ಪಕ್ಷ ಘೋಷಣೆಗೂ ಮುನ್ನ ಕುಟುಂಬ ಸದಸ್ಯರ ಭೇಟಿ
ಬೆಂಗಳೂರು:
ಇದೇ ತಿಂಗಳ 31ರಂದು ರಾಜಕೀಯ ಪಕ್ಷ ಘೋಷಿಸಲಿರುವ ಸೂಪರ್ ಸ್ಟಾರ್ ರಜನಿಕಾಂತ್, ಹಿರಿಯ ಸೋದರ ಸೇರಿದಂತೆ ಕುಟುಂಬ ಸದಸ್ಯರನ್ನು ಭೇಟಿ ಮಾಡಿ ಆಶೀರ್ವಾದ ಪಡೆದಿದ್ದಾರೆ.
ಬೆಂಗಳೂರಿನಲ್ಲಿರುವ ಸಹೋದರ ಸತ್ಯನಾರಾಯಣ ರಾವ್ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆಯುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
![ರಾಜ್ಯ ರಾಜಧಾನಿಯಲ್ಲಿ ತಲೈವಾ 1 WhatsApp Image 2020 12 07 at 08.05.44](https://kannada.thebengalurulive.com/wp-content/uploads/2020/12/WhatsApp-Image-2020-12-07-at-08.05.44.jpeg)
ಕಳೆದ ವರ್ಷ ಅನಾರೋಗ್ಯದಿಂದ ಸಹೋದರ ಸತ್ಯನಾರಾಯಣ ರಾವ್ ಬೆಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದರು. ಆ ಸಮಯದಲ್ಲಿ ಅವರನ್ನು ನೋಡಲು ರಜನಿಕಾಂತ್ ಬೆಂಗಳೂರಿನ ಆಸ್ಪತ್ರೆಗೆ ಭೇಟಿ ನೀಡಿ ಯೋಗಕ್ಷೇಮ ವಿಚಾರಿಸಿದ್ದರು.
ರಜನಿಕಾಂತ್ ಈಗ ತಮ್ಮದೇ ರಾಜಕೀಯ ಪಕ್ಷ ಸ್ಥಾಪನೆ ಮಾಡುತ್ತಿದ್ದು, ಪಕ್ಷದ ಲಾಂಛನ ಏನಿರುತ್ತದೆ ಎಂಬ ಕುತೂಹಲ ಕೆರಳಿಸಿದೆ.