ಬೆಂಗಳೂರು:
ನಾಯಕತ್ವ ಬದಲಾವಣೆ, ದೆಹಲಿ ಪಯಣದ ಸುದ್ದಿ ಪದೇ ಪದೇ ನಡೆಯುತ್ತಿದೆ.ಕೆಲವರು ತಾವೇ ನಾಯಕರು ಎಂದು ಬಿಂಬಿಸಿಕೊಳ್ಳುತ್ತಿರುವುದು ಸಹಜವಾಗಿಯೇ ಸಿಎಂ ಯಡಿಯೂರಪ್ಪ ಅವರಿಗೆ ನೋವಾಗಿದಂತಿದೆ. ಆದ್ದರಿಂದಲೇ ಅವರು ರಾಜೀನಾಮೆಯ ಮಾತು ಹೇಳಿರಬಹುದು ಎಂದು ಸಚಿವ ಆರ್.ಅಶೋಕ್ ಹೇಳಿದ್ದಾರೆ.
ಭಾನುವಾರ ಸಿಎಂ ಅಧಿಕೃತ ನಿವಾಸ ಕಾವೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅಶೋಕ್,ರಾಜ್ಯದಲ್ಲಿ ಕೆಲವು ದಿನಗಳಿಂದ ಕೆಲವು ರಾಜಕೀಯ ವಿದ್ಯಮಾನಗಳು ನಡೆಯುತ್ತಿವೆ.ಕೊರೊನಾ ಸಂದರ್ಭದಲ್ಲಿ ನಿರಂತರವಾಗಿ ಸಿಎಂ ರಾತ್ರಿ, ಹಗಲು ಎನ್ನದೇ ಕೆಲಸ ಮಾಡುತ್ತಿದ್ದಾರೆ.ಬೇರೆ ರಾಜ್ಯಗಳ ಸಿಎಂ ಮಾಡದ ಕೆಲಸವನ್ನೂ ಅಭಿವೃದ್ಧಿಯನ್ನು ನಮ್ಮ ರಾಜ್ಯದಲ್ಲಿ ಮಾಡುತ್ತಿದ್ದಾರೆ.ಇಷ್ಟೆಲ್ಲಾ ಇದ್ದರೂ ಪದೇಪದೇ ನಾಯಕತ್ವದ ಚರ್ಚೆ ನಡೆಯುತ್ತಿದೆ.ಈಗಾಗಲೇ ನಮ್ಮ ನಾಯಕರು ನಾಯಕತ್ವ ಬದಲಾವಣೆ ಇಲ್ಲಾ ಎಂದು ಸ್ಪಷ್ಟಪಡಿಸಿದ್ದು,ಸಚಿವ ಸಿ.ಪಿ.ಯೋಗೇಶ್ವರ್ ಕೂಡ ಯಡಿಯೂರಪ್ಪ ನಮ್ಮ ನಾಯಕರು ಎಂದು ಹೇಳಿದ್ದಾರೆ.ನಾವೆಲ್ಲಾ ಸಿಎಂ ಯಡಿಯೂರಪ್ಪ ಜೊತೆ ಇದ್ದೇವೆ.
ಕೊರೊನಾ ಸಂದರ್ಭದಲ್ಲಿ ತಪ್ಪು ದಾರಿಗೆ ಎಳೆಯುವ ಕೆಲಸ ನಡೆಯುತ್ತಿದ್ದು,ಅದಕ್ಕೆ ಮೊದಲು ಬ್ರೇಕ್ ಹಾಕಬೇಕು ಎಂದು ಅಶೋಕ್ ಹೇಳಿದರು.