ಬೆಂಗಳೂರು:
ಜಲಮಂಡಳಿ ಇಲಾಖೆ ತೋಡಿದ್ದ ಗುಂಡಿಗೆ ಬಿದ್ದು ಬೈಕ್ ಸವಾರನೋರ್ವ ಮೃತಪಟ್ಟಿರುವ ದಾರುಣ ಘಟನೆ ಹೆಸರುಘಟ್ಟ ಮುಖ್ಯ ರಸ್ತೆಯ ಮೀಡಿಯಾ ಶಾಲೆ ಬಸ್ ನಿಲ್ದಾಣದ ಬಳಿ ಶನಿವಾರ ರಾತ್ರಿ ಸಂಭವಿಸಿದೆ.
ಮಲ್ಲಸಂದ್ರ ನಿವಾಸಿ ಬೈಕ್ ಸವಾರ ಆನಂದಪ್ಪ (47) ಮೃತ ದುರ್ದೈವಿ.
Bengaluru biker dies after falling into BWSSB trench
— Thebengalurulive/ಬೆಂಗಳೂರು ಲೈವ್ (@bengalurulive_) September 19, 2021
Victim’s wife blames fatal accident on lack of signboards near trench, locals say there were no reflectors #Bangalore #Bengaluru #Karnataka@CPBlr @jointcptraffic @peenyatrfps @chairmanbwssb @BBMPCOMM #bwssb pic.twitter.com/RGdnW5j8Gv
ಪೀಣ್ಯದಲ್ಲಿ ಕಾವೇರಿ 5ನೇ ಹಂತದ ಕಾಮಗಾರಿ ಇತ್ತೀಚೆಗಷ್ಟೆ ಮುಗಿದಿತ್ತು. ಜಲ ಮಂಡಳಿ ಸಿಬ್ಬಂದಿ ವಾಲ್ವ್ ಅಳವಡಿಸಲು ರಸ್ತೆ ಗುಂಡಿ ತೆಗೆದಿದ್ದು, ಕಾಟಾಚಾರಕ್ಕೆ ಬ್ಯಾರಿಕೇಡ್ ಅಳವಡಿಸಿದ್ದರು. ಪರಿಣಾಮ ವೇಗವಾಗಿ ಬಂದ ಬೈಕ್ ಸವಾರ ಏಕಾಏಕೀ ಗುಂಡಿ ಕಾಣದೇ ಮೃತಪಟ್ಟಿದ್ದಾರೆ.
ಕಾಮಗಾರಿ ನಡೆಯುವ ಸ್ಥಳದಿಂದ ಕನಿಷ್ಠ 50 ಮೀಟರ್ ದೂರಕ್ಕೆ ರಿಫ್ಲೆಕ್ಟರ್ಗಳೊಂದಿಗೆ ಸೂಚನಾ ಫಲಕಗಳನ್ನು ಅಳವಡಿಸಬೇಕು. ಆದರೆ, ಯಾವುದೇ ರಿಫ್ಲೆಕ್ಟರ್ಗಳಿಲ್ಲದಿರುವುದು ಅಪಘಾತಕ್ಕೆ ಕಾರಣವಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಪೀಣ್ಯ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Also Read: Bengaluru biker dies after falling into BWSSB trench