ಹಂಪಿ ಉತ್ಸವದ ಸಮಾರೋಪ ಸಮಾರಂಭದ ವೇಳೆ ಕನ್ನಡ ಗೀತೆ ಹಾಡಲಿಲ್ಲವೆಂದು ಗಾಯಕ ಕೈಲಾಶ್ ಖೇರ್ ಅವರ ಮೇಲೆ ಕೆಲ ಕಿಡಿಗೇಡಿಗಳು ಬಾಟಲಿ ಎಸೆದ ಅಹಿತಕರ ಘಟನೆ ಭಾನುವಾರ ನಡೆದಿದೆ. ವಿಜಯನಗರ: ಹಂಪಿ ಉತ್ಸವದ ಸಮಾರೋಪ ಸಮಾರಂಭದ ವೇಳೆ ಕನ್ನಡ ಗೀತೆ ಹಾಡಲಿಲ್ಲವೆಂದು ಗಾಯಕ ಕೈಲಾಶ್ ಖೇರ್ ಅವರ ಮೇಲೆ ಕೆಲ ಕಿಡಿಗೇಡಿಗಳು ಬಾಟಲಿ ಎಸೆದ ಅಹಿತಕರ ಘಟನೆ ಭಾನುವಾರ ನಡೆದಿದೆ.
ಪ್ರೇಕ್ಷಕರ ಗ್ಯಾಲರಿಯಿಂದ ಕೈಲಾಶ್ ಖೇರ್ ಮೇಲೆ ನೀರಿನ ಬಾಟಲಿ ಎಸೆಯಲಾಗಿದೆ. ಆದರೂ ಇದಕ್ಕೆ ಹಿಂಜರಿಯದ ಗಾಯಕ ಕೈಲಾಶ್ ಅವರು ತಮ್ಮ ಗಾಯನವನ್ನು ಮುಂದುವರೆಸಿದ್ದರೆಂದು ತಿಳಿದುಬಂದಿದೆ.
ಘಟನೆ ಸಂಬಂಧ ಪೊಲೀಸರು ಇಬ್ಬರನ್ನು ಬಂಧನಕ್ಕೊಳಪಡಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆಂದು ವರದಿಗಳಿಂದ ತಿಳಿದುಬಂದಿದೆ.