ಬೆಂಗಳೂರು/ತುಮಕೂರು:
ನಾವು ಎಸ್ ಬಿಎಂ ಒಂದೇ.ಬೇರೆ ಬೇರೆ ಅಲ್ಲ.ಶಾಸಕರಾದ ಮುನಿರತ್ನ ಹಾಗೂ ನಮ್ಮ ನಡುವೆ ಯಾವುದೇ ಭಿನ್ನಾಭಿಪ್ರಾ ಯವಿಲ್ಲ.ನಾವು ಎಸ್ ಬಿಎಂ ಒಂದೇ ಆಗಿದ್ದೇವೆ.ನಾವು ಬೇರೆ ಅಲ್ಲ ಎಂದು ಸಹಕಾರ ಸಚಿವರಾದ ಎಸ್.ಟಿ. ಸೋಮಶೇಖರ್ ಸ್ಪಷ್ಟಪಡಿಸಿದರು.
ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿ ಶ್ರೀ ಶಿವಕುಮಾರ ಮಹಾಸ್ವಾಮೀಜಿಗಳ ಗದ್ದುಗೆಗೆ ಪೂಜೆ ಸಲ್ಲಿಸಿದ ಬಳಿಕ ಸಿದ್ಧಲಿಂಗ ಸ್ವಾಮೀಜಿ ಅವರ ಆಶೀರ್ವಾದ ಪಡೆ ದರು.ಬಳಿಕ ಸುದ್ದಿಗಾರರ ರೊಂದಿಗೆ ಮಾತನಾಡಿದ ಅವರು,ಆಗ ನಡೆದ ಚುನಾವಣೆಯಲ್ಲಿ ನಾನು, ಬೈರತಿ ಬಸವರಾಜು ಅವರು ಗೆದ್ದು ಮಂತ್ರಿ ಆಗಿದ್ದೇವೆ. ಆಗ ಎಸ್ ಬಿ ಎಂದು ಕರೆಯಲ್ಪಟ್ಟೆವು.ಮುನಿರತ್ನ ಅವರು ಮಂತ್ರಿಯಾದಾಗ ಮತ್ತೆ ಎಸ್ ಬಿಎಂ ಎಂದು ನೀವೇ ಹೇಳುತ್ತೀರ ಎಂದು ಪ್ರಶ್ನಿಸಿದರು.
ಮುನಿರತ್ನ ಅವರಿಗೆ ಸಚಿವ ಸ್ಥಾನ ನೀಡುವುದು ಮುಖ್ಯಮಂತ್ರಿಗಳ ಪರಮಾಧಿಕಾರ.ಅವರು ಕೊಟ್ಟ ಮಾತಿಗೆ ಎಂದೂ ತಪ್ಪಿಲ್ಲ.ಮಾತು ಕೊಟ್ಟಂತೆ ಸೋತ ವರಿಗೂ ಸಹ ಮಂತ್ರಿ ಸ್ಥಾನವನ್ನು ಕೊಟ್ಟವರು ಅವರು.ಹೀಗಾಗಿ ಮುಖ್ಯಮಂತ್ರಿಗಳೇ ತೀರ್ಮಾನ ತೆಗೆದುಕೊಳ್ಳುತ್ತಾರೆ.ಆರ್.ಶಂಕರ್,ಎಂಟಿಬಿ ನಾಗರಾಜ್, ಮುನಿರತ್ನ ಸೇರಿದಂತೆ ಐವರು ಸಚಿವ ಸ್ಥಾನದ ಆಕಾಂಕ್ಷಿತರಿದ್ದಾರೆ.ಹೀಗಾಗಿ ಪಕ್ಷದ ಎಲ್ಲರಿಗೂ ಸೂಕ್ತ ಸಂದರ್ಭದಲ್ಲಿ ಸ್ಥಾನ ನೀಡಬೇಕು.ಪಕ್ಷದಲ್ಲಿ ಮೊದ ಲಿನಿಂದಲೂ ದುಡಿದವರು ಸಹ ಇದ್ದಾರೆ.ಈ ನಿಟ್ಟಿನಲ್ಲಿ ಕೇಂದ್ರ ಸಚಿವರಾದ ಡಿ.ವಿ.ಸದಾನಂದಗೌಡ ಅವರು ಮಾತನಾಡಿರಬಹುದು ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.
67ನೇ ಅಖಿಲ ಭಾರತ ಸಹಕಾರ ಸಪ್ತಾಹವನ್ನು ದಾವಣಗೆರೆಯಲ್ಲಿ ನೆರವೇರಿಸಿದ್ದೇವೆ.ಒಟ್ಟು 7 ದಿನ ಕಾರ್ಯಕ್ರಮವನ್ನು ರಾಜ್ಯದ ವಿವಿಧ ಭಾಗಗಳಲ್ಲಿ ಹಮ್ಮಿಕೊಂಡಿದ್ದೇವೆ.ಈಗಾಗಲೇ ಬೆಂಗಳೂರು, ಮಂಗಳೂರು ಹಾಗೂ ದಾವಣಗೆರೆಯಲ್ಲಿ ಕಾರ್ಯಕ್ರಮ ನಡೆದಿದ್ದು,ನಾಳೆ ಚಿಕ್ಕಬಳ್ಳಾಪುರದಲ್ಲಿದೆ ಎಂದ ಸಚಿವರು,ನಾನು ಈ ಮಾರ್ಗವಾಗಿ ಸಂಚರಿಸುವಾಗೆಲ್ಲ ತುಮಕೂರು ಶ್ರೀಮಠಕ್ಕೆ ಭೇಟಿ ನೀಡುವ ಪರಿಪಾಠವನ್ನು ಬೆಳೆಸಿಕೊಂಡಿದ್ದೇನೆ ಎಂದು ತಿಳಿಸಿದರು.