Home ಬೆಂಗಳೂರು ನಗರ ಪ್ರತಿಯೊಂದಕ್ಕೂ ಸಂಘರ್ಷದ ಹಾದಿ,ಮಾತುಕತೆ ಮೂಲಕ ಬಗೆಹರಿಸಿಕೊಳ್ಳುವ ವಾತಾವರಣ ದೇಶದಲ್ಲಿಲ್ಲ: ದೇವೇಗೌಡ

ಪ್ರತಿಯೊಂದಕ್ಕೂ ಸಂಘರ್ಷದ ಹಾದಿ,ಮಾತುಕತೆ ಮೂಲಕ ಬಗೆಹರಿಸಿಕೊಳ್ಳುವ ವಾತಾವರಣ ದೇಶದಲ್ಲಿಲ್ಲ: ದೇವೇಗೌಡ

21
0
former Prime Minister HD Devegowda addressing media on Saturday in Bengaluru
ಮಾಜಿ ಪ್ರಧಾನಿ ಹೆಚ್​ಡಿ ದೇವೇಗೌಡ

ಬೆಂಗಳೂರು:

ದೇಶದ ಹಲವಾರು ಸಮಸ್ಯೆಗಳನ್ನು ಒಟ್ಟಾಗಿ ಬಗೆಹರಿಸಿಕೊಳ್ಳಬೇಕು.ಆದರೆ ಅಂತ ವಾತಾವರಣ ದೇಶದಲ್ಲಿ ಇಲ್ಲ.ಪ್ರತಿಯೊಂದಕ್ಕೂ ಸಂಘರ್ಷದ ಹಾದಿ ಹಿಡಿಯುತ್ತಿದ್ದೇವೆ ಎಂದು ಮಾಜಿ ಪ್ರಧಾನಿ,ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ಆತಂಕ ವ್ಯಕ್ತಪಡಿಸಿದ್ದಾರೆ.

ಜೆಡಿಎಸ್ ಕಚೇರಿ ಜೆಪಿ ಭವನದಲ್ಲಿಂದು ಹಮ್ಮಿಕೊಂಡಿದ್ದ 72ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವ ಹಿಸಿ ನಂತರ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ನಾನು ಅಧಿಕಾರದಲ್ಲಿ ಇದ್ದಾಗ ಯಾವುದೇ ಸಂಘ ರ್ಷಕ್ಕೆ ಅವಕಾಶ ಕೊಡಲಿಲ್ಲ.ನಾನು ಸಂದೇಶ ಕೊಡುವುದಕ್ಕೆ ಯಾವುದೇ ಅಧಿಕಾರದಲ್ಲಿ ಇಲ್ಲ.ನಾನು ಸಾಮಾ ನ್ಯ ವಾಗಿ ಈ ಸಂದರ್ಭದಲ್ಲಿ ದೆಹಲಿಯಲ್ಲಿ ಇರುತ್ತಿದ್ದೆ.ಆದರೆ ಆರೋಗ್ಯದ ಸಮಸ್ಯೆ ಇರುವ ಕಾರಣದಿಂದ ಇಲ್ಲೇ ನಮ್ಮ ಕಚೇರಿಯಲ್ಲಿ ಆಚರಣೆ ಮಾಡುತ್ತಿದ್ದೇನೆ.ಸ್ವಾತಂತ್ರ್ಯ ಅಥವಾ ಗಣರಾಜ್ಯೋತ್ಸವ ದಿನಾಚರಣೆ ದಿನ ಏನೇ ಕಷ್ಟಗಳಿದ್ದರೂ ನಮ್ಮ ಕಚೇರಿಯಲ್ಲಿ ಆಚರಣೆ ನಡೆಯುತ್ತದೆ ಎಂದರು.

ಮುಂದಿನ ರಾಜ್ಯಸಭೆ,ಲೋಕಸಭಾ ಅಧಿವೇಶನದಲ್ಲಿ ಭಾಗವಹಿಸಲು ಸಂಕಲ್ಪ ಮಾಡಿದ್ದೇನೆ ಎಂದ ಗೌಡರು, ರೈತರ ಕಾಯಿದೆ ರಾಜ್ಯಸಭೆಯಲ್ಲಿ ಮಂಡನೆ ಮಾಡಿದ ಸಂಧರ್ಭದಲ್ಲಿ ನಾನೂ ಇದ್ದೆ.ಅಂದೇ ನಾನು ಅದಕ್ಕೆ ವಿರೋಧ ವ್ಯಕ್ತ ಪಡಿಸಿದ್ದೆ.ಲೋಕಸಭೆಯಲ್ಲಿ ಅವರಿಗೆ ಬಹುಮತ ಇತ್ತು.ಆದರೆ ರಾಜ್ಯ ಸಭೆಯಲ್ಲಿ ರಾತ್ರಿ ಹತ್ತು ಗಂಟೆ ವೇಳೆಗೆ ಬಿಲ್ ತರಲಾಯಿತು.ಸಂಘರ್ಷದ ಮೂಲಕ ಬಿಲ್ ಪಾಸ್ ಮಾಡಿ ಕೊಳ್ಳಲು ಮುಂದಾದರು.ಇದು ಪ್ರಜಾಪ್ರಭುತ್ವಕ್ಕೆ ಅವಮಾನ.ಎರಡು ಅಥವಾ ಮೂರು ತಿಂಗಳು ಮಸೂ ದೆಯನ್ನು ಮುಂದೂಡಿ ಜಂಟಿ ಸಮಿತಿ ಮಾಡಿ ಆ ನಂತರ ಬಿಲ್ ಪಾಸ್ ಮಾಡಿಕೊಳ್ಳಬಹುದಿತ್ತು.ನಾನೂ ಇದೇ ಸಲಹೆ ಕೊಟ್ಟಿದ್ದೆ ಎಂದು ಅವರು ತಿಳಿಸಿ ದರು.

ಗಣರಾಜ್ಯೋತ್ಸವದ ಸಂಧರ್ಭದಲ್ಲಿ ರೈತ ಸಮುದಾಯ ಹಾಗೂ ಸರ್ಕಾರ ಸಂಘರ್ಷ ಏರ್ಪಟ್ಟಿದೆ.ಸುಪ್ರೀಂಕೋ ರ್ಟ್ ಮದ್ಯ ಪ್ರವೇಶ ಮಾಡಿದ್ದರೂ ಇದನ್ನು ಬಗೆಹರಿಸಲು ಆಗಲಿಲ್ಲ.ಗಣರಾಜ್ಯೋತ್ಸವ ಸಮಾರಂಭ ಮುಗಿದ ಬಳಿಕ ರೈತರು ದೆಹಲಿಯಲ್ಲಿ ಟ್ರಾಕ್ಟರ್ ರ್ಯಾಲಿ ನಡೆಸುತ್ತಿದ್ದಾರೆ.ಸರ್ಕಾರ ಅದಕ್ಕೆ ಅವಕಾಶ ಮಾಡಿಕೊಟ್ಟಿದೆ. ರಾಜ್ಯದಲ್ಲಿ ಕೂಡಾ ರೈತರು ಟ್ರಾಕ್ಟರ್ ರ್ಯಾಲಿಗೆ ಮುಂದಾಗಿದ್ದಾರೆ ಎಂದರು.

ದೇಶವನ್ನು ಕೋವಿಡ್ 19ಕಾಡುತ್ತಿದೆ.ನಮ್ಮ ದೇಶದಲ್ಲಿ ಕೂಡಾ ಅನೇಕರು ಸತ್ತಿದ್ದಾರೆ.ವಿಜ್ಞಾನಿಗಳು ಲಸಿಕೆ ಕಂಡು ಹಿಡಿದಿರುವುದು ಹೆಮ್ಮೆಯ ವಿಚಾರ ಎಂದು ಹೇಳಿದರು.ಹಾಸನ ಜಿಲ್ಲೆಯ ಶಾಸಕರ ಪ್ರತಿಭಟನೆ ವಿಚಾ ರಕ್ಕೆ ಪ್ರತಿಕ್ರಿಯಿಸಿದ ಅವರು,ಈ ಬಗ್ಗೆ ಸಿಎಂ ಜೊತೆ ನಾನೇ ಮಾತನಾಡಿದ್ದೇನೆ.ಕೊರೋನಾ ಕಾರಣದಿಂದ ಅನು ದಾನ ವಿಚಾರದಲ್ಲಿ ವಿಳಂಬ ಆಗಿದೆ.ಹಂತ ಹಂತವಾಗಿ ಬಿಡುಗಡೆ ಮಾಡುತ್ತೇವೆಂದು ಸಿಎಂ ಯಡಿಯೂರಪ್ಪ ಹೇಳಿದ್ದಾರೆ.ಅವರೇ ಮಾತು ಕೊಟ್ಟ ಬಳಿಕ ಪ್ರತಿಭ ಟನೆ ಮಾಡುವುದು ಸರಿಯಲ್ಲವೆಂದು ಆ ವಿಚಾರವನ್ನು ಕೈ ಬಿಡಲಾಗಿದೆ ಎಂದು ಹೇಳಿದರು.

ಪಕ್ಷದಲ್ಲಿ ಹಲವಾರು ಬದಲಾವಣೆ ಗಳನ್ನು ಮಾಡುತ್ತಿದ್ದೇವೆ.ಎಚ್.ಡಿ.ಕುಮಾರಸ್ವಾಮಿ ಬಹಳ ಗಂಭೀರ ವಾಗಿ ಕೆಲಸ ಮಾಡುತ್ತಿದ್ದಾರೆ.ಫೆಬ್ರವರಿಯಲ್ಲಿ ಬೆಂಗಳೂರಿನಲ್ಲಿ ಬೃಹತ್ ಸಮಾವೇಶ ಮಾಡಲು ಉದ್ದೇಶಿಸಲಾಗಿದೆ. ಸಭಾಪತಿ,ಉಪ ಸಭಾಪತಿ ಆಯ್ಕೆ ವಿಚಾರವನ್ನು ಪಕ್ಷದ ಇತರ ನಾಯಕರು ನೋಡಿ ಕೊಳ್ಳುತ್ತಾರೆ.ನಾಳೆ ಅಥವಾ ನಾಡಿದ್ದು ಸಭೆ ಸೇರಿ ಅದರ ಬಗ್ಗೆ ನಿರ್ಧಾರ ಮಾಡುತ್ತಾರೆ.ನಾನು ಆ ಬಗ್ಗೆ ಮಾತಾಡಲ್ಲ ಎಂದರು.

ಪೆಟ್ರೋಲ್,ಡೀಸೆಲ್‌ ಹಾಗೂ ದಿನಬಳಕೆಯ ವಸ್ತುಗಳ ಬೆಲೆ ದಿನೇದಿನೇ ಏರುತ್ತಿದೆ.ಇವೆಲ್ಲವುಗಳ ಬಗ್ಗೆ ಸದನ ದಲ್ಲಿ ಧ್ವನಿ ಎತ್ತುತ್ತೇವೆ ಎಂದು ಹೇಳಿದರು.ಜೆಡಿಎಸ್ ನ ರಾಜ್ಯ ಕಾರ್ಯಾಧ್ಯಕ್ಷ ಎಂ.ಎಸ್.ನಾರಾಯಣರಾವ್ , ಮಾಜಿ ವಿಧಾನಪರಿಷತ್ ಸದಸ್ಯ ಟಿ.ಎ.ಶರವಣ ಮತ್ತಿತರ ಮುಖಂಡರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here