Home ರಾಜಕೀಯ ಏಳು ನೂತನ ಸಚಿವರ ಪಟ್ಟಿ ಪ್ರಕಟಿಸಿದ ಸಿಎಂ ಯಡಿಯೂರಪ್ಪ

ಏಳು ನೂತನ ಸಚಿವರ ಪಟ್ಟಿ ಪ್ರಕಟಿಸಿದ ಸಿಎಂ ಯಡಿಯೂರಪ್ಪ

101
0

ಮುನಿರತ್ನಗಿಲ್ಲ, ಅಬಕಾರಿ ಸಚಿವ ನಾಗೇಶ್ ಗೆ ಕೊಕ್

ಬೆಂಗಳೂರು:

ಉಮೇಶ ಕತ್ತಿ ಸೇರಿದಂತೆ 7 ಜನ ಶಾಸಕರ ಹೆಸರನ್ನು ಸಚಿವ ಸ್ಥಾನದ ಪ್ರಮಾಣವಚನಕ್ಕಾಗಿ ರಾಜಭವನಕ್ಕೆ ಕಳುಹಿಸಿಕೊಡಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಮೇಶ ಕತ್ತಿ, ಎಂ.ಟಿ.ಬಿ ನಾಗರಾಜ್, ಆರ್.ಶಂಕರ್, ಮುರುಗೇಶ ನಿರಾಣಿ, ಸಿ.ಪಿ ಯೋಗೇಶ್ವರ, ಎಸ್.ಅಂಗಾರ, ಅರವಿಂದ ಲಿಂಬಾವಳಿ ಅವರು ಇಂದು ಮಧ್ಯಾಹ್ನ 3.30ರ ಬಳಿಕ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ತಿಳಿಸಿದರು.

ಸಿ.ಪಿಯೋಗೇಶ್ವರ್ ಗೆ ಸ್ಥಾನ ದೊರೆತರೆ, ಮುನಿರತ್ನ ಸಂಪುಟ ಸೇರುವ ಪ್ರಯತ್ನ ವಿಫಲವಾಗಿದೆ. ವರಿಷ್ಠರ ಸೂಚನೆ ಮೇರೆಗೆ ಮುನಿರತ್ನ ಅವರಿಗೆ ಈ ಬಾರಿ ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳುತ್ತಿಲ್ಲ ಎನ್ನಲಾಗಿದೆ.

LEAVE A REPLY

Please enter your comment!
Please enter your name here