Home ಅಪರಾಧ ಬಿಬಿಎಂಪಿ ಎಡಿಟಿಪಿ ದೇವೇಂದ್ರಪ್ಪ 20 ಲಕ್ಷ ರೂ ಲಂಚ ಪಡೆಯುವಾಗ ಬಂಧನ

ಬಿಬಿಎಂಪಿ ಎಡಿಟಿಪಿ ದೇವೇಂದ್ರಪ್ಪ 20 ಲಕ್ಷ ರೂ ಲಂಚ ಪಡೆಯುವಾಗ ಬಂಧನ

181
0

ಬೊಮ್ಮನಹಳ್ಳಿಯಲ್ಲಿ ಕಟ್ಟಡಕ್ಕೆ ಸ್ವಾಧೀನಾನುಭವ ಪತ್ರ  ನೀಡಲು  40 ಲಕ್ಷ ರೂ. ಬೇಡಿಕೆ ಮೇರಿಗೆ ಎಸಿಬಿ ಟ್ರಾಪ್

ಬೆಂಗಳೂರು:

ಒಂದು ಪ್ರಮುಖ ಬೆಳವಣಿಗೆಯಲ್ಲಿ, ಭ್ರಷ್ಟಾಚಾರ ನಿಗ್ರಹ ದಳವು (ಎಸಿಬಿ) ಬೊಮ್ಮನಹಳ್ಳಿ ವಲಯ ಸಹಾಯಕ ನಿರ್ದೇಶಕ ನಗರ ಯೋಜನೆ (ಎಡಿಟಿಪಿ) ದೇವೇಂದ್ರಪ್ಪ ಅವರನ್ನು 20 ಲಕ್ಷ ರೂಪಾಯಿ ಲಂಚ ಪಡೆಯುವಾಗ ಯಶಸ್ವಿಯಾಗಿ ಸಿಕ್ಕಿಹಾಕಿಕೊಂಡಿದೆ.

ರಾಜೇಶ್ ಎಸ್ ಎಂಬುವರು ಎಸಿಬಿಗೆ ದೂರು ನೀಡಿದ್ದರು.  ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಕೇಡರ್ ಆಗಿರುವ ದೇವೇಂದ್ರಪ್ಪ ಅವರು ಬಿಬಿಎಂಪಿ ಬೊಮ್ಮನಹಳ್ಳಿ ವಲಯದ ನಗರ ಯೋಜನೆಯ ಶಾಖೆಯಲ್ಲಿ ನಿಯೋಜಿಸಲ್ಪಟ್ಟರು.

ಶುಕ್ರವಾರ ಸಂಜೆ ಮೆಜೆಸ್ಟಿಕ್ ಅಮರ್ ಹೋಟೆಲ್ ಬಳಿಯ ಟೂರಿಸ್ಟ್ ಅಂಗಡಿಯೊಂದಕ್ಕೆ ದೇವೇಂದ್ರಪ್ಪ ಆಗಮಿಸುತ್ತಿದ್ದಾಗ ಎಸಿಬಿ ಬಲೆ ಹಾಕಿದೆ.

ಬೊಮ್ಮನಹಳ್ಳಿ ಪ್ರದೇಶದ ಕಟ್ಟಡವೊಂದಕ್ಕೆ ಸ್ವಾಧೀನಾನುಭವ ಪತ್ರ ನೀಡಲು 40 ಲಕ್ಷ ರೂ.ಗಳನ್ನು ಬೇಡಿಕೆ ಇಡಲಾಗಿತ್ತು ಎಂದು ಮೂಲಗಳು ತಿಳಿಸಿವೆ.  ದೇವೇಂದ್ರಪ್ಪನನ್ನು 20 ಲಕ್ಷ ರೂ.  ಪಡೆದುಕೊಳ್ಳುವಾಗ ಬಂಧಿಸಲಾಗಿದ.

ಭ್ರಷ್ಟಾಚಾರ ನಿಗ್ರಹ ದಳ ಅವರು ನೀಡಿರುವ ಪತ್ರಿಕಾ ಪ್ರಕಟಣೆ ಅನ್ವಯ ದಿನಾಂಕ : 05/02/2021 ಆಗಿ ಹಾಲಿ ಬೆಂಗಳೂರು ನಗರದ ನಿವಾಸಿಯೊಬ್ಬರು ಸಿಕ್ಕೀಸ್ ಬ್ರಿವರೀಸ್ ಖಾಸಗಿ ಕಂಪನಿಯಲ್ಲಿ ಮೇನೇಜರ್ ಕೆಲಸ ನಿರ್ವಹಿಸುತ್ತಿದ್ದು ಬೆಂಗಳೂರು ನಗರದ ಹುಳಿಮಾವು ಬಿಬಿಎಂಪಿ ವ್ಯಾಪ್ತಿಯಲ್ಲಿ ಖಾಸಗಿಯವರಿಗೆ ಸೇರಿದ ಸ್ವತ್ತಿನಲ್ಲಿ ಕಟ್ಟಡ ನಿರ್ಮಾಣ ಮಾಡಿ ಸಿಕ್ಕೀಸ್ ಚಿವರೀಸ್ ಘಟಕವನ್ನು ಪ್ರಾರಂಭಿಸಲು ಬಿಬಿಎಂಪಿ ಬೊಮ್ಮನಹಳ್ಳಿ ವಲಯದ ಎಡಿಟಿಪಿ ರವರ ಕಚೇರಿಗೆ ನಕ್ಷೆ ಮಂಜೂರಾತಿ ಅರ್ಜಿ ಸಲ್ಲಿಸಿ ಮಂಜೂರಾತಿ ಪಡೆದು ಸದರಿ ನಿವೇಶನದಲ್ಲಿ ಕಟ್ಟಡ ನಿರ್ಮಣ ಕೈಗೊಂಡು ಕಟ್ಟಡ ನಿರ್ಮಾಣ ಕಾಮಗಾರಿಯನ್ನು ಪೂರ್ಣಗೊಳಿಸಿರುತ್ತದೆ.

ACB trap BBMP ADTP Devendrappa

ಪೂರ್ಣಗೊಂಡ ಕಟ್ಟಡ ಕಾಮಗಾರಿಗೆ ಓಸಿ (ಆಕ್ಯುಪೆನ್ಸೀ ಸರ್ಟಿಫಿಕೇಟ್) ಅನ್ನು ಪಡೆಯಬೇಕಿದ್ದುದರಿಂದ , ಎಡಿಟಿಪಿ, ಬೊಮ್ಮನಹಳ್ಳಿ ವಲಯ , ಬಿಬಿಎಂಪಿ , ಬೆಂಗಳೂರು ರವರ ಕಚೇರಿಗೆ ಅರ್ಜಿ ಸಲ್ಲಿಸಿ ನಿರ್ಮಾಣವಾಗಿರುವ ಕಟ್ಟಡಕ್ಕೆ ಓಸಿ ನೀಡುವಂತೆ ಕೋರಿದ್ದು ಬಿಬಿಎಂಪಿ ಬೊಮ್ಮನಹಳ್ಳಿ ವಲಯ ಕಚೇರಿಯಲ್ಲಿದ್ದ ಎಡಿಟಿಪಿ ಶ್ರೀ ದೇವೇಂದ್ರಪ್ಪ ರವರ ಬಳಿ ಮಾತನಾಡಲಾಗಿ ಅವರು ಓ.ಸಿ ನೀಡಲು 40 ಲಕ್ಷ ರೂಗಳ ಲಂಚದ ಹಣಕ್ಕಾಗಿ ಒತ್ತಾಯಿಸಿರುತ್ತಾರೆ.

ದೂರುದಾರರು ಈ ಬಗ್ಗೆ ಭ್ರಷ್ಟಾಚಾರ ನಿಗ್ರಹ ದಳ ಬೆಂಗಳೂರು ನಗರ ಠಾಣೆಗೆ ನೀಡಿದ ದೂರಿನ ಮೇರೆಗೆ ಈ ದಿನ ದಿನಾಂಕ : 05.02.2021 ರಂದು ಟ್ರಾಪ್ ಕಾರ್ಯಾಚರಣೆ ಕೈಗೊಳ್ಳಲಾಗಿ ದೂರುದಾರರಿಂದ ಶ್ರೀ ದೇವೇಂದ್ರಪ್ಪ ಇವರು ದೂರುದಾರರಿಂದ 20 ಲಕ್ಷ ಲಂಚದ ಹಣವನ್ನು ಸ್ವೀಕರಿಸುತ್ತಿದ್ದ ಸಂದರ್ಭದಲ್ಲಿ ಭ್ರಷ್ಟಾಚಾರ ನಿಗ್ರಹ ದಳ ಅಧಿಕಾರಿಗಳು ನಡೆಸಿದ ಕಾರ್ಯಾಚರಣೆಯಲ್ಲಿ ಸಿಕ್ಕಿಬಿದ್ದಿರುತ್ತಾರೆ .

ಶ್ರೀ ದೇವೇಂದ್ರಪ್ಪಇವರನ್ನು ದಸ್ತಗಿರಿ ಮಾಡಿ ಲಂಚದ ಹಣವನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಕರಣದ ತನಿಖೆ ಮುಂದುವರೆದಿದೆ.

LEAVE A REPLY

Please enter your comment!
Please enter your name here