ಬೆಂಗಳೂರು:
ಬಿಜೆಪಿ ಕಾಂಗ್ರೆಸ್ ಹಗ್ಗಜಗ್ಗಾಟಕ್ಕೆ ನಾನು ಬಲಿಯಾದೆ ಎಂಬ ಆರೋಪ ಮಾಡಿರುವುದು ಸರಿಯಲ್ಲ ಎಂದು ವಿಧಾನಪರಿಷತ್ ಉಪಸಭಾಪತಿ ಧರ್ಮೇಗೌಡ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರದ ಆದೇಶದಂತೆ ನಾನು ಉಪಸಭಾಪತಿ ಸ್ಥಾನದಲ್ಲಿ ಕೂತಿದ್ದೆ. ಸಭಾಪತಿ ಮೇಲೆ ಅವಿಶ್ವಾಸ ನಿರ್ಣಯ ಮಂಡನೆ ಆಗಿರುವುದರಿಂದ ಅವರು ಕೂರಬಾರದು. ಹೀಗಾಗಿ ನಾನು ಕೂತಿದ್ದೆ. ಬೆಲ್ ಹೊಡೆಯುತ್ತಿರುವಾಗಲೇ ಪೀಠ ಅಲಂಕರಿಸಿದ್ದೆ ಎನ್ನುವುದು ಸರಿಯಲ್ಲ ಎಂದರು. UNI