Home Uncategorized Money Laundering Case; ನೀರವ್ ಮೋದಿಗೆ ಭಾರಿ ಹಿನ್ನಡೆ, ಗಡಿಪಾರು ವಿರುದ್ಧ ಸುಪ್ರೀಂ ಮೆಟ್ಟಿಲೇರಲು ಇಲ್ಲ...

Money Laundering Case; ನೀರವ್ ಮೋದಿಗೆ ಭಾರಿ ಹಿನ್ನಡೆ, ಗಡಿಪಾರು ವಿರುದ್ಧ ಸುಪ್ರೀಂ ಮೆಟ್ಟಿಲೇರಲು ಇಲ್ಲ ಅವಕಾಶ

16
0

ಲಂಡನ್: ಪಂಜಾಬ್ ನ್ಯಾಷನಲ್ ಬ್ಯಾಂಕ್  ವಂಚನೆ ಮತ್ತು ಮನಿ ಲಾಂಡರಿಂಗ್ ಆರೋಪದ ಮೇಲೆ ಲಂಡನ್​ನಲ್ಲಿ ತಲೆಮರಿಸಿಕೊಂಡಿರುವ ಉದ್ಯಮಿ ನೀರವ್ ಮೋದಿಗೆ ಭಾರಿ ಹಿನ್ನಡೆ.  ಭಾರತಕ್ಕೆ ಗಡಿಪಾರು ಮಾಡದಂತೆ  ಸಲ್ಲಿಸಿದ ಮನವಿಯನ್ನು ಇದೀಗ ಯುಕೆ ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ.   ಮಾಡುವಂತೆ  ಭಾರತದ ಸಲ್ಲಿಸಿದ ಮನವಿಯ ವಿರುದ್ಧ ನೀರವ್ ಮೋದಿ ತನ್ನನ್ನು ಗಡಿಪಾರು ಮಾಡಬಾರದು ಎಂಬ ಮನವಿಯನ್ನು ಹೈಕೋರ್ಟ್ ತಿರಸ್ಕರಿಸಿತ್ತು, ಈ ಬಗ್ಗೆ ಸುಪ್ರೀಂಗೆ ಮೇಲ್ಮನವಿ ಸಲ್ಲಿಸಿದ್ದರು, ಇದೀಗ  ಯುಕೆ ಸುಪ್ರೀಂ ಕೋರ್ಟ್‌ ತಿರಸ್ಕರಿಸಿದೆ.  ನೀರವ್ ಮೋದಿಗೆ ಮತ್ತಷ್ಟು ಸಂಕಷ್ಟ ಎದುರಾಗಿದೆ.

ಪಂಜಾಬ್ ನ್ಯಾಷನಲ್ ಬ್ಯಾಂಕ್‌ನಲ್ಲಿ 11,000 ಕೋಟಿ ರೂ. ವಂಚನೆಯಲ್ಲಿ ಭಾಗಿಯಾಗಿರುವ ಬಗ್ಗೆ ಆರೋಪದ ವಿವರಗಳು ಬಹಿರಂಗಗೊಳ್ಳುವ ಮೊದಲು 2018ರಲ್ಲಿ ಭಾರತದಿಂದ ಪಲಾಯನ ಮಾಡಿದ ಗುಜರಾತ್‌ನ 51 ವರ್ಷದ ವಜ್ರದ ಉದ್ಯಮಿ ನೀರವ್ ಮೋದಿ ಮಾನಸಿಕವಾಗಿ ಕುಗ್ಗಿದ್ದಾರೆ. ಹಾಗಾಗಿ ಅವರನ್ನು  ಭಾರತಕ್ಕೆ ಹಸ್ತಾಂತರಿಸಿದರೆ ಆತ್ಮಹತ್ಯೆ ಮಾಡಿಕೊಳ್ಳುವ ಅಪಾಯ ಇದೆ ಎಂದು ಅವರ ಪರ ವಕೀಲರು ವಾದಿಸಿದ್ದರು ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್ ವರದಿ ಮಾಡಿದೆ.

ಅವರ ಮನವಿಯನ್ನು ತಿರಸ್ಕರಿಸಿರುವುದರಿಂದ ಅವರನ್ನು ಈಗ ಭಾರತ ವಿಚಾರಣೆ ಮಾಡಲು ಮತ್ತು ಭಾರತಕ್ಕೆ ಹಸ್ತಂತಾರ ಮಾಡಲು ಯಾವುದೇ ಅಡ್ಡಿಯಿಲ್ಲ ಎಂದು ಹೇಳಲಾಗುತ್ತಿದೆ. ಕಳೆದ ತಿಂಗಳು ನೀರವ್ ಮೋದಿ ಲಂಡನ್ ಹೈಕೋರ್ಟ್‌ನಲ್ಲಿ ತನ್ನ ಮೇಲ್ಮನವಿಯನ್ನು ಹಾಕಿದ್ದರು ಆದರೆ ಕೋರ್ಟ್ ಅವರ ಮನವಿಯನ್ನು  ತಿರಸ್ಕರಿಸಿತ್ತು. ಅನ್ಯಾಯ ಅಥವಾ ದಬ್ಬಾಳಿಕೆಯಾಗಿದೆ ಎಂದು ನಾವು ಒಪ್ಪುವುದಿಲ್ಲ ಎಂದು ಹೈಕೋರ್ಟ್ ಹೇಳಿದೆ. ಆಂಟಿಗುವಾ ಮತ್ತು ಬಾರ್ಬುಡಾದ ಪೌರತ್ವವನ್ನು ಪಡೆದಿರುವ ಅವರ ಚಿಕ್ಕಪ್ಪ ಮೆಹುಲ್ ಚೋಕ್ಸಿ ಕೂಡ PNB ಅನ್ನು ವಂಚಿಸಿದ ಆರೋಪವನ್ನು ಹೊತ್ತಿದ್ದಾರೆ. ಇದೀಗ ಭಾರತಕ್ಕೆ ಅವರು ಅಗತ್ಯ ಇದೆ ಹಾಗೂ ಅವರನ್ನು ಭಾರತಕ್ಕೆ ಒಪ್ಪಿಸುವುದು ಅನಿವಾರ್ಯ ಎಂದು ಕೋರ್ಟ್ ಹೇಳಿದೆ.

ಇದನ್ನು ಓದಿ:ನೀರವ್ ಮೋದಿ ಮೇಲ್ಮನವಿ ತಿರಸ್ಕರಿಸಿದ ಕೋರ್ಟ್; ಭಾರತಕ್ಕೆ ಹಸ್ತಾಂತರಿಸಲು ಆದೇಶ

ಅವರ ವಿರುದ್ಧ ಕಳೆದ ತಿಂಗಳ ಲಂಡನ್ ಹೈಕೋರ್ಟ್ ತೀರ್ಪು ನೀಡಲಾಗಿತ್ತು.  ನಂತರ ನೀರವ್ ಮೋದಿ ಯುಕೆ ಸುಪ್ರೀಂ ಕೋರ್ಟ್​ನಲ್ಲಿ ಮೇಲ್ಮನಿಯನ್ನು ಸಲ್ಲಿಸಿದ್ದರು. ಆದರೆ ಪ್ರಕರಣವು ಸಾಮಾನ್ಯ ಸಾರ್ವಜನಿಕ ಪ್ರಾಮುಖ್ಯತೆಯನ್ನು ಹೊಂದಿದೆ ಎಂದು ಹೈಕೋರ್ಟ್ ಒಪ್ಪಿಕೊಂಡರೆ ಮಾತ್ರ ಅದನ್ನು ನಾವು ಸ್ವೀಕರಿಸಲು ಸಾಧ್ಯ ಎಂದು ಸುಪ್ರೀಂ ಹೇಳಿದೆ. ನೀರವ್ ಮೋದಿಗೆ ಇನ್ನೂ ಒಂದು ಆಯ್ಕೆ ಇದೆ ಯುರೋಪಿಯನ್ ಮಾನವ ಹಕ್ಕುಗಳ ನ್ಯಾಯಾಲಯಕ್ಕೆ ಮನವಿ ಸಲ್ಲಿಸುವುದು. ಮಾರ್ಚ್ 2019 ರಲ್ಲಿ ಬಂಧನಕ್ಕೊಳಗಾದ ನಂತರ ಅವರು ಲಂಡನ್ ಜೈಲಿನಲ್ಲಿದ್ದಾರೆ ಎಂದು ಹೇಳಿದೆ.

ಭಾರತದಲ್ಲಿ, ನೀರವ್ ಮೋದಿ ಕೇಂದ್ರೀಯ ತನಿಖಾ ದಳ ಮತ್ತು ಜಾರಿ ನಿರ್ದೇಶನಾಲಯಕ್ಕೆ ಬೇಕಾಗಿದ್ದಾರೆ. ನೀರವ್ ಮೋದಿ ತಮ್ಮ ಪೂರ್ವ ಉದ್ದೇಶಕ್ಕಾಗಿ ಸಾರ್ವಜನಿಕ ವಲಯದ ಬ್ಯಾಂಕ್ PNB ಯಿಂದ ಸಾಲ ಪಡೆದು, ಪಾವತಿಗಳಿಗೆ ನೀಡಲಾದ ಬ್ಯಾಂಕ್ ಗ್ಯಾರಂಟಿ ಲೆಟರ್ ಆಫ್ ಅಂಡರ್‌ಟೇಕಿಂಗ್ (LoU) ಪಡೆಯುವ ಮೂಲಕ ವ್ಯವಸ್ಥೆಯಲ್ಲಿನ ಲೋಪದೋಷಗಳನ್ನು ಮತ್ತು ನಿಯಂತ್ರಿಸುತ್ತಿದ್ದ ಕೆಲವು ಸಂಸ್ಥೆಗಳು ಬಳಸಿಕೊಂಡಿವೆ ಎಂಬುದು ಅವರ ವಿರುದ್ಧದ ಆರೋಪಗಳ ಸಾರಾಂಶವಾಗಿದೆ ಎಂದು ವರದಿಯಲ್ಲಿ ವಿದೇಶಿ ಬ್ಯಾಂಕುಗಳು ತಿಳಿಸಿದೆ.

ಸರಳವಾಗಿ ಹೇಳುವುದಾದರೆ, ಕಚ್ಚಾ ವಸ್ತುಗಳ ಪೂರೈಕೆದಾರರಿಗೆ ಪಾವತಿಸಲು ಭಾರತೀಯ ಬ್ಯಾಂಕ್‌ಗಳ ವಿದೇಶಿ ಶಾಖೆಗಳಿಂದ ಅಲ್ಪಾವಧಿಯ ಸಾಲಗಳನ್ನು ಸಂಗ್ರಹಿಸಲು ಬ್ಯಾಂಕ್ ಗ್ಯಾರಂಟಿಗಳು ನೀರವ್​ ಮೋದಿಗೆ ಸಹಾಯ ಮಾಡಿವೆ. ನಂತರ ಅವರಿಗೆ ಜಟಿಲ ಮೂಲಕ ಹಣವನ್ನು ವರ್ಗಾಯಿಸಲಾಯಿತು ಎಂದು ಆರೋಪಿಸಲಾಗಿದೆ.

ವಿದೇಶಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

LEAVE A REPLY

Please enter your comment!
Please enter your name here