Home ಬೆಂಗಳೂರು ನಗರ ಕೋವಿಡ್-19 ತುರ್ತು ಸೇವೆಗಳಿಗಾಗಿ ದೇಶಾದ್ಯಂತ #BJYMDoctorHelpline – 080 6817 3286

ಕೋವಿಡ್-19 ತುರ್ತು ಸೇವೆಗಳಿಗಾಗಿ ದೇಶಾದ್ಯಂತ #BJYMDoctorHelpline – 080 6817 3286

44
0

ಸಹಾಯವಾಣಿಗೆ ಚಾಲನೆ ನೀಡಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ

ನವದೆಹಲಿ/ಬೆಂಗಳೂರು:

ಕೋವಿಡ್-19 ತುರ್ತು ಸೇವೆಗಳು ಹಾಗೂ ಸೋಂಕಿತರು & ವೈದ್ಯರೊಂದಿಗಿನ ಸಮಾಲೋಚನೆಗೆ ಸಹಾಯವಾಗುವ ನಿಟ್ಟಿನಲ್ಲಿ ಇಡೀ ದೇಶಾದ್ಯಂತ #BJYMDoctorHelpline- 080 6817 3286 ಸಹಾಯವಾಣಿಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ಜೆ ಪಿ ನಡ್ಡಾ ರವರು ಇಂದು ಚಾಲನೆ ನೀಡಿದರು.

ಕರೋನ ಸೋಂಕಿನ ಲಕ್ಷಣಗಳಿದ್ದಲ್ಲಿ ಅಥವಾ ಲಕ್ಷಣಗಳು ಇಲ್ಲದ್ದಿದಲ್ಲಿ, ನಿಮ್ಮ ಕೋವಿಡ್ ರಿಪೋರ್ಟ್ ಪಾಸಿಟಿವ್ ಆಗಿದ್ದಲ್ಲಿ ಆತಂಕ ಬೇಡ .ನಿಮಗೆ ಸರಿಯಾದ ಮಾಹಿತಿ, ನೀವು ಅನುಸರಿಸಬೇಕಾದ ಕ್ರಮಗಳನ್ನು ತಿಳಿಸಲು ಭಾರತೀಯ ಜನತಾ ಯುವ ಮೋರ್ಚಾ ವತಿಯಿಂದ ಟೆಲಿ ಕನ್ಸಲ್ಟೇಶನ್ ಸಹಾಯವಾಣಿಯನ್ನು ಪ್ರಾರಂಭಿಸಲಾಗಿದ್ದು, ಇದರಲ್ಲಿ 500ಕ್ಕೂ ಅಧಿಕ ವೈದ್ಯರು ದೇಶಾದ್ಯಂತ ಟೆಲಿ ಸಮಾಲೋಚನೆ ಮೂಲಕ ರೋಗಿಗಳ ಸಹಾಯಕ್ಕೆ ಸಹಕರಿಸಲಿದ್ದಾರೆ.

ಸಹಾಯವಾಣಿ 080 6817 3286 ಸಂಖ್ಯೆಗೆ ಕರೆ ಮಾಡಿ ತಮಗೆ ಬೇಕಾದ ಭಾಷೆಯನ್ನು ಆಯ್ದುಕೊಂಡ ನಂತರ ಕೆಲವೇ ನಿಮಿಷಗಳಲ್ಲಿ, ತಜ್ಞ ವೈದ್ಯರು, ಸೋಂಕಿತರ ಮೊಬೈಲ್ ಗೆ ಕರೆ ಮಾಡಿ ಕೋವಿಡ್ ನ ಲಕ್ಷಣಗಳು, ಆಮ್ಲಜನಕದ ಸ್ಯಾಚುರೇಶನ್ ಪ್ರಮಾಣ ಮತ್ತು ಇತರ ಅಗತ್ಯ ವಿವರಗಳನ್ನು ಪಡೆದು ಸೂಕ್ತವಾದ ಸಲಹೆ ನೀಡಲಿದ್ದಾರೆ. ಹೋಂ ಐಸೋಲೇಷನ್ ಸಂದರ್ಭದಲ್ಲಿ ಅನುಸರಿಸಬೇಕಾದ ಕ್ರಮಗಳು & ತೆಗೆದುಕೊಳ್ಳಬೇಕಾದ ಔಷಧೋಪಚಾರದ ಬಗ್ಗೆ ವಿವರವಾದ ಮಾಹಿತಿಯನ್ನು ಕೂಡ ನೀಡಲಿದ್ದಾರೆ. ಒಂದು ವೇಳೆ ಆಸ್ಪತ್ರೆಯ ವೈದ್ಯೋಪಚಾರದ ಅವಶ್ಯಕತೆ ಇದ್ದಲ್ಲಿ ಅದಕ್ಕೆ ಬೇಕಾದ ಮಾಹಿತಿ ಕೂಡ ತಮಗೆ ಲಭ್ಯವಿರಲಿದೆ. ಇದಲ್ಲದೇ, ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು, ವೈದ್ಯರು ಶಿಫಾರಸು ಮಾಡಿದ ಔಷಧಗಳನ್ನು ತಮ್ಮಮನೆ ಬಾಗಿಲಿಗೇ ನೇರವಾಗಿ ಬಂದು ತಲುಪಿಸಲಿದ್ದಾರೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ, ತರುಣ್ ಚುಗ್ ( ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳು) ಹಾಗೂ ತೇಜಸ್ವೀ ಸೂರ್ಯ (ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷರು,ಸಂಸದರು, ಬೆಂಗಳೂರು ದಕ್ಷಿಣ) ರೊಂದಿಗೆ ಸಹಾಯವಾಣಿಗೆ ಚಾಲನೆ ನೀಡಿದ್ದು, ದೇಶಾದ್ಯಂತ ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸಹಾಯವಾಣಿ ಗೆ ಇತರ ಸ್ಟಾರ್ಟ್ ಅಪ್ ಗಳು,ಯುವ ಉದ್ಯಮಿಗಳೊಂದಿಗೆ ಚಾಲನೆ ನೀಡಿರುವ ಬಿಜೆಪಿ ಯುವ ಮೋರ್ಚಾದ ಕಾರ್ಯವನ್ನು ಶ್ಲಾಘಿಸಿದರು.

BJp doctor helpline

ಸಹಾಯವಾಣಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಶ್ರೀ ಜೆ ಪಿ ನಡ್ಡಾ ರವರು, ದೇಶದ ಯಾವುದೇ ಮೂಲೆಯಿಂದ ನಾಗರಿಕರು ಕರೆ ಮಾಡಿದ ನಂತರ ಐ.ವಿ.ಆರ್ ಮೂಲಕ ತಮ್ಮ ಆದ್ಯತೆಗಳನ್ನು ನಮೂದಿಸಿದ ತಕ್ಷಣ, ವೈದ್ಯರೊಬ್ಬರಿಂದ ಕರೆ ಮಾಡಲಾಗುತ್ತದೆ. ನಂತರ ಕರೆ ಮಾಡಿದ ವ್ಯಕ್ತಿಯು ಆಯಾ ರಾಜ್ಯದ ನಿರ್ಧಿಷ್ಟ ಯುವ ಮೋರ್ಚಾ ಘಟಕ/ ಕಾರ್ಯಕರ್ತರ ಮೂಲಕ ಔಷಧಿಗಳು, ಅಗತ್ಯ ದಿನಬಳಕೆ ವಸ್ತುಗಳ ಪೂರೈಕೆ,ಆಹಾರ ಹಾಗೂ ಇತರ ಸಹಾಯಗಳಿಗೆ ಸಹಕರಿಸಲಿದ್ದಾರೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ತರುಣ್ ಚುಗ್ ರವರು, ಬಿಜೆಪಿ ಹಾಗೂ ಅದರ ಯುವ ಘಟಕವು ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಇಡೀ ದೇಶಾದ್ಯಂತ ನಾಗರಿಕರ ಸಹಾಯಕ್ಕೆ ಹಗಲಿರುಳು ಶ್ರಮಿಸುತ್ತಿರುವುದು ಶ್ಲಾಘನೀಯ. ಕೋವಿಡ್-19 ಲಸಿಕಾ ಅಭಿಯಾನ, ಸೋಂಕಿತರು ಹಾಗೂ ವೈದ್ಯರೊಂದಿಗೆ ಸಮನ್ವಯ ಸಾಧಿಸಿ,ಔಷಧಿ ಹಾಗೂ ಇತರ ದಿನನಿತ್ಯದ ಅಗತ್ಯ ವಸ್ತುಗಳನ್ನು ತಲುಪಿಸುವಿಕೆಯಂತಹ ಜನುಪಯೋಗಿ ಕಾರ್ಯ ಮಾಡುತ್ತಿರುವ ಬಿಜೆಪಿ ಕಾರ್ಯಕರ್ತರ ಕಾರ್ಯ ಅಭಿನಂದನಾರ್ಹ ಎಂದು ವಿವರಿಸಿದರು.

ನಂತರ ಮಾತನಾಡಿದ ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷರು, ಬೆಂಗಳೂರು ದಕ್ಷಿಣ ಸಂಸದರಾದ ತೇಜಸ್ವೀ ಸೂರ್ಯರವರು,ದೇಶದ ನಾಗರಿಕರ ಸೇವೆಯಲ್ಲಿ ಮುಂಚೂಣಿಯಲ್ಲಿ ನಿಂತು ಸೇವೆ ಒದಗಿಸುತ್ತಿರುವ ಬಿಜೆಪಿ ಕಾರ್ಯಕರ್ತರೆಲ್ಲರಿಗೂ ಕೃತಜ್ಞತೆ ತಿಳಿಸುತ್ತ, “ದೇಶಾದ್ಯಂತ ಇಂದು ಆಸ್ಪತ್ರೆ ಸೇರುತ್ತಿರುವ ಶೇ.95-98 ರಷ್ಟು ಸೋಂಕಿತರೆಲ್ಲರಿಗೂ ಅಗತ್ಯ ಮಾಹಿತಿ, ಡಾಕ್ಟರ್ ರೊಂದಿಗಿನ ಸಮಾಲೋಚನೆ ಕೊರತೆಯಿಂದ ಆಸ್ಪತ್ರೆ ಸೇರುತ್ತಿದ್ದಾರೆ. ಹೋಮ್ ಕ್ವಾರಂಟೈನ್, ಕೋವಿಡ್-19 ಗುಣಲಕ್ಷಣಗಳು, ಆಸ್ಪತ್ರೆ ನೋಂದಣಿ ಕುರಿತಂತೆ ಹಲವು ಸೇವೆಗಳನ್ನು ಸಹಾಯವಾಣಿ ಮೂಲಕ ವೈದ್ಯರೊಂದಿಗಿನ ಸಮಾಲೋಚನೆ/ ನೆರವಿನಿಂದ ಪಡೆಯಬಹುದು” ಎಂದು ವಿವರಿಸಿದರು.

ಈ ಸಹಾಯವಾಣಿಯ ಆರಂಭಕ್ಕೆ ಹಲವು ಸ್ಟಾರ್ಟ್ಅಪ್ ಗಳು ಹಾಗೂ ಇತರ ಸ್ವಯಂ ಸೇವಾ ಸಂಸ್ಥೆಗಳು ಬಿಜೆಪಿ ಯುವ ಮೋರ್ಚಾ ದೊಂದಿಗೆ ಕೈ ಜೋಡಿಸಿದ್ದು, ಕಲೆರಾ ಸಂಸ್ಥೆಯು ಈ ಸಹಾಯವಾಣಿ ವೇದಿಕೆಗೆ ಕರೆ ಸೌಲಭ್ಯ ಒದಗಿಸಿದೆ. ಪ್ರಾಕ್ಟೊ & ಸಮರ್ಥ ಭಾರತ ಸಂಸ್ಥೆಗಳು ವೈದ್ಯಕೀಯ ಸಹಾಯ & ಇತರ ಕಾರ್ಯಗಳಿಗೆ (24)7.ai, Leadsquared & LetsTransport.in ಸಂಸ್ಥೆಗಳ ಸಹಯೋಗದಲ್ಲಿ ಸಹಕರಿಸಲಿವೆ.

ನಂತರ ಟ್ವೀಟ್‌ ಮೂಲಕ ಧನ್ಯವಾದ ಅರ್ಪಿಸಿರುವ ಸಂಸದ ತೇಜಸ್ವೀ ಸೂರ್ಯ ರವರು, ಸಹಾಯವಾಣಿಗೆ ಚಾಲನೆ ನೀಡಿರುವ ಬಿಜೆಪಿ ಅಧ್ಯಕ್ಷರಾದ ಜೆ ಪಿ ನಡ್ಡಾ ರವರಿಗೆ ಕ್ರತಜ್ನತೆ ಅರ್ಪಿಸಿದರು.

LEAVE A REPLY

Please enter your comment!
Please enter your name here