‘ವಿಕಸಿತ್ ಭಾರತ್’ ಸಂದೇಶಗಳನ್ನು ಕಳುಹಿಸುವುದನ್ನು ತಕ್ಷಣವೇ ನಿಲ್ಲಿಸುವಂತೆ ಕೇಂದ್ರ ಸರಕಾರಕ್ಕೆ ಚುನಾವಣಾ ಆಯೋಗ ಸೂಚನೆ
ಹೊಸದಿಲ್ಲಿ: ಮಾದರಿ ನೀತಿ ಸಂಹಿತೆಯನ್ನು ಕಟ್ಟು ನಿಟ್ಟಾಗಿ ಜಾರಿಗೆ ತರಲು ಮುಂದಾಗಿರುವ ಚುನಾವಣಾ ಆಯೋಗವು, ವಾಟ್ಸ್ ಆ್ಯಪ್ ನಲ್ಲಿ ರವಾನೆಯಾಗುತ್ತಿರುವ ಕೇಂದ್ರ ಸರ್ಕಾರದ ʼವಿಕಸಿತ್ ಭಾರತ್ʼ ಸಂದೇಶಗಳನ್ನು ತಕ್ಷಣವೇ ನಿಲ್ಲಿಸುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.
