Home Uncategorized ಜಯನಗರದಲ್ಲಿರುವ ನಿವೃತ್ತ ಸರ್ಕಾರಿ ನೌಕರರ ಮನೆಯ ದರೋಡೆ ಮಾಡಿದ್ದ ನೇಪಾಳದ ಐವರ ಬಂಧನ

ಜಯನಗರದಲ್ಲಿರುವ ನಿವೃತ್ತ ಸರ್ಕಾರಿ ನೌಕರರ ಮನೆಯ ದರೋಡೆ ಮಾಡಿದ್ದ ನೇಪಾಳದ ಐವರ ಬಂಧನ

14
0
Advertisement
bengaluru

ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆ ಸೇರಿದಂತೆ ನೇಪಾಳದ ಐವರನ್ನು ಜಯನಗರ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳು ಜಯನಗರ 5ನೇ ಬ್ಲಾಕ್‌ನಲ್ಲಿರುವ ದೂರುದಾರರ ಮನೆಯಲ್ಲಿ ಕಳ್ಳತನ ಮಾಡಿ ಪರಾರಿಯಾಗುತ್ತಿದ್ದಾಗ ಬಂಧಿಸಲಾಗಿದೆ.  ಬೆಂಗಳೂರು: ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆ ಸೇರಿದಂತೆ ನೇಪಾಳದ ಐವರನ್ನು ಜಯನಗರ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳು ಜಯನಗರ 5ನೇ ಬ್ಲಾಕ್‌ನಲ್ಲಿರುವ ದೂರುದಾರರ ಮನೆಯಲ್ಲಿ ಕಳ್ಳತನ ಮಾಡಿ ಪರಾರಿಯಾಗುತ್ತಿದ್ದಾಗ ಬಂಧಿಸಲಾಗಿದೆ. ಐವರಲ್ಲಿ, ಇಬ್ಬರು ಆರೋಪಿಗಳು ಪತಿ-ಪತ್ನಿಯರಂತೆ ನಟಿಸಿ ಹದಿನೈದು ದಿನಗಳ ಹಿಂದೆ ಸಂತ್ರಸ್ತರ ನಿವಾಸದಲ್ಲಿ ಮನೆಗೆಲಸದವರಾಗಿ ಸೇರಿಕೊಂಡಿದ್ದರು.

ಅಪರಾಧ ನಡೆದ ಎರಡು ಗಂಟೆಗಳಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳಿಂದ ಸುಮಾರು 21 ಲಕ್ಷ ರೂಪಾಯಿ ಮೌಲ್ಯದ ಚಿನ್ನ, ಬೆಳ್ಳಿ, ಬ್ರಾಂಡೆಡ್ ವಾಚ್‌ಗಳು ಮತ್ತು ಇತರ ಬೆಲೆಬಾಳುವ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಮಾಲೀಕನ ಅನುಪಸ್ಥಿತಿಯಲ್ಲಿ ಕಳ್ಳತನ ಮಾಡಿದ್ದಾರೆ.

ಆರೋಪಿಗಳನ್ನು ಬಿಕಾಸ್ (23), ಸುಶ್ಮಿತಾ (22), ಹೃದಮ್ ಅಲಿಯಾಸ್ ಹೇಮಂತ್ (21), ರೋಷನ್ ಪದಮ್ (27) ಮತ್ತು ಪ್ರೇಮ್ (31) ಎಂದು ಗುರುತಿಸಲಾಗಿದೆ.

ಬಿಕಾಸ್ ಮತ್ತು ಸುಶ್ಮಿತಾ ಪತಿ-ಪತ್ನಿಯಾಗಿ ನಟಿಸಿದ್ದು, ನಿವೃತ್ತ ಸರ್ಕಾರಿ ನೌಕರ ಎಚ್‌ಎಸ್ ಒಬೆದುಲ್ಲಾ ಖಾನ್ ಅವರ ನಿವಾಸದಲ್ಲಿ ಮನೆಕೆಲಸಗಾರರಾಗಿ ಕೆಲಸ ಮಾಡಲು ಪ್ರಾರಂಭಿಸಿದರು. ಸೋಮವಾರ ಮಧ್ಯಾಹ್ನ ಈ ತಂಡ ಕಳ್ಳತನ ನಡೆಸಿತ್ತು. ಮನೆಗೆ ಹಿಂದಿರುಗಿದ ಖಾನ್ ಕಳ್ಳತನ ಮತ್ತು ಕಾಣೆಯಾದ ‘ದಂಪತಿ’ ಬಗ್ಗೆ ತಿಳಿದುಕೊಂಡು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಆರೋಪಿಗಳು ಲಾರಿಯಲ್ಲಿ ಪರಾರಿಯಾಗಲು ಯೋಜಿಸುತ್ತಿದ್ದಾಗ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

bengaluru bengaluru

ಆರೋಪಿಗಳ ಪೈಕಿ ಹೃದಮ್‌ನನ್ನು ಐದು ವರ್ಷಗಳ ಹಿಂದೆ ಕೊಲೆ ಪ್ರಕರಣದಲ್ಲಿ ಬಂಧಿಸಲಾಗಿತ್ತು. ಆಗ ಅಪ್ರಾಪ್ತನಾಗಿದ್ದ ಆರೋಪಿ, ಬೊಮ್ಮನಹಳ್ಳಿಯಲ್ಲಿ ತನ್ನ ಆತ್ಮೀಯ ಗೆಳೆಯನನ್ನು ಕೊಂದು ಜೈಲಿನಿಂದ ಹೊರ ಬಂದಿದ್ದ. ನಂತರ ಆತ ಇತರ ಆರೋಪಿಗಳೊಂದಿಗೆ ಸೇರಿಕೊಂಡಿದ್ದ. ಈ ತಂಡ ಮನೆಗೆಲಸದವರನ್ನು ಹುಡುಕುತ್ತಿರುವ ಬಗ್ಗೆ ತಿಳಿದುಕೊಳ್ಳುತ್ತಿದ್ದರು. ಈ ವೇಳೆ ಮನೆಗೆಲಸದವರನ್ನು ಹುಡುಕುತ್ತಿದ್ದ ದೂರುದಾರರು ಆರೋಪಿಗಳ ಸಂಪರ್ಕಕ್ಕೆ ಬಂದಿದ್ದಾರೆ. ಅವರ ಪೂರ್ವಾಪರಗಳನ್ನು ಪರಿಶೀಲಿಸದೆ ಕೆಲಸಕ್ಕೆ ನೇಮಿಸಿಕೊಂಡಿದ್ದರು ಎಂದು ಪೊಲೀಸರು ತಿಳಿಸಿದರು. 

ಐವರಲ್ಲಿ ಹೃದಮ್‌ನನ್ನು ಬುಧವಾರ ಬಂಧಿಸಲಾಗಿದೆ. ಜಯನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.


bengaluru

LEAVE A REPLY

Please enter your comment!
Please enter your name here