ಬೆಂಗಳೂರು:
ಅಕ್ರಮ ಆಸ್ತಿ ದೂರು,ಮಾಹಿತಿಗೆ ಸಂಬಂಧಪಟ್ಟಂತೆ ಎಸಿಬಿ ಅಧಿಕಾರಿಗಳು ಕೋಲಾರ, ಮಂಗಳೂರು, ಉಡುಪಿ, ಮಂಡ್ಯ, ಬಳ್ಳಾರಿ ಬೆಂಗಳೂರು ಸೇರಿದಂತೆ 40 ಕಡೆ 9 ಸರ್ಕಾರಿ ಅಧಿಕಾರಿಗಳ ಮನೆ ಮತ್ತು ಕಚೇರಿಗಳ ಮೇಲೆ ಬೆಳಿಗ್ಗೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಬಿಸಿ ಮುಟ್ಟಿಸಿ, ಶಾಕ್ ಕೊಟ್ಟಿದ್ದಾರೆ.
ಅಕ್ರಮ ಆಸ್ತಿ ಗಳಿಕೆ ಸಂಬಂಧ ಮಾಹಿತಿ ಆಧರಿಸಿ ಬೆಳಗ್ಗೆ ವಿವಿಧ ಜಿಲ್ಲೆಗಳಲ್ಲಿ ದಾಳಿ ನಡೆಸಿ ಹಲವು ಸಂಬಂಧಿಸಿದಂತೆ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ.
ಅಧಿಕಾರಿಗಳ ವಿವರ:
ಆರ್.ಪಿ. ಕುಲಕರ್ಣಿ, ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ ಮುಖ್ಯ ಯೋಜನಾಧಿಕಾರಿ
ವೆಂಕಟೇಶ್, ಮಂಡ್ಯ ಉಪ ಅರಣ್ಯ ಸಂರಕ್ಷಣಾಧಿಕಾರಿ
ಜಿ. ಶ್ರೀಧರ್, ಮಂಗಳೂರು ಜಿಲ್ಲಾಧಿಕಾರಿ ಕಚೇರಿಯ ನಗರಾಭಿವೃದ್ಧಿ ಕೋಶದ ಕಾರ್ಯನಿರ್ವಾಹಕ ಎಂಜಿನಿಯರ್
ಕೃಷ್ಣನ್ ಎಸ್. ಹೆಬ್ಬೂರ್, ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮದ ಉಡುಪಿ ವಿಭಾಗದ ಕಾರ್ಯನಿರ್ವಾಹಕ ಎಂಜಿಜಿಯರ್
ಎಚ್.ಆರ್. ಕೃಷ್ಣಪ್ಪ, ಕೋಲಾರದ ನಗರಾಭಿವೃದ್ಧಿ ಯೋಜನಾ ಸಹಾಯಕ ನಿರ್ದೇಶಕ
ಸುರೇಶ್ ಮೊಹ್ರೆ, ಬೀದರ್ ಪಂಚಾಯತ್ ರಾಜ್ ಎಂಜಿನಿಯರಿಂಗ್ ವಿಭಾಗದ ಕಿರಿಯ ಎಂಜಿನಿಯರ್
ಸಿದ್ದರಾಮ ಮಲ್ಲಿಕಾರ್ಜುನ್, ಹೆಸ್ಕಾಂನ ವಿಜಯಪುರ ನಗರ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್
ಎ. ಕೃಷ್ಣಮೂರ್ತಿ, ಬೆಂಗಳೂರಿನ ಕೋರಮಂಗಲ ಪ್ರಾದೇಶಿಕ ಸಾರಿಗೆ ಕಚೇರಿಯ ಹಿರಿಯ ಮೋಟಾರು ವಾಹನ ನಿರೀಕ್ಷಕ
ಎ.ಎನ್. ವಿಜಯಕುಮಾರ್, ಬಳ್ಳಾರಿಯ ವಿದ್ಯುತ್ ಇನ್ಸ್ಪೆಕ್ಟರ್