Home Uncategorized ಬಿಎಂಟಿಸಿಗೆ ಹೆಚ್ಚಿನ ಅನುದಾನ ನೀಡಿ ಸಾರಿಗೆ ಕೈಗೆಟುಕುವಂತೆ ಮಾಡಿ: ಸಿಎಂಗೆ ಬಿಬಿಪಿವಿ ಒತ್ತಾಯ

ಬಿಎಂಟಿಸಿಗೆ ಹೆಚ್ಚಿನ ಅನುದಾನ ನೀಡಿ ಸಾರಿಗೆ ಕೈಗೆಟುಕುವಂತೆ ಮಾಡಿ: ಸಿಎಂಗೆ ಬಿಬಿಪಿವಿ ಒತ್ತಾಯ

21
0

ಬಿಎಂಟಿಸಿಗೆ ಹೆಚ್ಚಿನ ಅನುದಾನ ನೀಡಿ ಸಾರಿಗೆ ಕೈಗೆಟುಕುವಂಟೆ ಮಾಡಬೇಕೆಂದು ಬೆಂಗಳೂರು ಬಸ್ ಪ್ರಯಾಣಿಕ ವೇದಿಕೆ (ಬಿಬಿಪಿವಿ)ಯ ಸ್ವಯಂಸೇವಕರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಶನಿವಾರ ಒತ್ತಾಯಿಸಿದ್ದಾರೆ. ಬೆಂಗಳೂರು: ಬಿಎಂಟಿಸಿಗೆ ಹೆಚ್ಚಿನ ಅನುದಾನ ನೀಡಿ ಸಾರಿಗೆ ಕೈಗೆಟುಕುವಂಟೆ ಮಾಡಬೇಕೆಂದು ಬೆಂಗಳೂರು ಬಸ್ ಪ್ರಯಾಣಿಕ ವೇದಿಕೆ (ಬಿಬಿಪಿವಿ)ಯ ಸ್ವಯಂಸೇವಕರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಶನಿವಾರ ಒತ್ತಾಯಿಸಿದ್ದಾರೆ.

ಶನಿವಾರ ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟಿಸಿದ ಬೆಂಗಳೂರು ಬಸ್ ಪ್ರಯಾಣಿಕ ವೇದಿಕೆ (ಬಿಬಿಪಿವಿ)ಯ ಸ್ವಯಂಸೇವಕರು, ಘೋಷಣಾ ಫಲಕಗಳನ್ನು ಪ್ರದರ್ಶಿಸಿದರು.

ಸರ್ಕಾರ ಜನರಿಗೆ ಸಾರಿಗೆಯನ್ನು ಕೈಗೆಟುಕುವಂತೆ ಮಾಡಬೇಕು. ಮಹಿಳೆಯರು, ತೃತೀಯಲಿಂಗಿಗಳೂ, ಹಿರಿಯ ನಾಗರಿಕರು ಮತ್ತು ವಿದ್ಯಾರ್ಥಿಗಳಿಗೆ ಉಚಿತ ಪ್ರಯಾಣ ಮಾಡಲು ಬಿಎಂಟಿಸಿಗೆ 1,500 ಕೋಟಿ ರೂ ಹಣವನ್ನು ಮೀಸಲಿಬೇಕೆಂದು ಒತ್ತಾಯಿಸಿದರು.

ಬೆಂಗಳೂರು ದೇಶದಲ್ಲೇ ಅತಿ ಹೆಚ್ಚು ಬಸ್ ಪ್ರಯಾಣ ದರವನ್ನು ಹೊಂದಿರುವ ನಗರವಾಗಿದೆ. ಇದರಿಂದ ಸಾರ್ವಜನಿಕರು ಸಂಕಷ್ಟ ಎದುರಿಸುತ್ತಿದ್ದಾರೆ. ಬೆಂಗಳೂರಿನಲ್ಲಿನ ಸಾರಿಗೆ ವ್ಯವಸ್ಥೆಯು ಪ್ರಸ್ತುತ ಅನೇಕ ಅಡೆತಡೆಗಳನ್ನು ಎದುರಿಸುತ್ತಿದೆ ಮತ್ತು ಅವುಗಳಲ್ಲಿ ಒಂದು ಸಮರ್ಪಕ ಸಂಪರ್ಕ ಮತ್ತು ಸೇವೆಯ ಕೊರತೆಯಾಗಿದೆ, ಜನರು 2-3 ಕಿ.ಮೀ ನಡೆದುಕೊಂಡು ಹೋಗಬೇಕಾಗಿದ್ದು, ಬಸ್ ಗಳಿಗಾಗಿ ಬಹಳ ಹೊತ್ತು ಕಾಯುವಂತೆ ಮಾಡಲಾಗುತ್ತಿದೆ ಎಂದು ಬಿಬಿಪಿವಿ ಸದಸ್ಯರು ಹೇಳಿದ್ದಾರೆ.

“ಸುಮಾರು 1.3 ಕೋಟಿ ಜನಸಂಖ್ಯೆಗೆ, ಬೆಂಗಳೂರಿನಲ್ಲಿ 15,000 ಕ್ಕೂ ಹೆಚ್ಚು ಬಸ್‌ಗಳ ಅಗತ್ಯವಿದೆ. ಆದರೆ, ಬಿಎಂಟಿಸಿಯ ಸೇವೆ ಅಸಮರ್ಪಕವಾಗಿದೆ. ಖಾಸಗಿ ವಾಹನಗಳಿಂದ ಮಾಲಿನ್ಯ, ಸಂಚಾರ ದಟ್ಟಣೆ ಸೇರಿದಂತೆ ಹಲವು ಸಮಸ್ಯೆಗಳಾಗುತ್ತಿವೆ. ಇನ್ನು ಹವಾಮಾನ ಬದಲಾವಣೆ ಮತ್ತಷ್ಟು ಸಮಸ್ಯೆಯನ್ನು ಎದುರು ಮಾಡುತ್ತಿದೆ ಎಂದು ಬೆಂಗಳೂರು ಬಸ್ ಪ್ರಯಾಣಿಕ ವೇದಿಕೆಯ ಸದಸ್ಯ ವಿನಯ್ ಶ್ರೀನಿವಾಸ ಅವರು ಹೇಳಿದ್ದಾರೆ.

ಹೆಚ್ಚುವರಿ ಸಿಬ್ಬಂದಿಯನ್ನು ನೇಮಿಸಿಕೊಳ್ಳಲು ಬಿಎಂಟಿಸಿಗೆ ಅನುಮತಿ ನೀಡಲಾಗಿದ್ದು, ತಕ್ಷಣವೇ 3,000 ಬಸ್‌ಗಳನ್ನು ಖರೀದಿಸಲು, ಅದಕ್ಕೆ ಅಗತ್ಯ ಬಂಡವಾಳ ಮತ್ತು ಕಾರ್ಯಾಚರಣೆಯ ವೆಚ್ಚವನ್ನು ರಾಜ್ಯ ಸರ್ಕಾರದಿಂದ ಮಂಜೂರು ಮಾಡಬೇಕು, ಸಾರಿಗೆ ನಿಗಮವು ಹಣ ಗಳಿಸಿ ಸ್ವಾವಲಂಬಿಯಾಗಬೇಕೆಂದು ಒತ್ತಾಯಿಸಿದ್ದಾರೆ.

LEAVE A REPLY

Please enter your comment!
Please enter your name here