Home ಬೆಂಗಳೂರು ನಗರ ರಾಜೇಂದ್ರ ಗೋಖಲೆ ನಿಧನಕ್ಕೆ ಸಿಎಂ ಸಂತಾಪ

ರಾಜೇಂದ್ರ ಗೋಖಲೆ ನಿಧನಕ್ಕೆ ಸಿಎಂ ಸಂತಾಪ

123
0
Karnataka CM condoles death of Rajendra Gokhale

ಬೆಂಗಳೂರು:

ನನ್ನ ಆತ್ಮೀಯ ಮಿತ್ರ ಹಾಗೂ ಒಬ್ಬ ಹಿರಿಯ ಸಂಘಟನಾಕಾರರು ಆದ ರಾಜೇಂದ್ರ ಗೋಖಲೆ ಅವರ ಅಕಾಲಿಕ ಮರಣ ನನಗೆ ಬಹಳ ದೊಡ್ಡ ದುಃಖ ತಂದಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಂಬನಿ ಮಿಡಿದಿದ್ದಾರೆ.

ಗೋವಿಂದ ಕಾರಜೋಳ, ಜಲಸಂಪನ್ಮೂಲ ಸಚಿವರು

ಗೋಖಲೆ ಅವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ಆ ದೇವರು ಅವರ ಕುಟುಂಬಕ್ಕೆ ನೀಡಲಿ. ರಾಜೇಂದ್ರ ಗೋಖಲೆ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹಿರಿಯ ಸ್ವಯಂ ಸೇವಕ ಮತ್ತು ಭಾರತೀಯ ಜನತಾ ಪಾರ್ಟಿಯ ಅಗ್ರಗಣ್ಯ ಸಂಘಟನಾಕಾರರಾಗಿದ್ದ ಶ್ರೀ ರಾಜೇಂದ್ರ ಗೋಖಲೆ ಅವರ ಅಕಾಲಿಕ ಮರಣ ನನಗೆ ತೀವ್ರ ದುಃಖ ತಂದಿದೆ. ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ ಮತ್ತು ಅವರ ಕುಟುಂಬದ ಸದಸ್ಯರಿಗೆ ಮತ್ತು ಅಪಾರ ಕಾರ್ಯಕರ್ತ ಬಂಧುಗಳಿಗೆ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಓಂ ಶಾಂತಿ:

LEAVE A REPLY

Please enter your comment!
Please enter your name here