ಬಳ್ಳಾರಿ ನಗರದ ಸ್ಟೇಡಿಯಂ ಬಳಿ ಇರುವ ಕೆರೆಯ ಮುಂಭಾಗ ನಿರ್ಮಾಣ ಮಾಡಲಾಗಿರುವ ಪುನೀತ್ ರಾಜ್ ಕುಮಾರ್ ಅವರ 23 ಅಡಿಯ ಬೃಹತ್ ಪುತ್ಥಳಿಯನ್ನು ಶನಿವಾರ ಅನಾವರಣ ಮಾಡಲಾಯಿತು. ಬಳ್ಳಾರಿ: ಬಳ್ಳಾರಿ ನಗರದ ಸ್ಟೇಡಿಯಂ ಬಳಿ ಇರುವ ಕೆರೆಯ ಮುಂಭಾಗ ನಿರ್ಮಾಣ ಮಾಡಲಾಗಿರುವ ಪುನೀತ್ ರಾಜ್ ಕುಮಾರ್ ಅವರ 23 ಅಡಿಯ ಬೃಹತ್ ಪುತ್ಥಳಿಯನ್ನು ಶನಿವಾರ ಅನಾವರಣ ಮಾಡಲಾಯಿತು.
ಕಬ್ಬಿಣ ಹಾಗೂ ಪೈಬರ್ ಮಿಶ್ರಣದಿಂದ ಸುಮಾರು 22 ಲಕ್ಷ ರೂ. ವೆಚ್ಚದಲ್ಲಿ ಈ ಪುತ್ಥಳಿ ನಿರ್ಮಾಣ ಮಾಡಲಾಗಿದ್ದು, ಅಶ್ವಿನ್ ಪುನೀತ್ ರಾಜ್ ಕುಮಾರ್ ಮತ್ತು ನಟ ರಾಘವೇಂದ್ರ ರಾಜ್ ಕುಮಾರ್ ಸೇರಿದಂತೆ ಸಾವಿರಾರು ಅಭಿಮಾನಿಗಳು ಪುನೀತ್ ಪುತ್ಥಳಿ ಅನಾವರಣ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.
ನಿರೀಕ್ಷೆಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ನಿಯಂತ್ರಿಸಲು ಪೊಲೀಸರು ಹರಸಾಹಸಪಡುವಂತಾಯಿತು. ರಾಜ್ ಕುಟುಂಬಸ್ಥರು ಹಾಗೂ ಪುನೀತ್ ಪುತ್ಥಳಿ ಬಳಿ ಹೋಗುವವರ ಸಂಖ್ಯೆ ಹೆಚ್ಚಾಗಿದ್ದರಿಂದ ಅವರನ್ನು ನಿಯಂತ್ರಿಸಲು ಪೊಲೀಸರು ಲಘು ಲಾಠಿ ಪ್ರಹಾರ ಕೂಡಾ ನಡೆಸಿದ್ದಾರೆ.