Home ಬೆಂಗಳೂರು ನಗರ ಗೌರವ್ ಗುಪ್ತಾ ನೂತನ ಮುಖ್ಯ ಆಯುಕ್ತರನ್ನಾಗಿ; ರಾಕೇಶ್ ಸಿಂಗ್ ಆಡಳಿತಗಾರರಾಗಿ ನೇಮಕ

ಗೌರವ್ ಗುಪ್ತಾ ನೂತನ ಮುಖ್ಯ ಆಯುಕ್ತರನ್ನಾಗಿ; ರಾಕೇಶ್ ಸಿಂಗ್ ಆಡಳಿತಗಾರರಾಗಿ ನೇಮಕ

31
0

ಬಿಬಿಎಂಪಿ ಆಯುಕ್ತ ಮಂಜುನಾಥ್‌ ಪ್ರಸಾದ್ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಯಾಗಿ ವರ್ಗಾವಣೆ

ಬೆಂಗಳೂರು:

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯಲ್ಲಿ ಮಹತ್ತರ ಬದಲಾವಣೆಗಳಾಗಿದ್ದು, ಬಿಬಿಎಂಪಿ ಆಡಳಿತಾಧಿಕಾರಿಯಾಗಿದ್ದ ಗೌರವ್ ಗುಪ್ತಾ ಅವರನ್ನು ಮುಖ್ಯ ಆಯುಕ್ತರನ್ನಾಗಿ ನೇಮಿಸಿ ಸರ್ಕಾರ ಆದೇಶ ಹೊರಡಿಸಿದೆ.

ಈ ನಡುವೆ, ಹಾಲಿ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಅವರನ್ನು ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಯಾಗಿ ವರ್ಗಾವಣೆ ಮಾಡಲಾಗಿದೆ. ಈ ಹಿಂದೆ ಕೂಡ ಅವರು ಈ ಇಲಾಖೆಯಲ್ಲಿಯೇ ಕಾರ್ಯನಿರ್ವಹಿಸುತ್ತಿದ್ದರು.

WhatsApp Image 2021 03 31 at 21.16.58 1
WhatsApp Image 2021 03 31 at 21.16.58

ಹೊಸ ಬಿಬಿಎಂಪಿ ಕಾಯ್ದೆ ಪ್ರಕಾರ, ಆಯುಕ್ತರ ಹುದ್ದೆ ಮುಖ್ಯ ಆಯುಕ್ತರ ಹುದ್ದೆಯಾಗಿ ಮೇಲ್ದರ್ಜೆಗೇರಿಸಲಾಗಿದೆ. ಈ ಆದೇಶ ಗುರುವಾರದಿಂದ ಜಾರಿಗೆ ಬರಲಿದೆ.

ನಗರಾಭಿವೃದ್ಧಿ ಮತ್ತು ಜಲಸಂಪನ್ಮೂಲ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್ ಅವರಿಗೆ ಬಿಬಿಎಂಪಿ ಆಡಳಿತಾಧಿಕಾರಿ ಹುದ್ದೆಯನ್ನು ಹೆಚ್ಚುವರಿಯಾಗಿ ನೀಡಲಾಗಿದೆ.

ಇದನ್ನೂ ಓದಿ: ಗೌರವ್ ಗುಪ್ತಾ ನೂತನ ಬಿಬಿಎಂಪಿ ಮುಖ್ಯ ಆಯುಕ್ತ, ರಾಕೇಶ್ ಸಿಂಗ್ ಆಡಳಿತಗಾರರಾಗಿ ನೇಮಕ https://kannada.thebengalurulive.com/gaurav-gupta-to-be-new-bbmp-chief-commissioner-rakesh-singh-to-take-over-as-administrator/

LEAVE A REPLY

Please enter your comment!
Please enter your name here