನ್ನು ನೆರವೇರಿಸಲಾಯಿತು. ಕೇಂದ್ರ ಸಚಿವ ಶ್ರೀ @HardeepSPuri ಅವರು ವರ್ಚುವಲ್ ವೇದಿಕೆ ಮುಖಾಂತರ ಮಾರ್ಗಕ್ಕೆ ಹಸಿರು ನಿಶಾನೆ ತೋರಿದರು. pic.twitter.com/VyTzmTJwpy
— B.S. Yediyurappa (@BSYBJP) January 14, 2021
ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಹರ್ದೀಪ್ ಸಿಂಗ್ ಪುರಿ, ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ ವಿ ಸದಾನಂದ ಗೌಡ, ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಆರ್ ಅಶೋಕ್, ಬಿ ಬಸವರಾಜ್, ಮತ್ತು ಲೋಕಸಭಾ ಸದಸ್ಯ ಪಿ ಸಿ ಮೋಹನ್ ಸೇರಿದಂತೆ ಇತರರು ಈ ಸಮಯ ಉಪಸ್ಥಿತರಿದ್ದರು. UNI