Home ಮಂಗಳೂರು ಬೆಂಗಳೂರು-ಮಂಗಳೂರು ವಿಶೇಷ ರೈಲು ಸೇವೆ ಪುನಾರಂಭಿಸಲು ರೈಲ್ವೆ ಸಿದ್ಧತೆ

ಬೆಂಗಳೂರು-ಮಂಗಳೂರು ವಿಶೇಷ ರೈಲು ಸೇವೆ ಪುನಾರಂಭಿಸಲು ರೈಲ್ವೆ ಸಿದ್ಧತೆ

28
0
Advertisement
bengaluru

ಮಂಗಳೂರು:

ಬೆಂಗಳೂರು-ಮಂಗಳೂರು ನಡುವಿನ ವಾರಕ್ಕೆ ನಾಲ್ಕು ದಿನ ಸಂಚರಿಸುವ ವಿಶೇಷ ಎಕ್ಸ್‌ಪ್ರೆಸ್ ರೈಲನ್ನು ಕುಣಿಗಲ್‍ ಮೂಲಕ ಸೀಮಿತ ಅವಧಿಗೆ ಪುನರಾರಂಭಿಸಲು ರೈಲ್ವೆ ನಿರ್ಧರಿಸಿದೆ.

ಸೆಪ್ಟೆಂಬರ್ ಮೊದಲ ವಾರದಲ್ಲಿ ಪುನರಾರಂಭಿಸಲಾದ ವಿಶೇಷ ರೈಲು ಸೇವೆಯನ್ನು ಪ್ರಯಾಣಿಕರಿಂದ ಹೆಚ್ಚು ಪ್ರೋತ್ಸಾಹದ ಕೊರತೆಯಿಂದ ಸೆಪ್ಟೆಂಬರ್ ಅಂತ್ಯದ ವೇಳೆಗೆ ರದ್ದುಪಡಿಸಲಾಗಿತ್ತು. ವಿಶೇಷ ಎಕ್ಸ್‌ಪ್ರೆಸ್ ಈ ರೈಲು ಕೆಎಸ್ಆರ್ ಬೆಂಗಳೂರು – ಮಂಗಳೂರು ಕೇಂದ್ರ ನಡುವೆ ಸೋಮವಾರ, ಮಂಗಳವಾರ, ಗುರುವಾರ ಮತ್ತು ಶನಿವಾರ ಡಿ8 ರಿಂದ ಡಿ 24 ರವರೆಗೆ ಸಂಚರಿಸಲಿವೆ. ಬೆಂಗಳೂರಿನಿಂದ ರಾತ್ರಿ 10.30ಕ್ಕೆ ಹೊರಡುವ ರೈಲು ಮರುದಿನ ಬೆಳಿಗ್ಗೆ 8.35ಕ್ಕೆ ಮಂಗಳೂರಿಗೆ ಆಗಮಿಸಲಿದೆ ಎಂದು ನೈರುತ್ಯ ರೈಲ್ವೇ ಪ್ರಕಟಣೆ ತಿಳಿಸಿದೆ.

ಮರುದಿನ, ವಾಪಸ್‍ ಮಾರ್ಗದಲ್ಲಿ ಈ ರೈಲು ಮಂಗಳವಾರ, ಬುಧವಾರ, ಶುಕ್ರವಾರ ಮತ್ತು ಭಾನುವಾರ ಡಿ 9 ರಿಂದ ಡಿ 25 ರವರೆಗೆ ಮಂಗಳೂರು ಸೆಂಟ್ರಲ್ – ಕೆಎಸ್ಆರ್ ಬೆಂಗಳೂರು ವಿಶೇಷ ಎಕ್ಸ್‌ಪ್ರೆಸ್ ರೈಲು ಮಂಗಳೂರು ಸೆಂಟ್ರಲ್‌ನಿಂದ ರಾತ್ರಿ 8.10ಕ್ಕೆ ಹೊರಟು ಮರುದಿನ ಬೆಳಿಗ್ಗೆ 7 ಗಂಟೆಗೆ ಬೆಂಗಳೂರಿಗೆ ಆಗಮಿಸಲಿದೆ.

bengaluru bengaluru

bengaluru

LEAVE A REPLY

Please enter your comment!
Please enter your name here