ಬೆಂಗಳೂರು:
ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ದೇಶಾದ್ಯಂತ ನಡೆಯಲಿರುವ ಹರ್ ಫರ್ ತಿರಂಗ ಕಾರ್ಯಕ್ರಮದ ಪ್ರಯುಕ್ತ ಬಿಜೆಪಿ ರಾಜ್ಯ ಅಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್ ರವರು ಇಂದು ಬೆಂಗಳೂರು ಕೇಂದ್ರ ಜಿಲ್ಲೆಯ ಜಗಜೀವನ್ ರಾಮ್ ನಗರದಲ್ಲಿ ಮಾಜಿ ಶಾಸಕರು ದಲಿತ ನಾಯಕರಾದ ಶ್ರೀ ಐ ಪಿ ಡಿ ಸಾಲಪ್ಪ ಇವರ ನಿವಾಸಕ್ಕೆ ತೆರಳಿ ಶ್ರೀ ಐಪಿಡಿ ಸಾಲಪ್ಪ ರವರ ಪುತ್ರ ಶ್ರೀ ಅಶೋಕ್ ಸಾಲಪ್ಪ ಇವರಿಗೆ ತ್ರಿವರ್ಣ ಧ್ವಜವನ್ನು ನೀಡಿದರು.
ಈ ಸಂದರ್ಭದಲ್ಲಿ ರಾಜ್ಯಧ್ಯಕ್ಷರೊಂದಿಗೆ ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ರಾಜೇಶ್ ಜಿ ವಿ, ಬೆಂಗಳೂರು ಕೇಂದ್ರ ಸಂಸದರಾದ ಪಿ ಸಿ ಮೋಹನ್,ರಾಜ್ಯಸಭಾ ಸಂಸದರಾದ ಜಗ್ಗೇಶ್, ಬೆಂಗಳೂರು ಕೇಂದ್ರ ಜಿಲ್ಲಾಧ್ಯಕ್ಷರಾದ ಮಂಜುನಾಥ ಹಾಗೂ ಬೆಂಗಳೂರು ದಕ್ಷಿಣ ಜಿಲ್ಲಾಧ್ಯಕ್ಷರಾದ ಎನ್ ಆರ್ ರಮೇಶ್ ಮತ್ತು ಇತರ ಜಿಲ್ಲಾ ಪ್ರಮುಖರಗಳು ಉಪಸ್ಥಿತಿರಿದ್ದರು.